Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬೆಂಗಳೂರಲ್ಲಿ ಮಹಾಮಳೆಗೆ ಮತ್ತಿಬ್ಬರು ಬಲಿ: ಮೃತರ ಸಂಖ್ಯೆ 3ಕ್ಕೆ ಏರಿಕೆ | Bengaluru Rain

19/05/2025 10:08 PM

ಅಕ್ರಮ ವಲಸೆಗೆ ಅನುಕೂಲ ಮಾಡುವ ಭಾರತೀಯ ಟ್ರಾವೆಲ್ ಏಜೆಂಟ್‌ಗಳ ವೀಸಾ ನಿರ್ಬಂಧಿಸಿದ ಅಮೆರಿಕ

19/05/2025 9:59 PM

BREAKING : ಬೆಂಗಳೂರಲ್ಲಿ ಮಳೆಗೆ ಮತ್ತಿಬ್ಬರು ಬಲಿ : ಅಪಾರ್ಟ್ಮೆಂಟ್ನಿಂದ ನೀರು ಹೊರ ಹಾಕುವಾಗ ವಿದ್ಯುತ್ ತಗುಲಿ ಸಾವು!

19/05/2025 9:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಮೆಡಿಕಲ್ ಸೀಟು ಹಂಚಿಕೆ’ಯಲ್ಲಿ 800 ಕೋಟಿ ಹಗರಣ ಆರೋಪ: ‘ಮಲ್ಲಿಕಾರ್ಜನು ಖರ್ಗೆ’ ಅಳಿಯ ವಿರುದ್ಧ ದೂರು
KARNATAKA

‘ಮೆಡಿಕಲ್ ಸೀಟು ಹಂಚಿಕೆ’ಯಲ್ಲಿ 800 ಕೋಟಿ ಹಗರಣ ಆರೋಪ: ‘ಮಲ್ಲಿಕಾರ್ಜನು ಖರ್ಗೆ’ ಅಳಿಯ ವಿರುದ್ಧ ದೂರು

By kannadanewsnow0906/05/2024 3:36 PM

ಬೆಂಗಳೂರು: ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜುಗಳ MBBS ಹಾಗೂ BDS ಪದವಿ ತರಗತಿಗಳ Admission ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆಸಿರುವ ಬೃಹತ್ ಹಗರಣ ಬಯಲಾಗಿದೆ. AICC ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಮತ್ತು ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಕಾಂಗ್ರಸ್(ಐ) ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಸದರಿ ಕಾಲೇಜುಗಳಲ್ಲಿ ನಡೆದಿರುವ ಬೃಹತ್ ಹಗರಣ ಎಂಬುದಾಗಿ ಎನ್ ಆರ್ ರಮೇಶ್ ದೂರು ದಾಖಲಿಸಿದ್ದಾರೆ.

ರಾಧಾಕೃಷ್ಣ ದೊಡ್ಡಮನಿ, ಗುರಪ್ಪಾಜಿ,  ಹೆಚ್. ಎಸ್. ಮಹದೇವ ಪ್ರಸಾದ್, ಡಾ|| ಎನ್. ಟಿ. ಮುರಳಿ ಮೋಹನ್, ವಿ. ಎಸ್. ಕುಬೇರ್ ಮತ್ತು ಅಮಾನುಲ್ಲಾ ಖಾನ್ ಅವರುಗಳ ವಿರುದ್ಧ CBI ಮತ್ತು ಲೋಕಾಯುಕ್ತ ತನಿಖಾ ಸಂಸ್ಥೆಗಳಲ್ಲಿ ದೂರುಗಳು ದಾಖಲು.

ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳು ದಾಖಿಸಲಾಗಿದೆ. ರಾಜ್ಯದ ಮೆಡಿಕಲ್ ಕಾಲೇಜುಗಳು ಮತ್ತು ಡೆಂಟಲ್ ಕಾಲೇಜುಗಳ ಇತಿಹಾಸದಲ್ಲಿಯೇ ಅತೀ ದೊಡ್ಡದಾದ ಹಗರಣ ಇದು ಎನ್ನಲಾಗುತ್ತಿದೆ.

