Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ICC Women’s World Cup 2025 : ಭಾರತದಲ್ಲಿ ‘ಮಹಿಳಾ ವಿಶ್ವಕಪ್’ ಆಯೋಜನೆ ; ‘ಪಂದ್ಯ’ ನಡೆಯುವ ಸ್ಥಳಗಳ ಪಟ್ಟಿ ಇಲ್ಲಿದೆ!

13/09/2025 4:12 PM

2 ವರ್ಷ 3 ತಿಂಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ ಕೋಟಿ ವೆಚ್ಚ: ಸಿಎಂ ಸಿದ್ಧರಾಮಯ್ಯ

13/09/2025 4:11 PM

ನಿಮ್ಮ ಬಳಿ ಈ 100 ರೂಪಾಯಿ ನೋಟು ಇದ್ದರೆ, ಸಿಗಲಿದೆ 21 ಲಕ್ಷ ರೂ.! ಹೇಗೆ ಗೊತ್ತಾ?

13/09/2025 4:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಾತಿಗಣತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ: ಮಾಜಿ ಸಚಿವ ಹೆಚ್.ಆಂಜನೇಯ ಸ್ವಾಗತ
KARNATAKA

ಜಾತಿಗಣತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ: ಮಾಜಿ ಸಚಿವ ಹೆಚ್.ಆಂಜನೇಯ ಸ್ವಾಗತ

By kannadanewsnow0927/03/2025 7:59 PM

ಬೆಂಗಳೂರು: ಒಳಮೀಸಲಾತಿಗಾಗಿ ಮೂರು ದಶಕಗಳ ಹೋರಾಟ ನಡೆಸಿದ್ದ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಸಂತಸದ ಸುದ್ದಿ ನೀಡಿದ್ದು, ಪರಿಶಿಷ್ಟ ಜಾತಿ ಸೀಮಿತಗೊಳಿಸಿ ಜಾತಿಗಣತಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವುದು ಉತ್ತಮ ನಿರ್ಧಾರವಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಪರಿಶಿಷ್ಟ ಜಾತಿಗಳಲ್ಲಿನ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಸರ್ಕಾರ ದಿಟ್ಟ ನಡೆ ಕೈಗೊಂಡಿದ್ದು, ಏಪ್ರಿಲ್, ಮೇ ಈ ಎರಡು ತಿಂಗಳಲ್ಲಿ ಜಾತಿಗಣತಿ ನಡೆಸಿ, ಜೂನ್ ಮೊದಲ ವಾರದಲ್ಲಿ  ಒಳಮೀಸಲಾತಿ ಜಾರಿಗೊಳಿಸಲು ಕೈಗೊಂಡಿರುವ ನಿರ್ಧಾರ ಸ್ವಾಗತರ್ಹವಾಗಿದೆ ಎಂದಿದ್ದಾರೆ.

30 ವರ್ಷಗಳ ಹೋರಾಟದ ಫಲ, ಒಳಮೀಸಲು ಜಾರಿಗೊಳಿಸುವ ಅಧಿಕಾರ ರಾಜ್ಯಗಳಿಗೆ ಇದೆ ಎಂಬ ಸುಪ್ರೀಂಕೋರ್ಟ್ ತೀರ್ಪು ಬಳಿಕ ಕಾನೂನು ತೊಡಕು ಆಗದ ರೀತಿ ಎಚ್ಚರಿಕೆ ಹೆಜ್ಜೆಯಿಟ್ಟಿದ್ದ ಸಿದ್ದರಾಮಯ್ಯ ಸರ್ಕಾರ, ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗವನ್ನು ರಚಿಸಿತ್ತು.

