Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕರ್ನಾಟಕದ ನಾವೀನ್ಯತೆ ಮತ್ತು ಕೌಶಲ್ಯ ಸಹಯೋಗದ ಬಗ್ಗೆ ನ್ಯೂಜಿಲೆಂಡ್ ನಿಯೋಗಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಮನವರಿಕೆ

14/01/2026 2:50 PM

ತುಮಕೂರಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಹೆಸರು ಬದಲಿಸಿರುವುದು ಗಾಂಧೀಜಿಗೆ ಮಾಡಿದ ಅಪಮಾನ: ಬೊಮ್ಮಾಯಿ

14/01/2026 2:48 PM

ALERT : ತೊಳೆಯದ `ತಲೆದಿಂಬು’ ಬಳಸುವವರೇ ಎಚ್ಚರ : ಇದರಲ್ಲಿವೆ ಟಾಯ್ಲೆಟ್ ಸೀಟ್ ಗಿಂತ ಡೇಂಜರ್ ಬ್ಯಾಕ್ಟೀರಿಯಾ.!

14/01/2026 2:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತುಮಕೂರಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಹೆಸರು ಬದಲಿಸಿರುವುದು ಗಾಂಧೀಜಿಗೆ ಮಾಡಿದ ಅಪಮಾನ: ಬೊಮ್ಮಾಯಿ
KARNATAKA

ತುಮಕೂರಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಹೆಸರು ಬದಲಿಸಿರುವುದು ಗಾಂಧೀಜಿಗೆ ಮಾಡಿದ ಅಪಮಾನ: ಬೊಮ್ಮಾಯಿ

By kannadanewsnow0914/01/2026 2:48 PM

ಬೆಂಗಳೂರು: ತುಮಕೂರಿನಲ್ಲಿ ಮಹಾತ್ಮ ಗಾಂಧಿ ಕ್ರಿಡಾಂಗಣ ಹೆಸರು ಬದಲಿಸುವ ದುಸ್ಸಾಹಸಕ್ಕೆ ಕೈ ಹಾಕಿ ರಾಜ್ಯ ಸರ್ಕಾರ ಪರಮೇಶ್ವರ ಹೆಸರು ಇಡುತ್ತಿರುವುದು ಅಕ್ಷಮ್ಯ ಅಪರಾಧ ಕಾಂಗ್ರೆಸ್ ನ ಒಂದು ಮುಖವಾಡ ಕಳಚಿ ಬಿದ್ದಿದೆ. ಕರ್ನಾಟಕದಲ್ಲಿ ರಾಜಿವ್ ಗಾಂಧಿ ಯುನಿವರ್ಸಿಟಿ, ಸಂಜಯ ಗಾಂಧಿ ಆಸ್ಪತ್ರೆಗೆ ಮಹಾತ್ಮಾಗಾಂಧಿ ಹೆಸರಿಡಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮನರೇಗಾ ಹೆಸರು ಬದಲಿಸಿರುವುದಕ್ಕೆ ಕಾಂಗ್ರೆಸ್ ನವರು ದೊಡ್ಡದಾಗಿ ವಿರೋಧ ಮಾಡಿದ್ದಾರೆ. ಅವರು ಮಾತಾಡವುದೊಂದು ಮಾಡೊದಂದು ಇಷ್ಟೆಲ್ಲ ನಡೆಯುತ್ತಿರುವ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಹೆಸರು ಬದಲಿಸಿ ದುಸ್ಸಾಹಸ ಮಾಡಿರುವುದು ಗಾಂಧಿಗೆ ಮಾಡಿರುವ ಅಪಮಾನ. ಪರಮೇಶ್ವರ ಅವರು ತಮ್ಮ ಕಾಲೇಜಿನ ಯಾವುದಾದರೂ ಗ್ರೌಂಡ್ ಗೆ ತಮ್ಮ ಹೆಸರು ಇಡಬೇಕಿತ್ತು. ನಮ್ಮ ಕಾಲದಲ್ಲಿ ತುಮಕೂರು ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿ ಮಾಡಿದ್ದೇವೆ. ನಾನೇ ಉದ್ಘಾಟನೆ ಮಾಡಿದ್ದೇನೆ ಎಂದು ಹೇಳಿದರು.