ದ್ವಿತೀಯ ಪಿಯುಸಿ ತರಗತಿಯಲ್ಲಿ ಅನುತ್ತೀರ್ಣರಾದ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಅನರ್ಹ ಶ್ರೀಮಂತ ಕುಟುಂಬಗಳ ವಿದ್ಯಾರ್ಥಿಗಳಿಂದ ತಲಾ ಕನಿಷ್ಠ 02 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು Donation ರೂಪದಲ್ಲಿ ಪಡೆದಿರುವ / ಪಡೆಯುತ್ತಿರುವ ಬೃಹತ್ ಹಗರಣವಾಗಿದೆ.

  • 2008-09 ರಿಂದ ಇಲ್ಲಿಯವರೆಗೆ ಪ್ರತೀ ವರ್ಷ ಇಂತಹ ನೂರಾರು ಅನುತ್ತೀರ್ಣ / ಅನರ್ಹ ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಪ್ರವೇಶ ಕೊಡಿಸಿರುವ ಆರೋಪ.
  • ಶ್ರೀಮಂತ ಕುಟುಂಬಗಳ ಅನುತ್ತೀರ್ಣ / ಅನರ್ಹ ವಿದ್ಯಾರ್ಥಿಗಳಿಗೆ ಜಾರ್ಖಂಡ್ ರಾಜ್ಯದ ಅನಾಮಿಕ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡಂತೆ ದಾಖಲೆಗಳನ್ನು ಸೃಷ್ಟಿಸಿ, ಕಾನೂನು ಬಾಹಿರ ಪ್ರವೇಶಗಳನ್ನು ನೀಡಿರುವ ಆರೋಪ.
  • Ananda Social and Educational Trust (R) ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಡಾ|| ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜು / ನರ್ಸಿಂಗ್ ಕಾಲೇಜುಗಳು.
  • ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ, ಮಾಜಿ ಮುಖ್ಯಮಂತ್ರಿ. ಆರ್. ಗುಂಡೂರಾವ್, ಅಂದಿನ ಕೇಂದ್ರ ಸಚಿವರಾಗಿದ್ದ. ವಿ. ಶಂಕರಾನಂದ, ರಾಜ್ಯದ ಸಚಿವರಾಗಿದ್ದ ವಿ. ಬಸವಲಿಂಗಪ್ಪ, ಬಿ. ರಾಚಯ್ಯ ಮತ್ತುಮಲ್ಲಿಕಾರ್ಜುನ ಖರ್ಗೆಯವರರಂತಹ ಮಹಾ ಗಣ್ಯರಿಂದ 1980-81 ರಲ್ಲಿ ಚಾಲನೆಗೊಂಡಿರುವ Ananda Social and Educational Trust (R)
  • AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಯವರು ಈ ಸಂಸ್ಥೆಗಳ ಧರ್ಮದರ್ಶಿ (Trustee) ಆಗಿ ನಿಯೋಜನೆಗೊಂಡ ನಂತರ ಯಾವುದೇ ಎಗ್ಗಿಲ್ಲದೇ ನಡೆಯುತ್ತಿರುವ ಅಪಾರ ಪ್ರಮಾಣದ ವಂಚನೆ ಮತ್ತು ಭ್ರಷ್ಟಾಚಾರ.
  • ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಛದಲ್ಲಿ ಅತ್ತ್ಯುನ್ನತ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಒದಗಿಸುವ ಸದುದ್ದೇಶದಿಂದ ಪ್ರಾರಂಭವಾದ ಸದರಿ ಸಂಸ್ಥೆಗಳು.
  • Ananda Social and Educational Trust (R) ಸಂಸ್ಥೆಯ ಸಂಸ್ಥಾಪಕ ಧರ್ಮದರ್ಶಿಗಳಾಗಿದ್ದ ದಿ. ಹೆಚ್. ಎಸ್. ಶಿವಸ್ವಾಮಿ, ದಿ. ಡಾ|| ಎನ್. ಟಿ. ಮೋಹನ್ ಮತ್ತು ದಿ. ಡಾ|| ಎಲ್. ಶಿವಲಿಂಗಂಯ್ಯ ಅವರ ನೇತೃತ್ವದಲ್ಲಿ ಪ್ರಾರಂಭವಾದ ಸಂಸ್ಥೆ ಪ್ರಾರಂಭದಲ್ಲಿ ಅತ್ತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು.
