ಚಿತ್ರದುರ್ಗ: ಸಿನಿಮಾ ರೀತಿಯಲ್ಲಿ ದರ್ಶನ್ ಗ್ಯಾಂಗ್ ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನು ಕಿಡ್ಯಾಪ್ ಮಾಡಿರುವ ಸಿಸಿಟಿವಿ ದೃಶ್ಯಗಳು ಈಗ ವೈರಲ್ ಆಗಿದೆ. ಈ ನಡುವೆ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ್ದು, ತನಿಖೆಯ ಮುಂದುವರೆದ ಭಾಗವಾಗಿ ಹೆಚ್ಚಿನ ಮಾಹಿತಿಯನ್ನು ಕೂಡ ಕಲೆ ಹಾಕುತ್ತಿದ್ದಾವೆ.
ಜೂನ್ 8 ರ ಬೆಳಗ್ಗೆ 9:48ರ ವೇಳೆಗೆ ಸ್ಕೂಟಿಯಲ್ಲಿ ರೇಣುಕಾಸ್ವಾಮಿ ತೆರಳಿದ್ದರು. ಈ ವೇಳೆ ಸ್ಕಾರ್ಪಿಯೋ ಕಾರಿನಲ್ಲಿ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಘು ಮತ್ತು ಇತರರು ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ನಂಬಿಸಿ ಮೊದಲು ರಿಕ್ಷಾದಲ್ಲಿ ಕೂರಿಸಿ ಕುಂಚಿಗನಾಳ್ ಬಳಿ ಕಾರ್ಗೆ ಶಿಫ್ಟ್ ಮಾಡುವ ಮೂಲಕ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿಯ ಕೊನೆ ಕ್ಷಣ ಎನ್ನುವುದನ್ನು ನೋಡುವುದಾದ್ರೆ ಅದರ ವಿವರ ಹೀಗಿದೆ.
ಜೂ.8 : ಬೆಳಗ್ಗೆ 9:48 – ಚಿತ್ರದುರ್ಗ ಹೈವೇಗೆ ರೇಣುಕಾ ಆಗಮನ
ಜೂ.8: ಬೆಳಗ್ಗೆ 10:33 – ರೇಣುಕಾ ಸ್ವಾಮಿ ಕಿಡ್ನ್ಯಾಪ್ – (ಆಟೋದಲ್ಲಿ ಕರೆದೊಯ್ದ ಆರೋಪಿಗಳು)
ಜೂ.8: ಬೆಳಗ್ಗೆ 10:56 – ಬೆಂಗಳೂರು ಕಡೆಗೆ ರೇಣುಕಾ – ಕಾರಿನಲ್ಲಿ ಕರೆದೊಯ್ದ ಜಗ್ಗ, ರಾಘು, ಅನು
ಜೂ.8: ಮಧ್ಯಾಹ್ನ 1:15 – ತುಮಕೂರಿಗೆ ಆಗಮನ – ಆಹಾರ ಸೇವಿಸಿದ ಆರೋಪಿಗಳು
ಜೂ.8: ಮಧ್ಯಾಹ್ನ 2:30 – ಆರ್.ಆರ್.ನಗರ ಶೆಡ್ಗೆ ಬಂದ ಕಾರು
ಜೂ.8 : ಮಧ್ಯಾಹ್ನ 3:30 – ಶೆಡ್ಗೆ ದರ್ಶನ್ ಆಗಮನ
ಜೂ.8: ಮಧ್ಯಾಹ್ನ 3:45 – ದರ್ಶನ್ ಮತ್ತು ಗ್ಯಾಂಗ್ನಿಂದ ಹಲ್ಲೆ
ಜೂ.8: ಸಂಜೆ 6:00 – ತೀವ್ರ ಅಸ್ವಸ್ಥರಾಗಿ ರೇಣುಕಾ ಸಾವು
ಜೂ.8 : ರಾತ್ರಿ 8:00 – ಶವ ಸಾಗಾಟಕ್ಕೆ ಯತ್ನ – ಶವ ಸಾಗಾಟಕ್ಕೆ ಒಪ್ಪದ ಎ8 ಆರೋಪಿ ರವಿ
ಜೂ.9 : ಮುಂಜಾನೆ 3:35 – ಶೆಡ್ನಿಂದ ಶವ ಸಾಗಾಟ
ಜೂ.9 : ಮುಂಜಾನೆ 3:45 – ಸುಮ್ಮನಹಳ್ಳಿ ಬಳಿ ಶವ ಎಸೆದ ಆರೋಪಿಗಳು