ಕರ್ನಾಕದಲ್ಲಿ ರಾಜೀವ್ ಗಾಂದಿ ಯುನಿವರ್ಸಿಟಿ ಇದೆ ಅದನ್ನು ಮಹಾತ್ಮಾ ಗಾಂಧಿ ಯುನಿವರ್ಸಿಟಿ ಅಂತ ಇಡಲಿ, ಸಂಜಯ ಗಾಂಧಿ ಆಸ್ಪತ್ರೆ ಇದೆ. ಸಂಜಯ್ ಗಾಂಧಿ ಏನು ರಾಷ್ಟ್ರೀಯ ನಾಯಕರಲ್ಲ, ಅದಕ್ಕೂ ಮಹಾತ್ಮಾ ಗಾಂಧಿ ಹೆಸರಿಡಲಿ, ರಾಜ್ಯ ಕಾಂಗ್ರೆಸ್ ನಾಯಕರಿಗೆ ನೆಹರು ಕುಟುಂಬದ ಭಜನೆ ಬಿಟ್ಟರೆ ಬೇರೆ ಏನು ಇಲ್ಲ. ಮಹತ್ಮಾಗಾಂಧಿ ತತ್ವ ಕೊಲೆ ಮಾಡಿದ್ದು ಕಾಂಗ್ರೆಸ್ ನವರು. ಗಾಂಧಿಜಿ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ನ್ನು ವಿಸರ್ಜನೆ ಮಾಡಿ ಅಂತ ಹೇಳಿದ್ದರು. ಅದನ್ನು ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಮುಂದುವರೆಸಿಕೊಂಡು ಬಂದಿದೆ. ಮಹಾತ್ಮಾ ಗಾಂಧಿ ಹೆಸರು ಹೇಳಲು ಸಿಎಂ, ಡಿಸಿಎಂಗೆ ನೈತಿಕತೆಯಿಲ್ಲ‌ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಹೈ ಕಮಾಂಡ್ ಅಸಮರ್ಥ

ನಾಯಕತ್ವ ಗೊಂದಲ ಹಿನ್ನೆಲೆಯಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಮೈಸೂರಿನಲ್ಲಿ ಭೇಟಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೋಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ಅಸಮರ್ಥ ಆಗಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದೇ ಅವರ ನೀತಿ. ಗಡಿಯಾರ ಕೆಟ್ಟು ಹೋದರೂ ದಿನಕ್ಕೆ ಎರಡು ಬಾರಿ ಸರಿಯಾಗಿ ಸಮಯ ತೋರಿಸುತ್ತದೆ. ರಾಹುಲ್ ಭೇಟಿಯಿಂದ ರಾಜ್ಯಕ್ಕೆ ಏನೂ ಪ್ರಯೋಜ‌ ಇಲ್ಲ ಎಂದು ಹೇಳಿದರು.

ಸಂಸ್ಕೃತಿಯ ಸಂಕೇತ

ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ನ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿರುವ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಖರ್ಗೆಯವರು ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ. ಮೋದಿಯವರು ವಿಕಸಿತ ಭಾರತದ ಜೊತೆಗೆ ವಿರಾಸತ್ ಭಾರತ ಅಂತ ಹೇಳಿದ್ದಾರೆ. ವಿಶ್ವದಲ್ಲಿ ಭಾರತದ ಅಭಿವೃದ್ಧಿ ಶೇ 7.5 ರಷ್ಟಿದೆ. ಅಮೆರಿಕಾ ಶೇ 2, ಜಪಾನ್ ಶೇ. 3, ಚೀನಾ ಶೇ 4 ರಷ್ಟು ಅಭಿವೃದ್ಧಿ ಇದೆ. ನಮ್ಮ ಭಾರತದ ಗುರುತು ಸಂಸ್ಕಾರ ಸಂಸ್ಕೃತಿಯಲ್ಲಿದೆ. ಸೋಮನಾಥ ಟೆಂಪಲ್ ನಮ್ಮ ಸಂಸ್ಕೃತಿ ಧರ್ಮದ ಸಂಕೇತ. ಸೋಮನಾಥ ಟೆಂಪಲ್ ಮೇಲೆ ಮೂರು ಬಾರಿ ದಾಳಿಯಾದರೂ ಎದ್ದು ನಿಂತಿದೆ. ಅದೇ ರೀತಿ ನವ ಭಾರತ ಎದ್ದು ನಿಂತಿದೆ‌. ವಿರಾಸತನ್ನು ಜನರಿಗೆ ತಿಳಿಸಲು ಮೋದಿ ಅಲ್ಲಿಗೆ ಹೋಗಿದ್ದಾರೆ. ಅದು ಕಾಂಗ್ರೆಸ್ ನವರಿಗೆ ಅರ್ಥ ಆಗುವುದಿಲ್ಲ ಎಂದು ಹೇಳಿದರು.