  • ಈ 03 ಮಂದಿ ಪ್ರಾಮಾಣಿಕರು ನಿಧನರಾದ ನಂತರ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಶ್ರೀ.ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ, ಹೆಚ್. ಎಸ್. ಮಹದೇವ ಪ್ರಸಾದ್ ಹಾಗೂ ಡಾ|| ಎನ್. ಟಿ. ಮುರಳಿ ಮೋಹನ್ ರವರು ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜು / ನರ್ಸಿಂಗ್ ಕಾಲೇಜುಗಳ ಧರ್ಮದರ್ಶಿಗಳಾಗಿ ನೇಮಕ.
  • ಇದೇ ಸಂಸ್ಥೆಯಲ್ಲಿ ನಾಲ್ಕನೇ ದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದ ಅಮಾನುಲ್ಲಾ ಖಾನ್ ಎಂಬ ಪರಮ ಭ್ರಷ್ಟನನ್ನು ಶ್ರೀ. ರಾಧಾಕೃಷ್ಣ ದೊಡ್ಡಮನಿ ಮತ್ತವರ ತಂಡ ಕಾನೂನು ಬಾಹಿರವಾಗಿ ಸದರಿ ಶಿಕ್ಷಣ ಸಂಸ್ಥೆಗಳ PRO ಆಗಿ ನೇಮಕ ಮಾಡಿಕೊಂಡಿರುತ್ತಾರೆ.
  • ನಿಯಮಬಾಹಿರವಾಗಿ PRO ಸ್ಥಾನಕ್ಕೆ ನಿಯೋಜನೆಗೊಂಡ ಅಮಾನುಲ್ಲಾ ಖಾನ್ ನಿಂದ ಸಾವಿರಾರು ಕಾನೂನು ಬಾಹಿರ ಚಟುವಟಿಕೆಗಳು ನಡೆದಿರುತ್ತವೆ.
  • ರಾಜ್ಯ ಮತ್ತು ದೇಶದ ವಿವಿಧೆಡೆಗಳಿಂದ ಶ್ರೀಮಂತ ಕುಟುಂಬಗಳ ದ್ವಿತೀಯ ಪಿಯುಸಿ ಅನುತ್ತೀರ್ಣ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಅನರ್ಹಗೊಂಡ ವಿದ್ಯಾರ್ಥಿಗಳನ್ನು ಹುಡುಕಿ ತಂದು MBBS ಹಾಗೂ BDS ಪದವಿ ತರಗತಿಗಳಿಗೆ ಪ್ರವೇಶ ಕೊಡಿಸುವ ವಂಚನೆ ಕಾರ್ಯಗಳಲ್ಲಿ ಅಮಾನುಲ್ಲಾ ಖಾನ್ ತೊಡಗಿರುತ್ತಾನೆ.
  • ಅಮಾನುಲ್ಲಾ ಖಾನ್ ತನಗಿರುವ ಸಂಪರ್ಕದ ಮೂಲಕ ಜಾರ್ಖಂಡ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳ ಅನುಮೋದನೆ ಪಡೆಯದ ಬೇನಾಮಿ ಕಾಲೇಜುಗಳಿಂದ ದ್ವಿತೀಯ ಪಿಯುಸಿ ಅನುತ್ತೀರ್ಣಗೊಂಡ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಅನರ್ಹಗೊಂಡ ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿಗಳನ್ನು ಕೊಡಿಸುವುದರಲ್ಲಿ ಕುಖ್ಯಾತಿ ಪಡೆದಿರುತ್ತಾನೆ.
  • ನಾಲ್ಕನೇ ದರ್ಜೆಯ ನೌಕರನಾಗಿದ್ದ ಅಮಾನುಲ್ಲಾ ಖಾನ್ ಪ್ರಸ್ತುತ 500 ಕೋಟಿ ರೂಪಾಯಿಗಳಿಗೂ ಹೆಚ್ಚು ವೆಚ್ಛದಲ್ಲಿ ತಮಿಳುನಾಡಿನ ಕೃಷ್ಣಗಿರಿಯಲ್ಲಿ ತನ್ನದೇ ಆದ ಸ್ವಂತ ಮೆಡಿಕಲ್ ಕಾಲೇಜ್ ಅನ್ನು ನಿರ್ಮಿಸುತ್ತಿದ್ದಾನೆ.
  • 2008-09 ರಿಂದ ಈವರೆವಿಗೆ ವೈದ್ಯಕೀಯ / ದಂತ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ, Management Quota ಅಡಿಯಲ್ಲಿ ಸಾವಿರಾರು ಅಕ್ರಮಗಳು ನಡೆದಿರುತ್ತವೆ.

