ಚೀನಾ: ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಉಲ್ಬಣಗೊಂಡಿದೆ. ಕೊರೋನಾ ಆರ್ಭಟದಿಂದ ಚೀನಾ ತತ್ತರಿಸಿ ಹೋಗಿದೆ. ಈ ಬೆನ್ನಲ್ಲೇ ದೇಶದಲ್ಲಿ ರಕ್ತದ ಕೊರತೆ ಕೂಡ ಎದುರಾಗಿರೋದಾಗಿ ತಿಳಿದು ಬಂದಿದೆ.

ಚೀನಾ, ಕೊರಿಯಾ ಮತ್ತು ಜಪಾನ್ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ ಆದರೆ ಕಾಂಗ್ರೆಸ್ ಕೇವಲ ಒಂದು ಕುಟುಂಬದ ಬಗ್ಗೆ ಮಾತ್ರ ಚಿಂತಿಸುತ್ತಿದೆ. ಇದು ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುವ ಸಮಯ. ನಾನು ರಾಹುಲ್ ಗಾಂಧಿ ಅವರನ್ನು ಕೇಳಲು ಬಯಸುತ್ತೇನೆ, ಅವರು ಅಥವಾ ಎಚ್ಪಿ ಸಿಎಂ ಅವರೊಂದಿಗೆ ಸಂಪರ್ಕಕ್ಕೆ ಬಂದ ಇತರ ಕಾಂಗ್ರೆಸ್ ನಾಯಕರು ಪಾಸಿಟಿವ್ ಬಂದಿದ್ದಾರೆಯೇ, ಐಸೋಲೇಟ್ ಆಗಿದ್ದಾರೆಯೇ ಅಥವಾ ಪರೀಕ್ಷೆಗೆ ಒಳಗಾಗುತ್ತಾರೆಯೇ? ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕಿಡಿಕಾರಿದ್ದಾರೆ.

“ಭಾರತ್ ಜೋಡೋ ಯಾತ್ರೆಯಿಂದಾಗಿ ಬಿಜೆಪಿ ಭಯಭೀತವಾಗಿದೆ ಮತ್ತು ಕೋವಿಡ್ ಅನ್ನು ಕ್ಷಮಿಸುತ್ತಿದೆ. ಎಲ್ಲಿಯೂ ಕೋವಿಡ್ ಇಲ್ಲ. ಯಾರಿಗೂ ಏನೂ ಆಗಲಿಲ್ಲ. ಸ್ವತಃ ಪ್ರಧಾನಿ ಮೋದಿ ಅವರು ಮಾಸ್ಕ್ ಧರಿಸುವುದಿಲ್ಲ. ಜನರಲ್ಲಿ ಭಯವನ್ನು ಸೃಷ್ಟಿಸಲು ಮತ್ತು ಈ ಯಾತ್ರೆಯನ್ನು ಮುರಿಯಲು ಇದೆಲ್ಲವನ್ನೂ ಮಾಡಲಾಗುತ್ತಿದೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದೇ ಸಂದರ್ಭದಲ್ಲಿ ಚೀನಾದಲ್ಲಿ ಮಹಾಮಾರಿ ಕೊರೋನಾ ಆರ್ಭಟಿಸುತ್ತಿದೆ. ಈ ಹಿನ್ನಲೆಯಲ್ಲಿಯೇ ಅನೇಕ ಕಡೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮವಾಗಿ ಲಾಕ್ ಡೌನ್ ಕೂಡ ಘೋಷಿಸಲಾಗಿದೆ. ಇದಷ್ಟೇ ಅಲ್ಲದೇ ಚೀನಾದಲ್ಲಿ ಕೋವಿಡ್ ಬಳಿಕ, ಈಗ ರಕ್ತದ ಕೊರತೆ ಎದುರಾಗಿದೆ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ.

ಭಾರತ್‌ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ ಸೂಪರ್ ಸ್ಟಾರ್ ಕಮಲ್ ಹಾಸನ್ | Bharat Jodo Yatra

ವಿಕಲಚೇತನರಿಗೆ ಮಹತ್ವದ ಮಾಹಿತಿ: ಬಿಎಂಟಿಸಿ ಬಸ್ ಪಾಸ್ ಗೆ ಅರ್ಜಿ ಆಹ್ವಾನ, ಹಳೆಯ ಪಾಸ್ ಅವಧಿಯೂ ವಿಸ್ತರಣೆ

ಜೆಡಿಎಸ್ ಅಧಿಕಾರಕ್ಕೆ ಬಂದರೇ 100 ದಿನದಲ್ಲಿ ಎನ್ ಪಿಎಸ್ ರದ್ದು – ಸಿ.ಎಂ ಇಬ್ರಾಹಿಂ | JDS Party

Share.
Exit mobile version