ಬಳ್ಳಾರಿಯಲ್ಲಿ ಸಮಾವೇಶ

ಬಳ್ಳಾರಿಯಿಂದ ಪಾದಯಾತ್ರೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಬಳ್ಳಾರಿಯಲ್ಲಿ ಮೊದಲು ದೊಡ್ಡ ಪ್ರಮಾಣದಲ್ಲಿ ಸಮಾವೇಶ ಮಾಡುತ್ತೇವೆ. ಕಾಂಗ್ರೆಸ್ ವಿರುದ್ದ ಬರುವಂತ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪಾದಯಾತ್ರೆ ಮಾಡುತ್ತೇವೆ. ಈ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ದರ ಏರಿಕೆ ಅಗತ್ಯವಿಲ್ಲ

ನಮ್ಮ ಮೆಟ್ರೊ ಪಯಾಣ ದರ ಹೆಚ್ಚಳ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೆಟ್ರೊ ಅಧಿಕಾರಿಗಳು ರಾಜ್ಯ ಸರ್ಕಾರದವರು ಅವರು ವೆಚ್ಚವನ್ನು ಜನರ ಮುಂದಿಡಲಿ, ಯೋಜನೆಯಲ್ಲಿನ ವಿಳಂಬ, ದುಂದು ವೆಚ್ಚದಿಂದ ಸೋರಿಕೆಯಾಗುತ್ತಿದೆ. ಈಗೇನು ದರ ಏರಿಕೆ ಮಾಡುವ ಅವಶ್ಯಕತೆ ಇಲ್ಲ. ಮೆಟ್ರೊ ನಿರ್ವಹಣೆಯಲ್ಲಿ ಲೋಪ, ಭ್ರಷ್ಟಾಚಾರ ಇದೆ ಅದನ್ನು ಮುಚ್ಚಲು ಮೆಟ್ರೊ ಪ್ರಯಾಣ ದರ ಹೆಚ್ಚಿಸುತ್ತಿದ್ದಾರೆ ಎಂದು ಆರೋಪಿಸಿದರು.

Share. Facebook Twitter LinkedIn WhatsApp Email

Related Posts

ಕರ್ನಾಟಕದ ನಾವೀನ್ಯತೆ ಮತ್ತು ಕೌಶಲ್ಯ ಸಹಯೋಗದ ಬಗ್ಗೆ ನ್ಯೂಜಿಲೆಂಡ್ ನಿಯೋಗಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಮನವರಿಕೆ

14/01/2026 2:50 PM2 Mins Read

ALERT : ತೊಳೆಯದ `ತಲೆದಿಂಬು’ ಬಳಸುವವರೇ ಎಚ್ಚರ : ಇದರಲ್ಲಿವೆ ಟಾಯ್ಲೆಟ್ ಸೀಟ್ ಗಿಂತ ಡೇಂಜರ್ ಬ್ಯಾಕ್ಟೀರಿಯಾ.!

14/01/2026 2:11 PM2 Mins Read

ಮಹಿಳೆಯರೇ ಗಮನಿಸಿ : ಈ ಸರಳ ಟ್ರಿಕ್ಸ್ ಬಳಸಿ ಜಸ್ಟ್ 2 ನಿಮಿಷದಲ್ಲಿ `ಬೆಳ್ಳುಳ್ಳಿ ಸಿಪ್ಪೆ’ ತೆಗೆಯಬಹುದು.!