ಉದಾಹರಣೆಗೆ

* ಬೆಂಗಳೂರಿನ ದೂರವಾಣಿ ನಗರದ Lowry Memorial PU College ನಲ್ಲಿ 2008 ರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪಡೆದಿದ್ದ ಅಕ್ಷಯ್ ರಾಜೀವ್ ಶ್ರೀನಿವಾಸ್ ಎಂಬ ಶ್ರೀಮಂತ ಕುಟುಂಬದ ವಿದ್ಯಾರ್ಥಿ ಕೇವಲ 127 ಅಂಕಗಳನ್ನು ಪಡೆದು ಅನುತ್ತೀರ್ಣಗೊಂಡಿರುತ್ತಾನೆ.

* ಮತ್ತೊಮ್ಮೆ 2009 ರಲ್ಲಿ ಎರಡನೇ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದ ಅಕ್ಷಯ್ ರಾಜೀವ್ ಶ್ರೀನಿವಾಸ್ ಕೇವಲ 173 ಅಂಕಗಳನ್ನು ಪಡೆದು ಪುನಃ ಅನುತ್ತೀರ್ಣರಾಗಿರುತ್ತಾನೆ.

* ಆದರೆ, ರಾಧಾಕೃಷ್ಣ ದೊಡ್ಡಮನಿ ನೇತೃತ್ವದ ತಂಡ ಅಕ್ಷಯ್ ರಾಜೀವ್ ಶ್ರೀನಿವಾಸ್ ರನ್ನು ಜಾರ್ಖಂಡ್ ರಾಜ್ಯದ ರಾಜಾ ಶಿವಪ್ರಸಾದ್ ಕಾಲೇಜಿನಿಂದ 2008 ರ ಮೇ ತಿಂಗಳಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರುವ ನಕಲಿ Marks Card ಅನ್ನು ಅಮಾನುಲ್ಲಾ ಖಾನ್ ಮೂಲಕ ಸೃಷ್ಟಿಸಿರುತ್ತಾರೆ.

* ನಂತರ ಇದೇ ನಕಲಿ ಅಂಕಪಟ್ಟಿಯನ್ನು ಇಟ್ಟುಕೊಂಡು ಅಕ್ಷಯ್ ರಾಜೀವ್ ಶ್ರೀನಿವಾಸ್ ಗೆ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ಪ್ರವೇಶವನ್ನು ದೊರಕಿಸಿಕೊಡುತ್ತಾರೆ.

* ದ್ವಿತೀಯ ಪಿಯುಸಿ ಅನುತ್ತೀರ್ಣರಾಗಿರುವ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಅನರ್ಹರಾಗಿರುವ ಅಕ್ಷಯ್ ರಾಜೀವ್ ಶ್ರೀನಿವಾಸ್ ರಂತಹ ಶ್ರೀಮಂತ ಕುಟುಂಬಗಳ ನೂರಾರು ವಿದ್ಯಾರ್ಥಿಗಳನ್ನು ಕಾನೂನು ಬಾಹಿರವಾಗಿ MBBS ತರಗತಿಗಳಿಗೆ ಪ್ರವೇಶ ಮಾಡಿಕೊಳ್ಳಲಾಗಿದೆ.

