Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

14/08/2025 9:12 AM

ಗ್ರಾಹಕರಿಗೆ ಗುಡ್ ನ್ಯೂಸ್ : ಅಕ್ಟೋಬರ್ 4ರಿಂದ ಕೆಲವೇ ಗಂಟೆಗಳಲ್ಲಿ ಚೆಕ್ ವಿಲೇವಾರಿ : RBI

14/08/2025 9:11 AM

SHOCKING : ವಾಹನ ತಪಾಸಣೆ ವೇಳೆ ಮಹಿಳೆಯನ್ನು ಎಳೆದಾಡಿ `ಪೊಲೀಸರ’ ಅನುಚಿತ ವರ್ತನೆ : ವಿಡಿಯೋ ವೈರಲ್ | WATCH VIDEO

14/08/2025 9:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಂಸದ ಪ್ರತಾಪ್ ಸಿಂಹ’ ವಿರುದ್ಧ ಸುದ್ದಿಗೋಷ್ಠಿಗೆ ‘ಎಂ.ಲಕ್ಷ್ಮಣ್’ಗೆ ವಿಧಿಸಿದ್ದ ನಿರ್ಬಂಧ ‘ಕೋರ್ಟ್ ತೆರವು’
KARNATAKA

‘ಸಂಸದ ಪ್ರತಾಪ್ ಸಿಂಹ’ ವಿರುದ್ಧ ಸುದ್ದಿಗೋಷ್ಠಿಗೆ ‘ಎಂ.ಲಕ್ಷ್ಮಣ್’ಗೆ ವಿಧಿಸಿದ್ದ ನಿರ್ಬಂಧ ‘ಕೋರ್ಟ್ ತೆರವು’

By kannadanewsnow0908/03/2024 3:46 PM

ಬೆಂಗಳೂರು:ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿರುವವರು ಟೀಕೆಯನ್ನು ಮುಕ್ತವಾಗಿ ಸ್ವೀಕರಿಸಬೇಕು. ಪ್ರತಿಬಂಧಕಾದೇಶ ಮೂಲಕ ವ್ಯಕ್ತಿಯೊಬ್ಬರನ್ನು ಮಾಧ್ಯಮಗಳ ಮುಂದೆ ಮಾತನಾಡದಂತೆ ತಡೆಯಲಾಗದು” ಎಂದಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್‌ ಅವರು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಮಾಧ್ಯಮ ಗೋಷ್ಠಿ ನಡೆಸದಂತೆ ನಿರ್ಬಂಧಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ತೆರವುಗೊಳಿಸಿದೆ.

ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್‌ ಸಿಂಹ ಮತ್ತು ಲಕ್ಷ್ಮಣ್‌ ಅವರು ಸಲ್ಲಿಸಿದ್ದ ಮಧ್ಯಪ್ರವೇಶ ಅರ್ಜಿಗಳ ವಿಚಾರಣೆ ನಡೆಸಿದ ಬೆಂಗಳೂರಿನ 18ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎ ಹರೀಶ ಅವರು ಸಾಮಾನ್ಯ ಆದೇಶ (ಕಾಮನ್‌ ಆರ್ಡರ್‌) ಮಾಡಿದ್ದಾರೆ.

