Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಅಯತೊಲ್ಲಾ ಖಮೇನಿ ಪತ್ನಿ ಸಾವು : ಇರಾನ್ ಸರ್ಕಾರಿ ಮಾಧ್ಯಮ

02/03/2026 7:16 PM

BREAKING : ‘ರಾಜಕೀಯ ಪ್ರೇರಿತ’ ; ನಿಜ್ಜರ್ ಪ್ರಕರಣದ ಕುರಿತು ಕೆನಡಾದ ಮಾಧ್ಯಮ ವರದಿ ತಿರಸ್ಕರಿಸಿದ ಭಾರತ

02/03/2026 7:06 PM

BREAKING : ಭಾರತ ಸೇರಿ ವಿಶ್ವಾದ್ಯಂತ ಆಂಥ್ರೊಪಿಕ್’ನ ‘AI ಚಾಟ್ಬಾಟ್’ ಡೌನ್ ; ಬಳಕೆದಾರರ ಪರದಾಟ!

02/03/2026 7:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ”ಗೆ ಖಂಡನೆ : ನಾಳೆ ಹಿಂದೂಪರ ಸಂಘಟನೆಗಳ ಬೃಹತ್ ಪ್ರತಿಭಟನೆ.!
KARNATAKA

BIG NEWS : ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ”ಗೆ ಖಂಡನೆ : ನಾಳೆ ಹಿಂದೂಪರ ಸಂಘಟನೆಗಳ ಬೃಹತ್ ಪ್ರತಿಭಟನೆ.!

By kannadanewsnow5705/04/2025 6:59 AM

ಬೆಂಗಳೂರು: ಉತ್ತರ ಕರ್ನಾಟಕ ಹುಲಿ, ಹಿಂದುತ್ವದ ಫೈರ್ ಬ್ರಾಂಡ್ ಎಂದು ಕರೆಸಿಕೊಳ್ಳುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಹೈಕಮಾಂಡ್ ಪಕ್ಷದ ಪ್ರಾಥಮಿಕ ಸದಸತ್ವ ದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿರುವದನ್ನು ಖಂಡಿಸಿ ಹಲವು ಹಿಂದೂಪರ ಸಂಘಟನೆಗಳು ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ.

ಸಭೆಯಲ್ಲಿ ಹಿರಿಯ ಮುಖಂಡರಾದ ಬಸವರಾಜ್ ದಿಂಡೂರು, ಬಸನಗೌಡ ಬಿರಾದಾರ್ ( ನಾಗರಾಳ್ ಹುಲಿ )ಮಲ್ಲನಗೌಡ ಪಾಟೀಲ್ ( ಕೋರವಾರ) ಉತ್ತರ ಕರ್ನಾಟಕ ಮಹಾ ಸಂಸ್ಥೆ ಗಳ ಅಧ್ಯಕ್ಷ ಶಿವಕುಮಾರ್ ಮೇಟಿ, ಸೇರಿದಂತೆ ಹಲವು ಮುಖಂಡರು ಸಭೆ ಸೇರಿ ಯತ್ನಾಳ್ ಅವರನ್ನು ಬಿಜೆಪಿ ಪಕ್ಷ ನಡೆಸಿಕೊಂಡ ರೀತಿ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಬಸನಗೌಡ ಬಿರಾದಾರ್ ( ನಾಗರಾಳ ಹುಲಿ ) ನೇರ ನಿಷ್ಟುರವಾದ ಮಾತುಗಳಿಂದ, ಮತ್ತು ಈ ದೇಶದಲ್ಲಿ ಹಿಂದುತ್ವದ ಬಗ್ಗೆ ಉಗ್ರವಾಗಿ ಪ್ರತಿಪಾದಿಸುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷ ಉಚ್ಚಾಟನೆ ಮಾಡಿರವುದು ನೋವಿನ ಸಂಗತಿ. ಕೂಡಲೇ ಪಕ್ಷ ಹಾಗೂ ಹೈಕಮಾಂಡ್ ನಾಯಕರು ತಮ್ಮ ಕ್ರಮವನ್ನು ಮರುಪರಿಶೀಲನೆ ಮಾಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಒಕ್ಕೊರೊಲಿನಿಂದ ಮನವಿ ಮಾಡಿದರು.