* Rajiv Gandhi University of Health Sciences ನ Registrar ಆಗಿದ್ದ ಡಾ|| ವಸಂತ್ ಕುಮಾರ್ ರವರು ಅಕ್ಷಯ್ ರಾಜೀವ್ ಶ್ರೀನಿವಾಸ್ ರವರ ಅಂಕಪಟ್ಟಿ ಸರಿಯಿಲ್ಲವೆಂದು ಆತನ ಪ್ರವೇಶಕ್ಕೆ ಪ್ರಾರಂಭದಲ್ಲಿ ಅನುಮೋದನೆ ನೀಡಿರುವುದಿಲ್ಲ.

* ಆದರೆ, ಅತ್ಯಂತ ಅನುಮಾನಾಸ್ಪದವಾಗಿ ಇದೇ ಡಾ|| ವಸಂತ್ ಕುಮಾರ್ ರವರು RGUHS ನಿಂದ ಅಕ್ಷಯ್ ರಾಜೀವ್ ಶ್ರೀನಿವಾಸ್ ರವರ ಪ್ರವೇಶಕ್ಕೆ ವಿಶ್ವವಿದ್ಯಾಲಯದ ಅನುಮೋದನೆಯನ್ನು ನೀಡುತ್ತಾರೆ.

* ಇದರಲ್ಲಿಯೂ ಸಹ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ.

  • ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ದಿವಾಕರ್ ಎಂಬ ನಾಲಾಯಕ್ ವ್ಯಕ್ತಿ MBBS ಪದವಿಯಲ್ಲಿ ತೇರ್ಗಡೆಯಾಗಲು 09 ವರ್ಷ (18 ಪ್ರಯತ್ನಗಳು) ಗಳಷ್ಟು ಸುಧೀರ್ಘ ಕಾಲ ತೆಗೆದುಕೊಂಡಿರುತ್ತಾರೆ.
  • ಇದೇ ನಾಲಾಯಕ್ ವ್ಯಕ್ತಿ ದಿವಾಕರ್ ರನ್ನು ರಾಧಾಕೃಷ್ಣ ದೊಡ್ಡಮನಿ ಮತ್ತವರ ತಂಡದವರು ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನ Professor ಆಗಿ ನೇಮಕ ಮಾಡಿಕೊಂಡಿರುತ್ತಾರೆ.
  • ಈ ಪ್ರಕರಣದಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಸುಸ್ಪಷ್ಟವಾಗಿರುತ್ತದೆ.
  • ಯಾವುದೇ ಬೋಧನಾ ಅನುಭವ ಇಲ್ಲದೇ ಇದ್ದರೂ ಸಹ ಸದರಿ ಸಂಸ್ಥೆಯಲ್ಲಿ CMO (Chief Medical Officer), RMO (Resident Medical Officer), Medical Superintendent ಮತ್ತು Vice Principal ಗಳ ಹುದ್ದೆಗಳಿಗೆ ಹತ್ತಾರು ಲಕ್ಷ ರೂಪಾಯಿಗಳಷ್ಟು ಲಂಚವನ್ನು ಪಡೆದು ನೇಮಕ ಮಾಡಿಕೊಳ್ಳಲಾಗಿರುತ್ತದೆ.
  • ಈ ಎಲ್ಲಾ ಹಗರಣಗಳಿಗೆ ಸಂಬಂಧಿಸಿದಂತೆ ಸದರಿ ಶಿಕ್ಷಣ ಸಂಸ್ಥೆಗಳ ನೌಕಕರ ಸಂಘದ ಸದಸ್ಯರು ಸೇರಿದಂತೆ ಹಲವಾರು ಹೋರಾಟಗಾರರು ಮತ್ತು ಸ್ವತಃ ಆಡಳಿತ ಮಂಡಳಿಯ ಕೆಲವು ನಿಷ್ಠಾವಂತ ಸದಸ್ಯರು ರಾಜ್ಯದ ಘನತೆವೆತ್ತ ರಾಜ್ಯಪಾಲರಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ, ಮುಖ್ಯ ಕಾರ್ಯದರ್ಶಿಗಳಿಗೆ ಹಲವಾರು ಬಾರಿ ದಾಖಲೆಗಳ ಸಹಿತ ದೂರು ನೀಡಿರುತ್ತಾರೆ. ಅಲ್ಲದೇ, ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನೂ ಸಹ ದಾಖಲಿಸಿರುತ್ತಾರೆ.
  • ಅತ್ಯಂತ ಪ್ರಭಾವಶಾಲಿಗಳಾಗಿರುವ ರಾಧಾಕೃಷ್ಣ ದೊಡ್ಡಮನಿ ಮತ್ತವರ ತಂಡ ಕಾನೂನಿನಲ್ಲಿರುವ ಲೋಪದೋಷಗಳನ್ನು ತಮಗೆ ಬೇಕಾದ ಹಾಗೆ ಪರಿವರ್ತಿಸಿಕೊಂಡು ಕಾನೂನಿಗೆ ಮಣ್ಣೆರೆಚುವ ಕೆಲಸವನ್ನು ಮಾಡುತ್ತಿದ್ದಾರೆ.
  • ಸದರಿ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಹೋರಾಟದ ಫಲವಾಗಿ ನಿವೃತ್ತ ನ್ಯಾಯಮೂರ್ತಿ ಎಸ್. ಆರ್. ವೆಂಕಟೇಶ್ ಮೂರ್ತಿ ರವರನ್ನು ರಾಜ್ಯ ಸರ್ಕಾರವು 2004 ರಲ್ಲಿ ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಿತ್ತು.