ಲಕ್ಷ್ಮಣ್‌ ಅಥವಾ ಅವರ ಬೆಂಬಲಿಗರು ತಮ್ಮ ವಿರುದ್ಧ ಮಾಧ್ಯಮಗೋಷ್ಠಿ ನಡೆಸದಂತೆ ಹಾಗೂ ಯಾವುದೇ ಮಾಹಿತಿಯನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದಕ್ಕೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ಪ್ರತಾಪ್‌ ಸಿಂಹ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾ ಮಾಡಲಾಗಿದೆ. ಅಂತೆಯೇ, 2024ರ ಜನವರಿ 29ರಂದು ನ್ಯಾಯಾಲಯವು ಮಾಡಿರುವ ಏಕಪಕ್ಷೀಯ ಮಧ್ಯಂತರ ಆದೇಶ ತೆರವು ಕೋರಿ ಲಕ್ಷ್ಮಣ್‌ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಫಿರ್ಯಾದಿ ಪ್ರತಾಪ್‌ ಸಿಂಹ ವರ್ಚಸ್ಸಿಗೆ ಹಾನಿ ಮಾಡಬಹುದು ಎಂಬ ಮಾತ್ರಕ್ಕೆ ಪ್ರಜೆಯೊಬ್ಬರು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಮಾಧ್ಯಮದ ಮುಂದೆ ಬರದಂತೆ ಪ್ರತಿಬಂಧಕಾದೇಶ ಮಾಡಬಾರದು ಎಂಬ ದೃಷ್ಟಿಕೋನವನ್ನು ನಾನು ಹೊಂದಿದ್ದೇನೆ. ಸಾಮಾಜಿಕ ಅಥವಾ ರಾಜಕೀಯ ಕ್ಷೇತ್ರದಲ್ಲಿರುವವರ ಬದುಕಿನಲ್ಲಿ ಇದು ಸತ್ಯವಾಗಿದ್ದು, ವಿರೋಧಿ ಪಕ್ಷದ ನಾಯಕರ ವಿರುದ್ಧ ಮಾಧ್ಯಮ ಗೋಷ್ಠಿ ನಡೆಸದಂತೆ ನಿರ್ಬಂಧಿಸುವುದು ಅವರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಾಗ ಪ್ರತಿಯೊಬ್ಬ ವ್ಯಕ್ತಿಯೂ ಮಿತಿ ದಾಟದಂತೆ ಎಚ್ಚರಿಕೆಯಿಂದ ಇರಬೇಕಾದ ಜವಾಬ್ದಾರಿ ಹೊಂದಿರುತ್ತಾರೆ. ಆದರೆ, ಮೂಲಭೂತವಾಗಿ ವ್ಯಕ್ತಿಯೊಬ್ಬರನ್ನು ಮಾಧ್ಯಮಗಳ ಮುಂದೆ ಮಾತನಾಡದಂತೆ ಪ್ರತಿಬಂಧಕಾದೇಶ ಮಾಡುವ ಮೂಲಕ ಅವರ ಧ್ವನಿ ಅಡಗಿಸಲಾಗದು. ಆ ವ್ಯಕ್ತಿ ನೀಡಿದ ಹೇಳಿಕೆಯು ಮಾನಹಾನಿ/ಆಕ್ಷೇಪಾರ್ಹವಾಗಿದ್ದರೆ ಹಾನಿ ಕೋರಿ ಸಿವಿಲ್‌ ಅಥವಾ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಕಾನೂನಿನಲ್ಲಿ ಅವಕಾಶವಿದೆ. ಈ ನಿಲುವು ಅಭಿವ್ಯಕ್ತಿ ಸ್ವಾತಂತ್ರ್ಯ ತತ್ವ ಎತ್ತಿ ಹಿಡಿಯುವುದರ ಮಹತ್ವ ಸಾರುತ್ತದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರತಾಪ್‌ ಸಿಂಹ ಅವರು ತಮ್ಮ ಬೆಂಬಲಿಗರ ಮೂಲಕ ಭ್ರಷ್ಟಾಚಾರದ ಹಣವನ್ನು ಉದ್ಯಮದಲ್ಲಿ ತೊಡಗಿಸಿ ಅಕ್ರಮ ಸಂಪಾದನೆ ಮಾಡಿದ್ದಾರೆ ಎಂದು ಲಕ್ಷ್ಮಣ್‌ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿರುವವರು ಇಂಥ ಟೀಕೆಗಳಿಗೆ ಮುಕ್ತವಾಗಿರಬೇಕು. ಆರೋಪಕ್ಕೆ ಸಾಕ್ಷಿ ಇಲ್ಲದಿದ್ದರೆ ಅದರಿಂದ ಬಾಧಿತರಾದವರು ಮಾನಹಾನಿ ದಾವೆ ಅಥವಾ ಮಾನನಷ್ಟ ದಾವೆ ಹೂಡಬಹುದು. ನನ್ನ ವಿನಮ್ರ ಅಭಿಪ್ರಾಯದ ಪ್ರಕಾರ ಮಾಧ್ಯಮ ಗೋಷ್ಠಿ ನಡೆಸದಂತೆ ನಿರ್ಬಂಧಿಸಲಾಗದು. ಫಿರ್ಯಾದಿಯ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದರೆ ಎಂಬ ಏಕೈಕ ಕಾರಣ ನೀಡಿ ಅವರ ಮೂಲಭೂತ ಹಕ್ಕು ಕಸಿಯಲಾಗದು. ಈಗಾಗಲೇ ಸಾರ್ವಜನಿಕವಾಗಿರುವ ಮಾನಹಾನಿ ಹೇಳಿಕೆಯನ್ನು ಮತ್ತೆ ಪ್ರಸಾರ ಮಾಡದಂತೆ ಪ್ರತಿವಾದಿಗೆ ನಿರ್ಬಂಧಿಸುವ ಮೂಲಕ ಫಿರ್ಯಾದಿಯ ಘನತೆಯನ್ನು ಸಿವಿಲ್‌ ನ್ಯಾಯಾಲಯ ರಕ್ಷಿಸಬಹುದು. ಹಾಲಿ ಪ್ರಕರಣದಲ್ಲಿ ಫಿರ್ಯಾದಿ ಪ್ರತಾಪ್‌ ಸಿಂಹ ಅವರು ಲಕ್ಷ್ಮಣ್‌ ಅವರನ್ನು ಮಾಧ್ಯಮ ಗೋಷ್ಠಿ ನಡೆಸದಂತೆ ನಿರ್ಬಂಧಿಸಲು ಸೂಕ್ತ ಆಧಾರಗಳನ್ನು ಒದಗಿಸಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಸ್ವತಂತ್ರ ದೇಶದಲ್ಲಿ ತಮ್ಮ ಪ್ರತಿನಿಧಿಯ ಬಗ್ಗೆ ತಿಳಿದುಕೊಳ್ಳುವುದು ಜನರ ಮೂಲಭೂತ ಹಕ್ಕಾಗಿದೆ. ಈ ನೆಲೆಯಲ್ಲಿ ಫಿರ್ಯಾದಿ ಪ್ರತಾಪ್‌ ಸಿಂಹ ಅವರು ಪ್ರತಿಬಂಧಕಾದೇಶ ಪಡೆಯಲು ಮೇಲ್ನೋಟಕ್ಕೆ ಪ್ರಕರಣವಿದೆ ಎಂಬುದನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ. ವಿಶೇಷವಾಗಿ ಸಾರ್ವಜನಿಕ ಕಳಕಳಿಯ ವಿಚಾರಗಳಾದ ಚುನಾಯಿತ ಪ್ರತಿನಿಧಿಗಳ ನಡತೆಯ ಕುರಿತಾದ ಪ್ರಕರಣಗಳ ಆರೋಪಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರುವ ಹಿನ್ನೆಲೆಯಲ್ಲಿ ವಿರೋಧಿ ಅಭಿಪ್ರಾಯದ ಅಭಿವ್ಯಕ್ತಿ ನಿರ್ಬಂಧಿಸಲು ಸೂಕ್ತವಾದ ಆಧಾರಗಳನ್ನು ನ್ಯಾಯಾಲಯ ಕಂಡಿಲ್ಲ. ಹೀಗಾಗಿ, ಪ್ರತಾಪ್‌ ಸಿಂಹ ಅವರ ಕೋರಿಕೆಯನ್ನು ತಿರಸ್ಕರಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಗಮನಿಸಿ: KEAಯಿಂದ ‘1000 ಗ್ರಾಮ ಆಡಳಿತಾಧಿಕಾರಿ ಹುದ್ದೆ’ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡಿಕೆ

BREAKING:ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ‘ಸುಧಾಮೂರ್ತಿ’ ನಾಮನಿರ್ದೇಶನ

Share. Facebook Twitter LinkedIn WhatsApp Email

Related Posts

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

14/08/2025 9:12 AM1 Min Read

BREAKING : `ನ್ಯಾಯ ಸಿಕ್ಕೇ ಸಿಗುತ್ತದೆ’ : ಸುಪ್ರೀಂಕೋರ್ಟ್ ಆದೇಶಕ್ಕೂ ಮುನ್ನ `ಪವಿತ್ರಾ ಗೌಡ’ ಪೋಸ್ಟ್ ವೈರಲ್ .!

14/08/2025 8:47 AM1 Min Read

ರಾಜ್ಯ ಸರ್ಕಾರದಿಂದ ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಆಸ್ತಿ ನೋಂದಣಿಗೆ `ಡಿಜಿಟಲ್ ಸಹಿ’ ಕಡ್ಡಾಯ.!

14/08/2025 8:38 AM1 Min Read
Recent News

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

14/08/2025 9:12 AM

ಗ್ರಾಹಕರಿಗೆ ಗುಡ್ ನ್ಯೂಸ್ : ಅಕ್ಟೋಬರ್ 4ರಿಂದ ಕೆಲವೇ ಗಂಟೆಗಳಲ್ಲಿ ಚೆಕ್ ವಿಲೇವಾರಿ : RBI

14/08/2025 9:11 AM

SHOCKING : ವಾಹನ ತಪಾಸಣೆ ವೇಳೆ ಮಹಿಳೆಯನ್ನು ಎಳೆದಾಡಿ `ಪೊಲೀಸರ’ ಅನುಚಿತ ವರ್ತನೆ : ವಿಡಿಯೋ ವೈರಲ್ | WATCH VIDEO

14/08/2025 9:07 AM

ಭಾರತ-ಪಾಕ್ ಸಂಬಂಧ ಬದಲಾಗಿಲ್ಲ: ಅಮೇರಿಕಾ | India -Pak

14/08/2025 9:02 AM
State News
KARNATAKA

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

By kannadanewsnow5714/08/2025 9:12 AM KARNATAKA 1 Min Read

ಬೆಂಗಳೂರು : ರಾಜ್ಯಾದ್ಯಂತ ಮದ್ಯ ಹಾಗೂ ಬಿಯರ್ ಮಾರಾಟ ಕುಸಿತವಾಗಿದ್ದು, ಅಬಕಾರಿ ಇಲಾಖೆ ಎಂಆರ್ ಪಿ ದರ ಮಾರಾಟದ ಬಗ್ಗೆ…

BREAKING : `ನ್ಯಾಯ ಸಿಕ್ಕೇ ಸಿಗುತ್ತದೆ’ : ಸುಪ್ರೀಂಕೋರ್ಟ್ ಆದೇಶಕ್ಕೂ ಮುನ್ನ `ಪವಿತ್ರಾ ಗೌಡ’ ಪೋಸ್ಟ್ ವೈರಲ್ .!

14/08/2025 8:47 AM

ರಾಜ್ಯ ಸರ್ಕಾರದಿಂದ ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಆಸ್ತಿ ನೋಂದಣಿಗೆ `ಡಿಜಿಟಲ್ ಸಹಿ’ ಕಡ್ಡಾಯ.!

14/08/2025 8:38 AM

ರಾಜ್ಯ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಔಷಧ, ರಾಸಾಯನಿಕಗಳ ದಾಸ್ತಾನು `ಇ-ತಂತ್ರಾಂಶದಲ್ಲಿ ನಿರ್ವಹಣೆ ಕಡ್ಡಾಯ : ಆರೋಗ್ಯ ಇಲಾಖೆ ಆದೇಶ

14/08/2025 8:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.