ಸಭೆಯಲ್ಲಿ ಮಾತನಾಡಿದ ಪ್ರಮುಖ ಮುಖಂಡರಾದ ಬಸವರಾಜ್ ದಿಂಡೂರ್ ಅವರು ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ಕರ್ನಾಟಕ ಭಾಗದ ಪ್ರಬಲ ನಾಯಕರು, ಯಾವುದೇ ಭ್ರಷ್ಟಾಚಾರ ಮಾಡದೇ ಶುದ್ಧಹಸ್ತ ರಾಜಕಾರಣ ಮಾಡಿಕೊಂಡು, ಜೊತೆಗೆ ದೇಶಕ್ಕೆ ರಾಜ್ಯಕ್ಕೆ ಹಿಂದುತ್ವದ ವಿಚಾರದಲ್ಲಿ ಧಕ್ಕೆ ಬಂದಾಗ ಮುಂಚೂಣಿ ನಾಯಕರಾಗಿ ಕಾಣಿಸಿಕೊಂಡು ಹಲವು ಹೋರಾಟಗಳಲ್ಲಿ ಪಾಲ್ಗೊಂಡು ಅತೀ ದೊಡ್ಡ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಅವರ ಏಳ್ಗೆ ಕಂಡು ಕೆಲವರಿಗೆ ಅಸಮಾಧಾನ, ಹೊಟ್ಟೆಕಿಚ್ಚು ಬಂದಿದ್ದು, ಹೈಕಮಾಂಡ್ ನಾಯಕರಿಗೆ ಇಲ್ಲಸಲ್ಲದ ಹೇಳಿಕೆ ನೀಡಿ ಅವರನ್ನು ಇಂದು ಉಚ್ಚಾಟನೆ ಮಾಡಿಸಿದ್ದಾರೆ. ಇಂದು ಕರ್ನಾಟಕದಲ್ಲಿ ವಕ್ಫ ಹೋರಾಟದಲ್ಲಿ ತಾವೇ ಮುಂದೆ ನಿಂತು ಉಪವಾಸ ಸತ್ಯಾಗ್ರಹ ಮಾಡಿ ಇಂದು ಕೇಂದ್ರ ಸರ್ಕಾರ ಅದನ್ನ ಬಿಲ್ ಪಾಸ್ ಮಾಡಿದೆ. ಇದರ ಸಂಪೂರ್ಣ ಶ್ರೇಯಸ್ಸು ಯತ್ನಾಳ್ ಗೇ ಸಲ್ಲಬೇಕು ಅದ್ರಲ್ಲಿ ಮುಂದಾಳತ್ವ ವಹಿಸಿ ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಶ್ರಮಿಸಿದ್ದಾರೆ. ಇಷ್ಟೆಲ್ಲ ಮಾಡಿದರು ಬಿಜೆಪಿ ಹೈಕಮಾಂಡ್ ನಾಯಕರು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ನಡೆಸಿಕೊಂಡು ರೀತಿ ಎಲ್ಲ ಹಿಂದೂಪರ ಸಂಘಟನೆ ಹಾಗೂ ಮುಖಂಡರಿಗೆ ವಿಶೇಷ ವಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಪಡ್ನವೀಸ್ ಅವರು ಹೈಕಮಾಂಡ್ ಗೇ ಈಗಾಗಲೇ ಬಸನಗೌಡ ಪಾಟೀಲ್ ಯತ್ನಾಳ ಅವರು ಪಕ್ಷದ ನಿಷ್ಠಾವಂತ ನಾಯಕರಾಗಿದ್ದು, ಬಹಳಷ್ಟು ಜನಪ್ರಿಯತೆ ಹೊಂದಿದ್ದಾರೆ ಹೀಗಾಗಿ ಮತ್ತೊಮ್ಮೆ ಅವರನ್ನು ಪಕ್ಷಕ್ಕೆ ಗೌರವಯುತವಾಗಿ ವಾಪಾಸ್ ಸೇರ್ಪಡೆ ಮಾಡಿಕೊಂಡು ಅವರಿಗೆ ಸೂಕ್ತ ಸ್ಥಾನಮಾನ ನೀಡ್ಬೇಕು ಹಾಗೂ ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕ ಮುಂಬೈ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ, ಬಸನಗೌಡ ಅವರನ್ನು ಬೆಂಬಲಿಸಿ ರಾಜ್ಯದ ಎಲ್ಲ ಕಡೆ ಈಗಾಗಲೇ ಪ್ರತಿಭಟನೆ, ಬಂದ್ ನಡೆಯುತ್ತಿದೆ, ಕೂಡಲೇ ಇದನ್ನು ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ಹಿರಿಯ ಮುಖಂಡರು ಮತ್ತು ಹಿಂದುತ್ವದ ನಾಯಕರು ಗಮನಿಸಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ಭಾನುವಾರ ದಿನಾಂಕ 06/04/2025 ರಂದು ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಉಗ್ರ ಪ್ರತಿಭಟನೆ ಹಾಗೂ ಪಂಜಿನ ಮೆರವಣಿಗೆ ಮಾಡಲಾಗುವುದು. ಈ ಪ್ರತಿಭಟನೆಗೇ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಹಿಂದೂ ಸಂಘಟನೆಗಳ ಮುಖಂಡರು ಕಾರ್ಯಕರ್ತರು, ವೀರಶೈವ ಸಮುದಾಯದ ಎಲ್ಲ ಹಿರಿಯರು ಹಾಗೂ ಎಲ್ಲ ಸಮುದಾಯದ ಸಮಾನ ಮನಸ್ಕರು ಸೇರಿ ಬಿಜೆಪಿ ಹೈಕಮಾಂಡ್ ಗೇ ಬಸನಗೌಡ ಪಾಟೀಲ್ ಯತ್ನಾಳ್ ಅವರ ಶಕ್ತಿ ಏನು ಎಂಬುದನ್ನು ತೋರಿಸುತ್ತೇವೆ ಎಂದು ಬಸವರಾಜ್ ದಿಂಡೂರ್ ಹೇಳಿದರು.