ನಂತರ ಆಡಳಿತಾಧಿಕಾರಿಗಳು 2008-09 ರಲ್ಲಿ ಬಿ. ಎಲ್. ನಂಜುಂಡಸ್ವಾಮಿ, ಎಂ ಕೆ. ಕೆಂಪಸಿದ್ದಯ್ಯ, ಎಂ. ಗುರಪ್ಪಾಜಿ ಮತ್ತುವಿ. ಎಸ್. ಕುಬೇರ್ ರವರುಗಳನ್ನು ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜು / ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿಯ ಧರ್ಮದರ್ಶಿಗಳಾಗಿ ನಿಯೋಜಿಸಿ ಆದೇಶ ಹೊರಡಿಸಿರುತ್ತಾರೆ.

ಆಡಳಿತಾಧಿಕಾರಿಗಳ ಅವಧಿ ಮುಗಿದ ನಂತರ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಾನೂನು ರೀತ್ಯಾ ನಿಯೋಜನೆಗೊಂಡ ಮೂರು ಮಂದಿ ಧರ್ಮದರ್ಶಿಗಳ ಮೇಲೆ ತೀವ್ರವಾದ ಒತ್ತಡ ಹೇರಿ ರಾಧಾಕೃಷ್ಣ ದೊಡ್ಡಮನಿ ಮತ್ತವರ ತಂಡದ ಸದಸ್ಯರನ್ನು ಆಡಳಿತ ಮಂಡಳಿಯ ಧರ್ಮದರ್ಶಿಗಳಾಗಿ ನೇಮಕ ಮಾಡಿಕೊಳ್ಳಲಾಗಿರುತ್ತದೆ.

ಪ್ರಾರಂಭದಲ್ಲಿ ಆಡಳಿತ ಮಂಡಳಿಯ ಧರ್ಮದರ್ಶಿಗಳಾಗಿ ನೇಮಕಗೊಂಡಿದ್ದ ರಾಧಾಕೃಷ್ಣ ದೊಡ್ಡಮನಿಯವರು ಶ್ರೀ. ಮಲ್ಲಿಕಾರ್ಜುನ ಖರ್ಗೆಯವರ ಪ್ರಭಾವವನ್ನು ಬಳಸಿ ಏಕಾಏಕಿ ಆಡಳಿತ ಮಂಡಳಿಯ ಮುಖ್ಯಸ್ಥರ ಹುದ್ದೆಯನ್ನು ಅಲಂಕರಿಸಿರುತ್ತಾರೆ.

