ನವದೆಹಲಿ: ಕೇಂದ್ರ ಸರ್ಕಾರವು ಕೃಷ್ಣಾ ನದಿ ನ್ಯಾಯಮಂಡಳಿಯ ಅವಧಿಯನ್ನು ವಿಸ್ತರಣೆ ಮಾಡಿ ಆದೇಶಿಸಿದೆ. ಮತ್ತೆ ಜುಲೈ.31, 2026ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.
ಈ ಸಂಬಂಧ ಕೇಂದ್ರ ಸರ್ಕಾರ ಆದೇಶಿಸಿದ್ದು, ಕೃಷ್ಣ ನದಿ ನ್ಯಾಯಮಂಡಳಿಯನ್ನು ಜುಲೈ.31, 2026ರವರೆಗೆ ವಿಸ್ತರಿಸಿ ಜಲಶಕ್ತಿ ಸಚಿವಾಲಯ ಆದೇಶಿಸಿದೆ.
ಕೃಷ್ಣಾ ನದಿ ಅಂತಾರಾಜ್ಯ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ವರದಿ ಮತ್ತು ನಿರ್ಧಾರವನ್ನು ಸಲ್ಲಿಸಲು ಅವಧಿ ವಿಸ್ತರಣೆ ಮಾಡಲಾಗಿದೆ.
ನ್ಯಾಯಮಂಡಳಿಯು ಹೆಚ್ಚಿನ ಸಮಯ ಕೋರಿದ್ದರ ಹಿನ್ನಲೆಯಲ್ಲಿ ಜುಲೈ.31, 2026ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ಈ ಹಿಂದೆ 2024ರ ಮಾರ್ಚ್ ನಲ್ಲಿ ಅವಧಿ ವಿಸ್ತರಿಸಲಾಗಿತ್ತು. 2004ರ ಏಪ್ರಿಲ್ ನಲ್ಲಿ ಕೃಷ್ಣಾ ನದಿ ನ್ಯಾಯಮಂಡಳಿಯನ್ನು ರಚಿಸಲಾಗಿತ್ತು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತ ನ್ಯಾಯಮಂಡಳಿ ಸ್ಥಾಪಿಸಲಾಗಿತ್ತು.
ತಮ್ಮ ವಿರುದ್ಧದ ಆರೋಪಗಳಿಗೆ ಸಾಗರದ ‘ಉಳ್ಳೂರು ಪಿಡಿಒ ಹರ್ಷವರ್ಧನ್’ ಹೇಳಿದ್ದೇನು ಗೊತ್ತಾ?
‘ಇನ್ಸ್ ಸ್ಟಾಗ್ರಾಮ್’ನಲ್ಲಿ ಲವ್..! ಪ್ರಿಯತಮೆ ಹುಡುಕಿಕೊಂಡು ಬಂದ ಯುವಕನಿಗೆ ಶಾಕ್!