ಆಯೋಗವೂ ಮಧ್ಯಂತರ ವರದಿ ಸಲ್ಲಿಸಿದ್ದು, ನಮ್ಮಗಳ ಕೂಗಿನಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ನಡೆಸಿ, ಎಂಪೋರಿಕಲ್ ದತ್ತಾಂಶ ಪಡೆದು ಜಾರಿಗೊಳಿಸುವುದರಿಂದ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದು ಸೇರಿ ಯಾವುದೇ ರೀತಿ ಕಾನೂನು ತೊಡಕು ಎದುರಾಗದು ಎಂಬ ಸಲಹೆ ಮೇರೆಗೆ ತಕ್ಷಣವೇ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಜಾತಿಗಣತಿಗೆ ಒಪ್ಪಿಗೆ ನೀಡಿದೆ. ಈ ಮೂಲಕ ನೊಂದ ಜನರ ಪರವಾಗಿರುವ ಸಿದ್ದರಾಮಯ್ಯ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಬಳಿಕ ಒಳಮೀಸಲಾತಿ ಜಾರಿಗೆ ರಾಜ್ಯದಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂಬ ಕೂಗು ಜೋರಾಗಿತ್ತು. ಆದರೆ, ಎಂಪೋರಿಕಲ್ ದತ್ತಾಂಶ ಇಲ್ಲದೆ ಒಳಮೀಸಲಾತಿ ಜಾರಿ ಕಷ್ಟವೆಂಬ ಸತ್ಯ ಅರಿತಿದ್ದ ಸಿದ್ದರಾಮಯ್ಯ, ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚಿಸಿದ್ದರು. ಆದರೆ, ದತ್ತಾಂಶ ಸಂಗ್ರಹ ಸ್ಪಷ್ಟವಾಗಿ ದೊರೆಯದ ಕಾರಣ ಒಳಮೀಸಲಾತಿ ಜಾರಿ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲು ಕಷ್ಟಸಾಧ್ಯವಾಗಿದೆ ಎಂದು ಆಯೋಗ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದೆ.

ಈ ಮಧ್ಯೆ ನಾನು ಸೇರಿದಂತೆ ಮಾದಿಗ ಸಮುದಾಯದ ಅನೇಕ ಮುಖಂಡರು ಯಾವುದೇ ರೀತಿ ಸಮಸ್ಯೆ ಆಗದಂತೆ ಒಳಮೀಸಲಾತಿ ಜಾರಿಗೊಳಿಸಲು ಜಾತಿಗಣತಿ ನಡೆಸಬೇಕು. ರಾಜ್ಯದ ಪ್ರತಿ ಪರಿಶಿಷ್ಟರ ಮನೆಗಳಿಗೆ ಭೇಟಿ ನೀಡಿ, ಜಾತಿ ಮತ್ತು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಜೊತೆಗೆ ಅವರು ಹೊಂದಿರುವ ಭೂಮಿ, ವಾಹನ, ಉದ್ಯೋಗ ಸೇರಿದಂತೆ ಎಲ್ಲ ದಾಖಲೆ ಸಂಗ್ರಹಿಸಬೇಕು. ಇದನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ, ಒಳಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಗಿತ್ತು.

ನಮ್ಮ ಕೂಗಿಗೆ ಸ್ಪಂದಿಸಿರುವ ಸಿದ್ದರಾಮಯ್ಯ ಸರ್ಕಾರ ತಕ್ಷಣ ಜಾತಿಗಣತಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಜತೆಗೆ ಎರಡು ತಿಂಗಳಲ್ಲಿಯೇ  ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಆದ್ದರಿಂದ ಹೋರಾಟಗಾರರು, ಮುಖಂಡರು, ಚಿಂತಕರು ತಕ್ಷಣ ಎಲ್ಲೆಡೆ ಜಾಗೃತಿ ಮೂಡಿಸಬೇಕು. ತಮ್ಮ ಮನೆ ಬಾಗಿಲಿಗೆ ಜನಗಣತಿದಾರರು ಬಂದಾಗ ಆಧಾರ್ ಕಾರ್ಡ್ ಸಂಖ್ಯೆ ಜೊತೆಗೆ ತಮ್ಮ ಜೀವನ ಪರಿಸ್ಥಿತಿ, ಶಿಕ್ಷಣ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಯನ್ನು ದಾಖಲಿಸಬೇಕು. ಈ ನಿಟ್ಟಿನಲ್ಲಿ ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ಮುಖಂಡರು, ಹೋರಾಟಗಾರರು ಮುಂದಾಗಬೇಕು ಎಂದು ತಿಳಿಸಿದ್ದಾರೆ.

