Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Valentine’s Day: ಗುಲಾಬಿಗಳ ಅಗತ್ಯವಿಲ್ಲ: ಪ್ರಣಯವು ಪ್ರತಿದಿನ ಬೆಳೆಯುವ ಸೂಕ್ಷ್ಮ ವಿಧಾನಗಳಿವು

09/02/2026 3:01 PM

ವಯಸ್ಕರು ತಮ್ಮ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು, ಪೋಷಕರು ಮಧ್ಯಪ್ರವೇಶಿಸುವಂತಿಲ್ಲ ; ಹೈಕೋರ್ಟ್ ಮಹತ್ವದ ತೀರ್ಪು

09/02/2026 2:54 PM

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

09/02/2026 2:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIGG NEWS: ಮಾನವೀಯತೆ ಮೆರೆದ ಸಿಎಂ ಸಿದ್ಧರಾಮಯ್ಯ: ಒಂದೇ ದಿನದಲ್ಲಿ ಬಡ ಕುಟುಂಬಕ್ಕೆ ಸೈಟ್ ಮಂಜೂರು | CM Siddaramaiah
KARNATAKA

BIGG NEWS: ಮಾನವೀಯತೆ ಮೆರೆದ ಸಿಎಂ ಸಿದ್ಧರಾಮಯ್ಯ: ಒಂದೇ ದಿನದಲ್ಲಿ ಬಡ ಕುಟುಂಬಕ್ಕೆ ಸೈಟ್ ಮಂಜೂರು | CM Siddaramaiah

By kannadanewsnow0903/12/2024 4:42 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನಿನ್ನೆ ಮಹಿಳೆಯೊಬ್ಬರು ಭೇಟಿಯಾಗಿ, ತನಗೆ ನಿವೇಶನ ಇಲ್ಲ. ಗಂಡ ಮತ್ತು ಇಬ್ಬರು ಮಕ್ಕಳಿದ್ದಾರೆ. ಬಾಡಿಗೆ ಕಟ್ಟೋದಕ್ಕೂ ಕಷ್ಟವಾಗುತ್ತಿದೆ ಎಂಬುದಾಗಿ ಅಲವತ್ತುಕೊಂಡು, ನಿವೇಶನಕ್ಕೆ ಮನವಿ ಮಾಡಿದ್ದರು. ಅವರು ಮನವಿ ಮಾಡಿದಂತ ಒಂದೇ ದಿನದಲ್ಲಿ ನಿವೇಶನ ಮಂಜೂರು ಮಾಡಿ ಆದೇಶಿಸಲಾಗಿದೆ.

ಈ ಸಂಬಂಧ ತುಮಕೂರು ಜಿಲ್ಲೆಯ ಶಿರಾ ನಗರಸಭೆಯ ಪೌರಾಯುಕ್ತರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ದಿನಾಂಕ 02-12-2024ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತುಮಕೂರಿಗೆ ಭೇಟಿ ನೀಡಿದಂತ ಸಂದರ್ಭದಲ್ಲಿ ರಾಬಿಯಾ ಕೋಂ ಅಸ್ಲಂ ಪಾಷಾ ಎಂಬುವರು ತಾತ್ಕಾಲಿಕ ನಿವೇಶನ ಕೋರಿ ಮನವಿ ಸಲ್ಲಿಸಿದ್ದರು.

ಅವರು ಸಲ್ಲಿಸಿದಂತ ಮನವಿಯಲ್ಲಿ ತಾನು ಶಿರಾ ಟೌನ್ ನಿವಾಸಿಯಾಗಿದ್ದು, ಕಡು ಬಡವರಾಗಿದ್ದೇವೆ. ಗಂಡ ಮತ್ತು ಎರಡು ಪುಟ್ಟ ಮಕ್ಕಳನ್ನು ನೋಡಿಕೊಂಡು ಬಾಡಿಗೆ ಕಟ್ಟಲು ಸಾಧ್ಯವಿಲ್ಲದ ಕಾರಣ ತಾತ್ಕಾಲಿಕವಾಗಿ ನಿವೇಶನವನ್ನು ಕಲ್ಪಿಸುವಂತೆ ಕೋರಿದ್ದರು ಎಂದಿದ್ದಾರೆ.

