ಬೆಂಗಳೂರು : ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ, ಈ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಕೆಂಪೇಗೌಡರ ಜಯಂತಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಕೋಟ್ಯಂತರ ಜನರ ಬದುಕಿಗೆ ನೆಲೆ ಒದಗಿಸಿರುವ ಬೆಂಗಳೂರು ನಗರ ನಾಡಪ್ರಭು ಕೆಂಪೇಗೌಡ ದೂರದೃಷ್ಟಿ ಆಡಳಿತದ ಫಲ. ದಕ್ಷ ಆಡಳಿತಗಾರ, ಧೀಮಂತ ನಾಯಕ, ನಾಡಪ್ರಭುವೆಂದೇ ಹೆಸರುವಾಸಿಯಾಗಿರುವ ಕೆಂಪೇಗೌಡರಿಗೆ ಅವರ ಜನ್ಮದಿನದಂದು ಗೌರವದಿಂದ ನಮಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.