Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು RSS ವಿಷಯ ಕೆದಕಿದ್ದಾರೆ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ಧಾಳಿ

25/10/2025 4:25 PM

ಕಾಂಗ್ರೆಸ್ಸಿಗರು ಕೆಂಪೇಗೌಡರ ಕನಸನ್ನು 5 ತುಂಡು ಮಾಡಿದ್ದಾರೆ: ಛಲವಾದಿ ನಾರಾಯಣಸ್ವಾಮಿ

25/10/2025 4:18 PM

ರಾಜ್ಯದ ಜನತೆ ಗಮನಕ್ಕೆ: ಅ.27ರಿಂದ 28ರ ಬೆಳಗ್ಗೆ 11ರವರೆಗೆ ‘ಎಸ್ಕಾಂ ಆನ್ ಲೈನ್ ಸೇವೆ’ ಅಲಭ್ಯ

25/10/2025 4:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಂಗ್ರೆಸ್ಸಿಗರು ಕೆಂಪೇಗೌಡರ ಕನಸನ್ನು 5 ತುಂಡು ಮಾಡಿದ್ದಾರೆ: ಛಲವಾದಿ ನಾರಾಯಣಸ್ವಾಮಿ
KARNATAKA

ಕಾಂಗ್ರೆಸ್ಸಿಗರು ಕೆಂಪೇಗೌಡರ ಕನಸನ್ನು 5 ತುಂಡು ಮಾಡಿದ್ದಾರೆ: ಛಲವಾದಿ ನಾರಾಯಣಸ್ವಾಮಿ

By kannadanewsnow0925/10/2025 4:18 PM

ಬೆಂಗಳೂರು: ಕಾಂಗ್ರೆಸ್ಸಿಗರು ಕೆಂಪೇಗೌಡರ ಕನಸನ್ನು 5 ತುಂಡು ಮಾಡಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದ್ದಾರೆ. ಈಗ ಇದು ಒಂದು ಬೆಂಗಳೂರಲ್ಲ; 5 ಬೆಂಗಳೂರು ಎಂದು ಟೀಕಿಸಿದರು.

ಜಿಬಿಎ (ಗ್ರೇಟರ್ ಬೆಂಗಳೂರು) ಚುನಾವಣೆ ತಯಾರಿ ಸಂಬಂಧ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರಿನ ಅಮರ್ ಕನ್ವೆನ್ಷನ್ ಸಭಾಂಗಣದಲ್ಲಿ ಇಂದು ಪ್ರಮುಖರ ‘ಸಂಕಲ್ಪ’ ಸಭೆ ನಡೆಯಿತು. ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನಮನದಿಂದ ಈಗ ಕಾಂಗ್ರೆಸ್ ಹೊರಟು ಹೋಗಿದೆ. ಹೆಣ್ಮಕ್ಕಳು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ ಎರಡೂವರೆ ವರ್ಷ ಈ ಸರಕಾರವನ್ನು ಸಹಿಸಿಕೊಳ್ಳಬೇಕಾದ ನೋವು ನಮಗಿದೆ ಎಂದು ತಿಳಿಸಿದರು.

ಈ ಕ್ಷೇತ್ರದಲ್ಲಿ ಸುಮಾರು 400 ಬೂತ್‍ಗಳಿದ್ದು, 4 ಲಕ್ಷ ಮತದಾರರಿದ್ದಾರೆ. ಬೂತ್ ಮಟ್ಟದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದು ವಿನಂತಿಸಿದರು. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಮಾಡಿದ ಕೆಲವು ಕುತಂತ್ರಗಳಿಗೆ ನಾವು ಸಮರ್ಥ ಉತ್ತರ ಕೊಡಲಾಗಲಿಲ್ಲ ಎಂದು ವಿಶ್ಲೇಷಿಸಿದರು.

