Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇನ್ಮುಂದೆ ಮಗುವಿಗೆ ಜನ್ಮನೀಡಲಿದೆ ರೊಬೋಟ್‌ – ಅಚ್ಚರಿಯ ಸಂಶೋಧನೆಯತ್ತ ಚೀನಾ

26/08/2025 11:41 AM

ಟ್ರಂಪ್ ಸುಂಕ: ಅಂಗಡಿಗಳಲ್ಲಿ ‘ಸ್ವದೇಶಿ ಮಾತ್ರ’ ಫಲಕ ಇಡುವಂತೆ ಪ್ರಧಾನಿ ಮೋದಿ ಕರೆ | Swadeshi Only

26/08/2025 11:18 AM

ಬೊಜ್ಜು ಬಿಕ್ಕಟ್ಟು: ಪ್ರಧಾನಿ ಎಚ್ಚರಿಕೆ ನಂತರ ಮೊದಲ ಮಾರ್ಗಸೂಚಿ ಸಿದ್ಧಪಡಿಸಿದ ಕೇಂದ್ರ ಸರ್ಕಾರ

26/08/2025 11:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 24 ಗಂಟೆಯೊಳಗೆ ಕುಡಿಯುವ ‘ನೀರಿನ ಸಮಸ್ಯೆ’ ಬಗೆಹರಿಸಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ!
KARNATAKA

24 ಗಂಟೆಯೊಳಗೆ ಕುಡಿಯುವ ‘ನೀರಿನ ಸಮಸ್ಯೆ’ ಬಗೆಹರಿಸಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ!

By kannadanewsnow0706/03/2024 5:21 AM

ಬೆಂಗಳೂರು: ರಾಜ್ಯದ ಪ್ರತಿ ಗ್ರಾಮ ಮತ್ತು ವಾರ್ಡ್‍ಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು. ಸಮಸ್ಯೆ ಉದ್ಭವಿಸಿದಲ್ಲಿ 24 ಗಂಟೆಗಳೊಳಗಾಗಿ ಟ್ಯಾಂಕರ್, ಖಾಸಗಿ ಕೊಳವೆಬಾವಿ ಸೇರಿದಂತೆ ಯಾವುದೇ ಜಲಮೂಲಗಳಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅವರು ಮಂಗಳವಾರಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಹಿಂಗಾರು ಹಾಗೂ ಮುಂಗಾರು ಮಳೆ ಕೊರತೆಯಿಂದಾಗಿ ಭಾರಿ ಪ್ರಮಾಣದ ಬರಗಾಲ ಉಂಟಾಗಿದೆ. ಸುಮಾರು 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ಬರುವ ತೀವ್ರ ಬರಗಾಲವನ್ನು ಎದುರಿಸಲು ಸಜ್ಜಾಗಬೇಕಿದೆ ಎಂದು ತಿಳಿಸಿದರು.

ಪ್ರಸ್ತುತದಲ್ಲಿ ಇರುವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಮತ್ತು ಮುಂಬರುವ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಸೂಕ್ತ ಯೋಜನೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಮಾಧ್ಯಮಗಳಲ್ಲಿ ಪ್ರಕಟವಾಗುವ ಜನರ ಸಮಸ್ಯೆಗಳ ಕುರಿತ ವರದಿಗಳನ್ನು ಪರಿಶೀಲಿಸಿ, ಅವುಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಸೂಚಿಸಿದರು.

ಬರಗಾಲದಿಂದ ಜನರು ಗುಳೆ ಹೋಗುವುದನ್ನು ತಪ್ಪಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು, ಗ್ರಾಪಂ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ಶೀಘ್ರದಲ್ಲೇ ಚುನಾವಣಾ ನೀತಿಸಂಹಿತೆ ಜಾರಿಯಾಗಲಿರುವುದರಿಂದ ಚುನಾವಣಾ ಕೆಲಸದ ಜೊತೆಗೆ ಬರ ನಿರ್ವಹಣೆಯನ್ನು ನಿರ್ಲಕ್ಷಿಸಬಾರದು. ಬರನಿರ್ವಹಣೆಗೆ ನೀತಿಸಂಹಿತೆಯು ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು.
*ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿರಲಿ:* ಜಾನುವಾರುಗಳಿಗೆ ಮೇವಿನ ಕೊರತೆಯಾಗಬಾರದು. ಅಗತ್ಯ ಮೇವಿನ ದಾಸ್ತಾನು ಇಟ್ಟುಕೊಳ್ಳಬೇಕು. ಮೇವು ಅಂತರ್ ಜಿಲ್ಲಾ ಸಾಗಾಣಿಕೆ ಕುರಿತು ನಿಗಾವಹಿಸಬೇಕು ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈಗಾಗಲೇ ಜಿಲ್ಲೆಯ ರೈತರಿಗೆ ಮೊದಲ ಹಂತದ ಬರ ಪರಿಹಾರ ಹಣ ಜಮೆಯಾಗಿದ್ದು, ಬರ ಪರಿಹಾರ ಪಡೆಯದ ಅರ್ಹ ರೈತರನ್ನು ಗುರುತಿಸಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವಂತೆ ಕ್ರಮವಹಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

24 ಗಂಟೆಯೊಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ! Cm Siddaramaiah instructs officials to solve drinking water problem within 24 hours
Share. Facebook Twitter LinkedIn WhatsApp Email

Related Posts

ಇನ್ಮುಂದೆ ಮಗುವಿಗೆ ಜನ್ಮನೀಡಲಿದೆ ರೊಬೋಟ್‌ – ಅಚ್ಚರಿಯ ಸಂಶೋಧನೆಯತ್ತ ಚೀನಾ

26/08/2025 11:41 AM1 Min Read

BIG NEWS : ಬೆಂಗಳೂರಲ್ಲಿ ಕೇಸರಿ ಶಾಲು ಹಾಕಿದಕ್ಕೆ ಹಲ್ಲೆ ಆರೋಪ : ಮೂವರು ಕಿಡಿಗೇಡಿಗಳು ಅರೆಸ್ಟ್!

26/08/2025 11:12 AM1 Min Read

ಧರ್ಮಸ್ಥಳ ಪ್ರಕರಣ : ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಹಾರ್ಡ್ ಡಿಸ್ಕ್ ಸೇರಿದಂತೆ ಹಲವು ದಾಖಲೆ ವಶಕ್ಕೆ ಪಡೆದ ‘SIT’

26/08/2025 10:39 AM1 Min Read
Recent News

ಇನ್ಮುಂದೆ ಮಗುವಿಗೆ ಜನ್ಮನೀಡಲಿದೆ ರೊಬೋಟ್‌ – ಅಚ್ಚರಿಯ ಸಂಶೋಧನೆಯತ್ತ ಚೀನಾ

26/08/2025 11:41 AM

ಟ್ರಂಪ್ ಸುಂಕ: ಅಂಗಡಿಗಳಲ್ಲಿ ‘ಸ್ವದೇಶಿ ಮಾತ್ರ’ ಫಲಕ ಇಡುವಂತೆ ಪ್ರಧಾನಿ ಮೋದಿ ಕರೆ | Swadeshi Only

26/08/2025 11:18 AM

ಬೊಜ್ಜು ಬಿಕ್ಕಟ್ಟು: ಪ್ರಧಾನಿ ಎಚ್ಚರಿಕೆ ನಂತರ ಮೊದಲ ಮಾರ್ಗಸೂಚಿ ಸಿದ್ಧಪಡಿಸಿದ ಕೇಂದ್ರ ಸರ್ಕಾರ

26/08/2025 11:12 AM

BIG NEWS : ಬೆಂಗಳೂರಲ್ಲಿ ಕೇಸರಿ ಶಾಲು ಹಾಕಿದಕ್ಕೆ ಹಲ್ಲೆ ಆರೋಪ : ಮೂವರು ಕಿಡಿಗೇಡಿಗಳು ಅರೆಸ್ಟ್!

26/08/2025 11:12 AM
State News
KARNATAKA

ಇನ್ಮುಂದೆ ಮಗುವಿಗೆ ಜನ್ಮನೀಡಲಿದೆ ರೊಬೋಟ್‌ – ಅಚ್ಚರಿಯ ಸಂಶೋಧನೆಯತ್ತ ಚೀನಾ

By kannadanewsnow0726/08/2025 11:41 AM KARNATAKA 1 Min Read

ನವದೆಹಲಿ: ಚೀನಾದ ವಿಜ್ಞಾನಿಗಳು ಗರ್ಭಧಾರಣೆಯನ್ನು ಅನುಕರಿಸಲು ಮತ್ತು ಜೀವಂತ ಮಗುವಿಗೆ ಜನ್ಮ ನೀಡಲು ವಿನ್ಯಾಸಗೊಳಿಸಲಾದ ಹುಮನಾಯ್ಡ್ ರೋಬೋಟ್ ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ…

BIG NEWS : ಬೆಂಗಳೂರಲ್ಲಿ ಕೇಸರಿ ಶಾಲು ಹಾಕಿದಕ್ಕೆ ಹಲ್ಲೆ ಆರೋಪ : ಮೂವರು ಕಿಡಿಗೇಡಿಗಳು ಅರೆಸ್ಟ್!

26/08/2025 11:12 AM

ಧರ್ಮಸ್ಥಳ ಪ್ರಕರಣ : ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಹಾರ್ಡ್ ಡಿಸ್ಕ್ ಸೇರಿದಂತೆ ಹಲವು ದಾಖಲೆ ವಶಕ್ಕೆ ಪಡೆದ ‘SIT’

26/08/2025 10:39 AM

ಸರ್ಕಾರಿ ನೌಕರ, ಪತ್ನಿ ಇಬ್ಬರು ಮೃತಪಟ್ಟಲ್ಲಿ, ಆತನ ಸಹೋದರನಿಗೆ ಅನುಕಂಪದ ನೌಕರಿ ನೀಡಬಹುದು : ಹೈಕೋರ್ಟ್

26/08/2025 10:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.