ಕಳೆದ 15 ವರ್ಷಗಳಿಂದ ನಿರಂತರವಾಗಿ ಅಕ್ರಮ ಪ್ರವೇಶಗಳ ಮೂಲಕ ನೂರಾರು ಕೋಟಿ ರೂಪಾಯಿಗಳಷ್ಟು ಭ್ರಷ್ಟಾಚಾರವನ್ನು ನಡೆಸಿರುವ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರಾದ ರಾಧಾಕೃಷ್ಣ ದೊಡ್ಡಮನಿ, ಗುರಪ್ಪಾಜಿ,ಮಹದೇವ ಪ್ರಸಾದ್, ಡಾ|| ಎನ್. ಟಿ. ಮುರಳಿ ಮೋಹನ್, ವಿ. ಎಸ್. ಕುಬೇರ್ ಹಾಗೂ ಅಮಾನುಲ್ಲಾ ಖಾನ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು / ಆಡಳಿತ ಮಂಡಳಿಯ ಧರ್ಮದರ್ಶಿಗಳ ವಿರುದ್ಧ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಎನ್ ಆರ್ ರಮೇಶ್ ಆಗ್ರಹಿಸಿದ್ದಾರೆ.

ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜುಗಳಲ್ಲಿ ನಡೆದಿರುವ / ನಡೆಯುತ್ತಿರುವ ಈ ಬೃಹತ್ ಹಗರಣದ ತನಿಖೆಯನ್ನು CBI ಅಥವಾ CID ಗೆ ಹಾಗೂ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು N. R. ರಮೇಶ್ ಆಗ್ರಹಿಸಿದ್ದಾರೆ.

ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜುಗಳಲ್ಲಿ ನಡೆದಿರುವ / ನಡೆಯುತ್ತಿರುವ ಈ ಬೃಹತ್ ಹಗರಣಕ್ಕೆ ಸಂಬಂಧಿಸಿದ 900 ಕ್ಕೂ ಹೆಚ್ಚು ಪುಟಗಳಷ್ಟು ಸಂಪೂರ್ಣ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಎನ್.ಆರ್ ರಮೇಶ್ ಬಿಡುಗಡೆ ಮಾಡಿದ್ದಾರೆ.

BREAKING: ಜೆಟ್ ಏರ್ವೇಸ್ ಸಂಸ್ಥಾಪಕ ‘ನರೇಶ್ ಗೋಯಲ್’ಗೆ ಮಧ್ಯಂತರ ಜಾಮೀನು ಮಂಜೂರು | Naresh Goyal

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಚುನಾವಣೆ ವೇಳೆ ಅಕ್ರಮ ಮತದಾನ : MLC ಎಂಟಿಬಿ ನಾಗರಾಜ್ ಗಂಭೀರ ಆರೋಪ

Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ ಮಹಾಮಳೆಗೆ ಮತ್ತಿಬ್ಬರು ಬಲಿ: ಮೃತರ ಸಂಖ್ಯೆ 3ಕ್ಕೆ ಏರಿಕೆ | Bengaluru Rain

19/05/2025 10:08 PM1 Min Read

BREAKING : ಬೆಂಗಳೂರಲ್ಲಿ ಮಳೆಗೆ ಮತ್ತಿಬ್ಬರು ಬಲಿ : ಅಪಾರ್ಟ್ಮೆಂಟ್ನಿಂದ ನೀರು ಹೊರ ಹಾಕುವಾಗ ವಿದ್ಯುತ್ ತಗುಲಿ ಸಾವು!