ನಾನು ಕಳೆದ 46-47 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ಸಿನಲ್ಲಿ ಹತ್ತಾರು ಜನರು ಟಿಕೆಟ್‍ಗಾಗಿ ಪ್ರಯತ್ನ ಮಾಡುತ್ತಾರೆ. ಒಬ್ಬರಿಗೆ ಟಿಕೆಟ್ ಕೊಟ್ಟರೆ ಇನ್ನುಳಿದವರು ಸೇರಿ ಸೋಲಿಸಿ ಬಂದು ಸಿಹಿ ತಿನ್ನುವುದನ್ನು ನಾನು ಗಮನಿಸಿದ್ದೇನೆ. ಬಿಜೆಪಿ ಹಾಗಲ್ಲ; ಗೆಲ್ಲಿಸಿ ಬಂದು ಸಿಹಿ ತಿನ್ನುತ್ತೇವೆ ಎನ್ನುತ್ತಿದ್ದರು. ಈ ಕ್ಷೇತ್ರದಲ್ಲಿ ಮತ್ತು ಈಚಿನ ದಿನಗಳಲ್ಲಿ ಕೆಲವೆಡೆ ಕಾಂಗ್ರೆಸ್ಸಿನ ಆ ಜಾಡ್ಯ ನಮಗೂ ಅಂಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನ ಜನಸಂಖ್ಯೆ ಹೆಚ್ಚಾದಂತೆ ನಗರ ಬೆಳೆದಿದೆ. ಇವತ್ತು ಸ್ಥಳೀಯರಿಗಿಂತ ಬಹುಸಂಖ್ಯಾತರು ಯಾರೆಂದರೆ ಅದು ಹೊರಗಿನವರು. ಬೆಂಗಳೂರು ಆರ್ಥಿಕವಾಗಿ ಬೆಳೆಯುತ್ತಿದೆ. ಕೈಗಾರಿಕೀಕರಣ ನಡೆದಿದೆ. ಹೊರಗಿನವರ ವಲಸೆ ಹೆಚ್ಚಾಗಿ ಅದು ಬೆಳೆಯುತ್ತ ಸಾಗಿದೆ. ಕೆಂಪೇಗೌಡರ ಬೆಂಗಳೂರು ಬೆಳವಣಿಗೆಗೆ ಕಡಿವಾಣ ಹಾಕಿ ತುಮಕೂರು, ಮಂಡ್ಯದಂಥ ಊರು ಬೆಳೆಯುವಂತೆ ನೋಡಬೇಕಿತ್ತು ಎಂದು ತಿಳಿಸಿದರು.

ಗುಲ್ಬರ್ಗ, ಧಾರವಾಡ ಬೆಳೆಯಲಿ ಎಂಬ ಭಾವನೆ ಬರಲೇ ಇಲ್ಲ. ಮುಂದೆ ಇದು ಉಸಿರಾಟದ ತೊಂದರೆಗೆ ಕಾರಣ ಆದೀತೆಂದು ಎಚ್ಚರಿಸಿದರು.

ಕಾಂಗ್ರೆಸ್ಸಿನ ಈಗಿನ ಸರಕಾರ ಜನರನ್ನು ಸುಲಿಗೆ ಮಾಡಲು ಹೊರಟಿದೆ ಎಂದು ಆಕ್ಷೇಪಿಸಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಸಾವಿರಾರು ಜನರಿಗೆ ಅವಕಾಶ ಕಲ್ಪಿಸಬಹುದು ಎಂದು ತಿಳಿಸಿದರು. ಅಧಿಕಾರಕ್ಕೆ ಬರದೇ ಇದ್ದರೆ ಹೋರಾಟಗಳು ಮುಂದುವರೆಯುತ್ತವೆ. ಸರಕಾರದ ನ್ಯೂನತೆಗಳ ವಿರುದ್ಧ ನಾವು ಹೋರಾಟ ಮುಂದುವರೆಸಬೇಕು ಎಂದು ಮನವಿ ಮಾಡಿದರು.

ಚುನಾವಣೆಗಾಗಿ ಪಕ್ಷವನ್ನು ಅಣಿ ಮಾಡುವುದು, ಶಕ್ತಿ ವರ್ಧನೆ, ಬಿಎಲ್‍ಎ 2 ಗಳು ಯಾವ ರೀತಿ ಕೆಲಸ ಮಾಡಬೇಕೆಂಬ ಕಡೆ ಗಮನ ನೀಡಬೇಕೆಂದು ಸಲಹೆ ನೀಡಿದರು. ನೀವೆಲ್ಲರೂ ನೈಜ ಸಂಕಲ್ಪ ಮಾಡಿದ್ದರೆ ತಮ್ಮೇಶ್ ಗೌಡರು ಇವತ್ತು ಶಾಸಕರಾಗುತ್ತಿದ್ದರು ಎಂದು ನುಡಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ ಅವರು ಮಾತನಾಡಿ, ಸ್ಥಳೀಯ ಶಾಸಕರ ವಿರುದ್ಧ ಮುಂದಿನ ದಿನಗಳಲ್ಲಿ ದೊಡ್ಡ ಅಭಿಯಾನ ನಡೆಸುವುದಾಗಿ ಹೇಳಿದರು. ಶಾಸಕ, ಮಂತ್ರಿಯಾಗಿ ವೈಫಲ್ಯ, ಭ್ರಷ್ಟಾಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದನ್ನು ಶೇರ್ ಮಾಡುವಂತೆ ವಿನಂತಿಸಿದರು.

