ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಇಂದು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಭಾಷಣ ಮಾಡಿದ್ದಾರೆ.
ಹೌದು, ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ವೇಳೆ ಅರ್ಚಕರು ಸಿಎಂ ಸಿದ್ದರಾಮಯ್ಯಗೆ ನಿಂಬೆ ಹಣ್ಣು ಕೊಟ್ಟಿದ್ದಾರೆ. ಈ ವೇಳೆ ನಿಂಬೆಹಣ್ಣು ತಗೆದುಕೊಂಡು ಕೈಮುಗಿದು ನಿಂಬೆಹಣ್ಣು ಇಟ್ಟುಕೊಂಡಿದ್ದಾರೆ.
ಭಾಷಣ ಮಾಡುವಾಗಲೂ ಸಿಎಂ ಸಿದ್ದರಾಮಯ್ಯ ನಿಂಬೆಹಣ್ಣು ಕೈಯಲ್ಲೇ ಇಟ್ಟುಕೊಂಡಿದ್ದರು. ಸದ್ಯ ಈ ಘಟನೆ ಅಚ್ಚರಿ ಮೂಡಿಸಿದೆ.