ಸಭೆಯಲ್ಲಿ ಮಲ್ಲನಗೌಡ ಪಾಟೀಲ್, ಶಿವಕುಮಾರ್ ಮೇಟಿ, ಬಸನಗೌಡ ಬಿರಾದಾರ್ ಪುಟ್ಟರಾಜು ಹಳ್ಳದ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು ಬಿಜೆಪಿ ಹೈಕಮಾಂಡ್ ಹಾಗೂ ಪಕ್ಷದ ನಾಯಕರ ವಿರುದ್ಧ ಗುಡುಗಿದರು.

Condemnation of "expulsion" of Basanagouda Patil Yatnal from BJP: Massive protest by pro-Hindu organizations tomorrow!
Share. Facebook Twitter LinkedIn WhatsApp Email

Related Posts

HDK ಕುಮ್ಮಕ್ಕಿನಿಂದಲೇ ಪ್ರಜ್ಜಲ್ ರೇವಣ್ಣ ಜೈಲಿಗೆ ಹೋಗಿದ್ದು: ಮದ್ದೂರು ಶಾಸಕ ಕೆ.ಎಂ.ಉದಯ್ ಅಚ್ಚರಿ ಹೇಳಿಕೆ

02/03/2026 7:01 PM3 Mins Read

ಕಾಂತಾರ ಚಾಪ್ಟರ್-1ರ ಬಗ್ಗೆ ವಿವಾದಾತ್ಮಕ ಹೇಳಿಕೆ: ಕೇಸ್ ರದ್ದು ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಹೈಕೋರ್ಟ್ ಗೆ ಅರ್ಜಿ