ರಾಜ್ಯದ ಜನತೆ ಗಮನಕ್ಕೆ: ಅ.27ರಿಂದ 28ರ ಬೆಳಗ್ಗೆ 11ರವರೆಗೆ ‘ಎಸ್ಕಾಂ ಆನ್ ಲೈನ್ ಸೇವೆ’ ಅಲಭ್ಯ

BREAKING : ಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಾಣ ವಿಚಾರ : ರಾಜ್ಯ ಸರ್ಕಾರ & ‘GBA’ ಗೆ ಹೈಕೋರ್ಟ್ ನೋಟಿಸ್  ಜಾರಿ

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು RSS ವಿಷಯ ಕೆದಕಿದ್ದಾರೆ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ಧಾಳಿ

25/10/2025 4:25 PM2 Mins Read

ರಾಜ್ಯದ ಜನತೆ ಗಮನಕ್ಕೆ: ಅ.27ರಿಂದ 28ರ ಬೆಳಗ್ಗೆ 11ರವರೆಗೆ ‘ಎಸ್ಕಾಂ ಆನ್ ಲೈನ್ ಸೇವೆ’ ಅಲಭ್ಯ

25/10/2025 4:14 PM2 Mins Read

‘ನ್ಯಾಯಮೂರ್ತಿ ಸಂತೋಷ್ ಹೆಗ್ಡೆ’ ಅವರ ಹೇಳಿಕೆಗೆ ಈ ತಿರುಗೇಟು ಕೊಟ್ಟ ‘MLC ರಮೇಶ್ ಬಾಬು’

25/10/2025 3:58 PM2 Mins Read
Recent News

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು RSS ವಿಷಯ ಕೆದಕಿದ್ದಾರೆ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ಧಾಳಿ

25/10/2025 4:25 PM

ಕಾಂಗ್ರೆಸ್ಸಿಗರು ಕೆಂಪೇಗೌಡರ ಕನಸನ್ನು 5 ತುಂಡು ಮಾಡಿದ್ದಾರೆ: ಛಲವಾದಿ ನಾರಾಯಣಸ್ವಾಮಿ

25/10/2025 4:18 PM

ರಾಜ್ಯದ ಜನತೆ ಗಮನಕ್ಕೆ: ಅ.27ರಿಂದ 28ರ ಬೆಳಗ್ಗೆ 11ರವರೆಗೆ ‘ಎಸ್ಕಾಂ ಆನ್ ಲೈನ್ ಸೇವೆ’ ಅಲಭ್ಯ

25/10/2025 4:14 PM

BREAKING : ಖ್ಯಾತ ಹಿರಿಯ ನಟ ‘ಸತೀಶ್ ಶಾ’ ಇನ್ನಿಲ್ಲ |Satish Shah No More

25/10/2025 4:11 PM
State News
KARNATAKA

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು RSS ವಿಷಯ ಕೆದಕಿದ್ದಾರೆ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ಧಾಳಿ

By kannadanewsnow0925/10/2025 4:25 PM KARNATAKA 2 Mins Read

ಬೆಂಗಳೂರು: ಆರ್ ಎಸ್ ಎಸ್ ಪಥ ಸಂಚಲನ ಇವತ್ತು ನಿನ್ನೆಯಿಂದ ಮಾಡುತ್ತಿಲ್ಲ. ದಶಕಗಳಿಂದ ಮಾಡಿಕೊಂಡು ಬರುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರ…

ಕಾಂಗ್ರೆಸ್ಸಿಗರು ಕೆಂಪೇಗೌಡರ ಕನಸನ್ನು 5 ತುಂಡು ಮಾಡಿದ್ದಾರೆ: ಛಲವಾದಿ ನಾರಾಯಣಸ್ವಾಮಿ

25/10/2025 4:18 PM

ರಾಜ್ಯದ ಜನತೆ ಗಮನಕ್ಕೆ: ಅ.27ರಿಂದ 28ರ ಬೆಳಗ್ಗೆ 11ರವರೆಗೆ ‘ಎಸ್ಕಾಂ ಆನ್ ಲೈನ್ ಸೇವೆ’ ಅಲಭ್ಯ

25/10/2025 4:14 PM

‘ನ್ಯಾಯಮೂರ್ತಿ ಸಂತೋಷ್ ಹೆಗ್ಡೆ’ ಅವರ ಹೇಳಿಕೆಗೆ ಈ ತಿರುಗೇಟು ಕೊಟ್ಟ ‘MLC ರಮೇಶ್ ಬಾಬು’

25/10/2025 3:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.