19/05/2025 9:48 PM1 Min Read

BREAKING : ಚಿಕ್ಕಮಂಗಳೂರಲ್ಲಿ ಧಾರಾಕಾರ ಮಳೆ : ಹವಾಮಾನ ಇಲಾಖೆಯಿಂದ ನಾಳೆ, ನಾಡಿದ್ದು ‘ರೆಡ್ ಅಲರ್ಟ್’ ಘೋಷಣೆ

19/05/2025 9:41 PM1 Min Read
Recent News

BREAKING: ಬೆಂಗಳೂರಲ್ಲಿ ಮಹಾಮಳೆಗೆ ಮತ್ತಿಬ್ಬರು ಬಲಿ: ಮೃತರ ಸಂಖ್ಯೆ 3ಕ್ಕೆ ಏರಿಕೆ | Bengaluru Rain

19/05/2025 10:08 PM

ಅಕ್ರಮ ವಲಸೆಗೆ ಅನುಕೂಲ ಮಾಡುವ ಭಾರತೀಯ ಟ್ರಾವೆಲ್ ಏಜೆಂಟ್‌ಗಳ ವೀಸಾ ನಿರ್ಬಂಧಿಸಿದ ಅಮೆರಿಕ

19/05/2025 9:59 PM

BREAKING : ಬೆಂಗಳೂರಲ್ಲಿ ಮಳೆಗೆ ಮತ್ತಿಬ್ಬರು ಬಲಿ : ಅಪಾರ್ಟ್ಮೆಂಟ್ನಿಂದ ನೀರು ಹೊರ ಹಾಕುವಾಗ ವಿದ್ಯುತ್ ತಗುಲಿ ಸಾವು!

19/05/2025 9:48 PM

BREAKING : ಚಿಕ್ಕಮಂಗಳೂರಲ್ಲಿ ಧಾರಾಕಾರ ಮಳೆ : ಹವಾಮಾನ ಇಲಾಖೆಯಿಂದ ನಾಳೆ, ನಾಡಿದ್ದು ‘ರೆಡ್ ಅಲರ್ಟ್’ ಘೋಷಣೆ

19/05/2025 9:41 PM
State News
KARNATAKA

BREAKING: ಬೆಂಗಳೂರಲ್ಲಿ ಮಹಾಮಳೆಗೆ ಮತ್ತಿಬ್ಬರು ಬಲಿ: ಮೃತರ ಸಂಖ್ಯೆ 3ಕ್ಕೆ ಏರಿಕೆ | Bengaluru Rain

By kannadanewsnow0919/05/2025 10:08 PM KARNATAKA 1 Min Read

ಬೆಂಗಳೂರು: ನಗರದಲ್ಲಿ ಮಹಾಮಳೆಯಾಗುತ್ತಿದೆ. ಈ ಮಳೆಯಿಂದಾಗಿ ಗೋಡೆಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಇದೀಗ ಮೋಟಾರ್ ನಿಂದ ಮಳೆ ನೀರು ತೆರವು ಮಾಡಲು…

BREAKING : ಬೆಂಗಳೂರಲ್ಲಿ ಮಳೆಗೆ ಮತ್ತಿಬ್ಬರು ಬಲಿ : ಅಪಾರ್ಟ್ಮೆಂಟ್ನಿಂದ ನೀರು ಹೊರ ಹಾಕುವಾಗ ವಿದ್ಯುತ್ ತಗುಲಿ ಸಾವು!

19/05/2025 9:48 PM

BREAKING : ಚಿಕ್ಕಮಂಗಳೂರಲ್ಲಿ ಧಾರಾಕಾರ ಮಳೆ : ಹವಾಮಾನ ಇಲಾಖೆಯಿಂದ ನಾಳೆ, ನಾಡಿದ್ದು ‘ರೆಡ್ ಅಲರ್ಟ್’ ಘೋಷಣೆ

19/05/2025 9:41 PM

ಬೆಂಗಳೂರು ನಗರದಲ್ಲಿನ ಮಳೆ ಅವಾಂತರ ಸಮಸ್ಯೆ ಶೇ.70ರಷ್ಟು ನಿವಾರಣೆ: ಡಿಸಿಎಂ ಡಿ.ಕೆ ಶಿವಕುಮಾರ್

19/05/2025 9:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.