02/03/2026 6:46 PM1 Min Read

ರಾಜ್ಯದಲ್ಲಿ ಖಾಲಿ ಇರುವ 56,000 ಹುದ್ದೆಯನ್ನು ಭರ್ತಿ ಮಾಡಲು ಐತಿಹಾಸಿಕ ನಿರ್ಧಾರ: ಸಚಿವ ಮಧು ಬಂಗಾರಪ್ಪ

02/03/2026 6:32 PM2 Mins Read
Recent News

BREAKING : ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಅಯತೊಲ್ಲಾ ಖಮೇನಿ ಪತ್ನಿ ಸಾವು : ಇರಾನ್ ಸರ್ಕಾರಿ ಮಾಧ್ಯಮ

02/03/2026 7:16 PM

BREAKING : ‘ರಾಜಕೀಯ ಪ್ರೇರಿತ’ ; ನಿಜ್ಜರ್ ಪ್ರಕರಣದ ಕುರಿತು ಕೆನಡಾದ ಮಾಧ್ಯಮ ವರದಿ ತಿರಸ್ಕರಿಸಿದ ಭಾರತ

02/03/2026 7:06 PM

BREAKING : ಭಾರತ ಸೇರಿ ವಿಶ್ವಾದ್ಯಂತ ಆಂಥ್ರೊಪಿಕ್’ನ ‘AI ಚಾಟ್ಬಾಟ್’ ಡೌನ್ ; ಬಳಕೆದಾರರ ಪರದಾಟ!

02/03/2026 7:02 PM

HDK ಕುಮ್ಮಕ್ಕಿನಿಂದಲೇ ಪ್ರಜ್ಜಲ್ ರೇವಣ್ಣ ಜೈಲಿಗೆ ಹೋಗಿದ್ದು: ಮದ್ದೂರು ಶಾಸಕ ಕೆ.ಎಂ.ಉದಯ್ ಅಚ್ಚರಿ ಹೇಳಿಕೆ

02/03/2026 7:01 PM
State News
KARNATAKA

HDK ಕುಮ್ಮಕ್ಕಿನಿಂದಲೇ ಪ್ರಜ್ಜಲ್ ರೇವಣ್ಣ ಜೈಲಿಗೆ ಹೋಗಿದ್ದು: ಮದ್ದೂರು ಶಾಸಕ ಕೆ.ಎಂ.ಉದಯ್ ಅಚ್ಚರಿ ಹೇಳಿಕೆ

By kannadanewsnow0902/03/2026 7:01 PM KARNATAKA 3 Mins Read

ಮಂಡ್ಯ : ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕುಮ್ಮಕ್ಕಿನಿಂದಲೇ ಮಾಜಿ ಸಂಸದ ಪ್ರಜ್ಜಲ್ ರೇವಣ್ಣ ಜೈಲಿಗೆ ಹೋಗಿದ್ದು ಎಂದು ಶಾಸಕ…

ಕಾಂತಾರ ಚಾಪ್ಟರ್-1ರ ಬಗ್ಗೆ ವಿವಾದಾತ್ಮಕ ಹೇಳಿಕೆ: ಕೇಸ್ ರದ್ದು ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಹೈಕೋರ್ಟ್ ಗೆ ಅರ್ಜಿ

02/03/2026 6:46 PM

ರಾಜ್ಯದಲ್ಲಿ ಖಾಲಿ ಇರುವ 56,000 ಹುದ್ದೆಯನ್ನು ಭರ್ತಿ ಮಾಡಲು ಐತಿಹಾಸಿಕ ನಿರ್ಧಾರ: ಸಚಿವ ಮಧು ಬಂಗಾರಪ್ಪ

02/03/2026 6:32 PM

ಸಿಗಂದೂರು ಸೇತುವೆ ಬಳಿ ರಸ್ತೆ ತಡೆ ನಡೆಸಿ ರೈತರು ಪ್ರತಿಭಟನೆ: ಜನಪ್ರತಿನಿಧಿಗಳಿಗೆ ತೀ.ನಾ.ಶ್ರೀನಿವಾಸ್ ಈ ಸವಾಲು

02/03/2026 6:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.