14/01/2026 1:55 PM2 Mins Read
Recent News

ಕರ್ನಾಟಕದ ನಾವೀನ್ಯತೆ ಮತ್ತು ಕೌಶಲ್ಯ ಸಹಯೋಗದ ಬಗ್ಗೆ ನ್ಯೂಜಿಲೆಂಡ್ ನಿಯೋಗಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಮನವರಿಕೆ

14/01/2026 2:50 PM

ತುಮಕೂರಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಹೆಸರು ಬದಲಿಸಿರುವುದು ಗಾಂಧೀಜಿಗೆ ಮಾಡಿದ ಅಪಮಾನ: ಬೊಮ್ಮಾಯಿ

14/01/2026 2:48 PM

ALERT : ತೊಳೆಯದ `ತಲೆದಿಂಬು’ ಬಳಸುವವರೇ ಎಚ್ಚರ : ಇದರಲ್ಲಿವೆ ಟಾಯ್ಲೆಟ್ ಸೀಟ್ ಗಿಂತ ಡೇಂಜರ್ ಬ್ಯಾಕ್ಟೀರಿಯಾ.!

14/01/2026 2:11 PM

ಮಹಿಳೆಯರೇ ಗಮನಿಸಿ : ಈ ಸರಳ ಟ್ರಿಕ್ಸ್ ಬಳಸಿ ಜಸ್ಟ್ 2 ನಿಮಿಷದಲ್ಲಿ `ಬೆಳ್ಳುಳ್ಳಿ ಸಿಪ್ಪೆ’ ತೆಗೆಯಬಹುದು.!

14/01/2026 1:55 PM
State News
KARNATAKA

ಕರ್ನಾಟಕದ ನಾವೀನ್ಯತೆ ಮತ್ತು ಕೌಶಲ್ಯ ಸಹಯೋಗದ ಬಗ್ಗೆ ನ್ಯೂಜಿಲೆಂಡ್ ನಿಯೋಗಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಮನವರಿಕೆ

By kannadanewsnow0914/01/2026 2:50 PM KARNATAKA 2 Mins Read

ಬೆಂಗಳೂರು: ನ್ಯೂಜಿಲ್ಯಾಂಡ್‌ ಪ್ರಧಾನ ಮಂತ್ರಿಗಳ ಏಷ್ಯಾ ವಿದ್ಯಾರ್ಥಿವೇತನ (PMSA) ಕಾರ್ಯಕ್ರಮದ ಭಾಗವಾಗಿರುವ ನ್ಯೂಜಿಲೆಂಡ್‌ನ ನಾವೀನ್ಯತೆ ಪರಿಸರ ವ್ಯವಸ್ಥೆಯ ನಿಯೋಗವು ಗ್ರಾಮೀಣಾಭಿವೃದ್ಧಿ ಮತ್ತು…

ತುಮಕೂರಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಹೆಸರು ಬದಲಿಸಿರುವುದು ಗಾಂಧೀಜಿಗೆ ಮಾಡಿದ ಅಪಮಾನ: ಬೊಮ್ಮಾಯಿ

14/01/2026 2:48 PM

ALERT : ತೊಳೆಯದ `ತಲೆದಿಂಬು’ ಬಳಸುವವರೇ ಎಚ್ಚರ : ಇದರಲ್ಲಿವೆ ಟಾಯ್ಲೆಟ್ ಸೀಟ್ ಗಿಂತ ಡೇಂಜರ್ ಬ್ಯಾಕ್ಟೀರಿಯಾ.!

14/01/2026 2:11 PM

ಮಹಿಳೆಯರೇ ಗಮನಿಸಿ : ಈ ಸರಳ ಟ್ರಿಕ್ಸ್ ಬಳಸಿ ಜಸ್ಟ್ 2 ನಿಮಿಷದಲ್ಲಿ `ಬೆಳ್ಳುಳ್ಳಿ ಸಿಪ್ಪೆ’ ತೆಗೆಯಬಹುದು.!

14/01/2026 1:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.