ಎರಡು ತಿಂಗಳಲ್ಲಿ ಜಾತಿಗಣತಿ ಪೂರ್ಣಗೊಂಡು ಜೂನ್ ಮೊದಲ ವಾರದಲ್ಲಿ  ಒಳಮೀಸಲಾತಿ ಜಾರಿಗೊಳ್ಳಲಿದೆ. ಅಲ್ಲಿಯವರೆಗೂ ಬ್ಯಾಕ್ ಲಾಗ್, 35 ಸಾವಿರ ಉದ್ಯೋಗ ನೇಮಕಾತಿ, ಬಡ್ತಿಯಲ್ಲಿ ಮೀಸಲು ಸೇರಿದಂತೆ ಯಾವ ಉದ್ಯೊಗ ನೇಮಕಾತಿ ನಡೆಸುವುದಿಲ್ಲ. ಒಳಮೀಸಲಾತಿ ಜೂನ್ ತಿಂಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲಾಗುವುದು. ಆದ್ದರಿಂದ ನಾವೆಲ್ಲರೂ ಅಂದು ಯುಗಾದಿ ಹಬ್ಬವನ್ನು ಆಚರಿಸೋಣಾ. ಅಲ್ಲಿಯವರೆಗೆ ನಾವೆಲ್ಲರೂ ಜಾತಿಗಣತಿ ಸಮೀಕ್ಷೆಗೆ ಸಹಕರಿಸಬೇಕು. ಸಮುದಾಯದವರಲ್ಲಿ ಜಾಗೃತಿ ಮೂಡಿಸೋಣಾ ಎಂದು ಕೋರಿದ್ದಾರೆ.

ಮುಖ್ಯವಾಗಿ ಎಲ್ಲ ಹೋರಾಟಗಳನ್ನು ಸ್ಥಗಿತಗೊಳಿಸಿ, ತಮ್ಮ ತಮ್ಮ ಕೇರಿ, ಕಾಲೋನಿ, ಹಟ್ಟಿ, ಮನೆಗಳಲ್ಲಿದ್ದು, ಜನರಲ್ಲಿ ಜಾಗೃತಿ ಮೂಡಿಸಿ ಜಾತಿಗಣತಿಗಾಗಿ ಬರುವ ನೌಕರರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಂಜನೇಯ ತಿಳಿಸಿದ್ದಾರೆ.

SHOCKING: ಬೆಂಗಳೂರಲ್ಲಿ ಪತ್ನಿ ಕೊಂದು ದೇಹ ತುಂಡರಿಸಿ ‘ಸೂಟ್ ಕೇಸ್’ಗೆ ತುಂಬಿದ ‘ಪಾಪಿ ಪತಿ’

ಜನರ ರಕ್ತ ಹೀರುವ ಸರಕಾರ: ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿ

Share. Facebook Twitter LinkedIn WhatsApp Email

Related Posts

2 ವರ್ಷ 3 ತಿಂಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ ಕೋಟಿ ವೆಚ್ಚ: ಸಿಎಂ ಸಿದ್ಧರಾಮಯ್ಯ

13/09/2025 4:11 PM3 Mins Read

ರಾಜ್ಯದಲ್ಲಿ ‘ಸೈಬರ್ ಕ್ರೈಂ’ ಕಡಿವಾಣಕ್ಕೆ ಸರ್ಕಾರ ದಿಟ್ಟಕ್ರಮ: ದೇಶದಲ್ಲೇ ಮೊದಲ ‘ಸೈಬರ್ ಕಮಾಂಡ್ ಸೆಂಟರ್’ ಸ್ಥಾಪನೆ