ಸದರಿ ಕೋರಿಯನ್ನು ಶಿರಾ ಆಶ್ರಯ ಸಮಿತಿಯ ಸಭೆಯಲ್ಲಿ ಪರಿಗಣಿಸಿ, ಶಿರಾ ನಗರದ ಸರ್ವೆ ನಂಬಬರ್.100ರಲ್ಲಿ ನಗರ ಆಶ್ರಯ ಯೋಜನೆಯಡಿ ರಚಿಸಲಾಗಿರುವ ನಿವೇಶನಗಳ ಪೈಕಿ 20×30 ಅಳತೆಯ ಒಂದು ನಿವೇಶವನ್ನು ಸದರಿಯವರಿಗೆ ಹಂಚಿಕೆ ಮಾಡಲು ಠರಾವು ಅಂಗೀಕರಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಇವರು ರಾಜೀವ್ ಗಾಂಧಿ ವಸತಿ ನಿಗಮ, ಬೆಂಗಳೂರು ಇವರಿಗೆ ದಾಖಲೆಗಳನ್ನು ಸಲ್ಲಿಸಿ ನಿಯಮಾನುಸಾರ ಹಕ್ಕು ಪತ್ರ ಸೃಜಿಸಿ, ವಿತರಿಸಲು ಕ್ರಮವಹಿಸಲಾಗಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ನಿನ್ನೆ ಮುಖ್ಯಮಂತ್ರಿಗಳಿಗೆ ಬಡ ಕುಟುಂಬದ ಮಹಿಳೆ ತನಗೆ ನಿವೇಶನವಿಲ್ಲ. ಬಾಡಿಗೆ ಮನೆಯಲ್ಲಿ ಇದ್ದೀವಿ. ಬಾಡಿಗೆ ಕಟ್ಟೋದಕ್ಕೂ ಕಷ್ಟವಾಗುತ್ತಿದೆ ಎಂಬುದಾಗಿ ಗೋಳಾಡುತ್ತಲೇ ಸಿದ್ಧರಾಮಯ್ಯಗೆ ಮನವಿ ನೀಡಿದ್ದರು. ನಿವೇಶನ ನೀಡಿ, ಮನೆ ಮಂಜೂರು ಮಾಡಿಸಿಕೊಡುವಂತೆಯೂ ಮನವಿಯಲ್ಲಿ ಕೋರಿದ್ದರು. ಈ ಮನವಿಗೆ ಮಾನವೀಯತೆಯನ್ನು ಮೆರೆದಂತ ಸಿಎಂ ಸಿದ್ಧರಾಮಯ್ಯ ಒಂದೇ ದಿನದಲ್ಲಿ ಸೈಟ್ ಮಂಜೂರು ಮಾಡಿ ಆದೇಶಿಸಿದ್ದಾರೆ.

ಕೈಗಾರಿಕಾ ಘಟಕದ ಶೇಖರಣಾ ಟ್ಯಾಂಕರ್ ಸ್ಪೋಟಗೊಂಡು ನಾಲ್ವರು ಕಾರ್ಮಿಕರು ದುರ್ಮರಣ

BREAKING: ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಗೆ ಬಿಗ್ ರಿಲೀಫ್: ಚುನಾವಣಾ ಬಾಂಡ್ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶ

Share. Facebook Twitter LinkedIn WhatsApp Email

Related Posts

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

09/02/2026 2:52 PM2 Mins Read

BREAKING: ನಮ್ಮ ಮೆಟ್ರೋ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಪೊಲೀಸರು ವಶಕ್ಕೆ

09/02/2026 2:47 PM1 Min Read

ಫೆ.10ರ ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ | Power Cut

09/02/2026 2:24 PM2 Mins Read
Recent News

Valentine’s Day: ಗುಲಾಬಿಗಳ ಅಗತ್ಯವಿಲ್ಲ: ಪ್ರಣಯವು ಪ್ರತಿದಿನ ಬೆಳೆಯುವ ಸೂಕ್ಷ್ಮ ವಿಧಾನಗಳಿವು

09/02/2026 3:01 PM

ವಯಸ್ಕರು ತಮ್ಮ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು, ಪೋಷಕರು ಮಧ್ಯಪ್ರವೇಶಿಸುವಂತಿಲ್ಲ ; ಹೈಕೋರ್ಟ್ ಮಹತ್ವದ ತೀರ್ಪು

09/02/2026 2:54 PM

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

09/02/2026 2:52 PM

BREAKING: ನಮ್ಮ ಮೆಟ್ರೋ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಪೊಲೀಸರು ವಶಕ್ಕೆ

09/02/2026 2:47 PM
State News
KARNATAKA

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

By kannadanewsnow5709/02/2026 2:52 PM KARNATAKA 2 Mins Read

ಇಂದು ನಮ್ಮ ಮೊಬೈಲ್ ಫೋನ್ ಕೇವಲ ಕರೆಗಳನ್ನು ಮಾಡುವ ಸಾಧನವಲ್ಲ. ಬ್ಯಾಂಕಿಂಗ್‌ನಿಂದ ಹಿಡಿದು UPI ಪಾವತಿಗಳು, ಆನ್‌ಲೈನ್ ಅಧ್ಯಯನಗಳು, ಕಚೇರಿ…

BREAKING: ನಮ್ಮ ಮೆಟ್ರೋ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಪೊಲೀಸರು ವಶಕ್ಕೆ

09/02/2026 2:47 PM

ಫೆ.10ರ ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ | Power Cut

09/02/2026 2:24 PM

ಕೋಳಿ -ಕುರಿ ಮಾಂಸಕ್ಕಿಂತ ಶಕ್ತಿಶಾಲಿ : ಮೀನಿನ ಈ ಭಾಗ ತಿನ್ನುವುದರಿಂದ ಸಿಗಲಿವೆ ಹಲವು ಪ್ರಯೋಜನಗಳು.!

09/02/2026 2:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.