13/09/2025 3:52 PM1 Min Read

ಕರ್ನಾಟಕದಲ್ಲಿ 882 ಕೋಟಿ ವೆಚ್ಚದಲ್ಲಿ ಜಪಾನಿನ ಹೊಸೊಡಾದ ಸೌರಕೋಶ ಘಟಕ ಸ್ಥಾಪನೆ: ಸಚಿವ ಎಂ.ಬಿ.ಪಾಟೀಲ

13/09/2025 3:33 PM1 Min Read
Recent News

ICC Women’s World Cup 2025 : ಭಾರತದಲ್ಲಿ ‘ಮಹಿಳಾ ವಿಶ್ವಕಪ್’ ಆಯೋಜನೆ ; ‘ಪಂದ್ಯ’ ನಡೆಯುವ ಸ್ಥಳಗಳ ಪಟ್ಟಿ ಇಲ್ಲಿದೆ!

13/09/2025 4:12 PM

2 ವರ್ಷ 3 ತಿಂಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ ಕೋಟಿ ವೆಚ್ಚ: ಸಿಎಂ ಸಿದ್ಧರಾಮಯ್ಯ

13/09/2025 4:11 PM

ನಿಮ್ಮ ಬಳಿ ಈ 100 ರೂಪಾಯಿ ನೋಟು ಇದ್ದರೆ, ಸಿಗಲಿದೆ 21 ಲಕ್ಷ ರೂ.! ಹೇಗೆ ಗೊತ್ತಾ?

13/09/2025 4:04 PM

ನಿಮ್ಮ ಬಳಿ ಈ ‘ಒಂದು ರೂಪಾಯಿ ನೋಟು’ ಇದ್ಯಾ.? 7 ಲಕ್ಷ ರೂಪಾಯಿ ನಿಮ್ಮ ಸ್ವಂತ!

13/09/2025 3:59 PM
State News
KARNATAKA

2 ವರ್ಷ 3 ತಿಂಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ ಕೋಟಿ ವೆಚ್ಚ: ಸಿಎಂ ಸಿದ್ಧರಾಮಯ್ಯ

By kannadanewsnow0913/09/2025 4:11 PM KARNATAKA 3 Mins Read

ಮೈಸೂರು: ಅಸಮಾನತೆಗಳನ್ನು ತೊಡೆಯುವ ಉದ್ದೇಶದಿಂದ, ಕಳೆದ ಬಾರಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಪ್ರಥಮ ಹೆಜ್ಜೆಯಾಗಿ ಅನ್ನಭಾಗ್ಯ ಯೋಜನೆ ಜಾರಿಗೆ…

ರಾಜ್ಯದಲ್ಲಿ ‘ಸೈಬರ್ ಕ್ರೈಂ’ ಕಡಿವಾಣಕ್ಕೆ ಸರ್ಕಾರ ದಿಟ್ಟಕ್ರಮ: ದೇಶದಲ್ಲೇ ಮೊದಲ ‘ಸೈಬರ್ ಕಮಾಂಡ್ ಸೆಂಟರ್’ ಸ್ಥಾಪನೆ

13/09/2025 3:52 PM

ಕರ್ನಾಟಕದಲ್ಲಿ 882 ಕೋಟಿ ವೆಚ್ಚದಲ್ಲಿ ಜಪಾನಿನ ಹೊಸೊಡಾದ ಸೌರಕೋಶ ಘಟಕ ಸ್ಥಾಪನೆ: ಸಚಿವ ಎಂ.ಬಿ.ಪಾಟೀಲ

13/09/2025 3:33 PM

ಬೆಂಗಳೂರಲ್ಲಿ ಸೆ.15ರಿಂದ 29ರವರೆಗೆ ಈ ಏರಿಯಾದಲ್ಲಿ ಈ ಸಮಯದಲ್ಲಿ ಕರೆಂಟ್ ಇರಲ್ಲ | Power Cut

13/09/2025 3:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.