Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಸ್ಥಳೀಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ!

31/05/2025 4:10 PM

ಕುರಿಗಾಹಿಗಳಿಗೆ ಬಂದೂಕು ನೀಡೋದು ಸಮರ್ಪಕಗೊಳಿಸಿ : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

31/05/2025 3:58 PM

BIG NEWS : ಡಿಸಿಗಳು ನಿಯಮಿತವಾಗಿ ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ ಸೂಚನೆ

31/05/2025 3:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಎಂ ಸಿದ್ಧರಾಮಯ್ಯಗೆ ಕಾಡುಗೊಲ್ಲರ ಪರವಾಗಿ ಸಿ.ಶಿವು ಯಾದವ್ ಅಭಿನಂದನೆ
KARNATAKA

ಸಿಎಂ ಸಿದ್ಧರಾಮಯ್ಯಗೆ ಕಾಡುಗೊಲ್ಲರ ಪರವಾಗಿ ಸಿ.ಶಿವು ಯಾದವ್ ಅಭಿನಂದನೆ

By kannadanewsnow0912/04/2025 9:25 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಡುಗೊಲ್ಲರ ಸಮುದಾಯದ ಪರವಾಗಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿಯ ಸಂಘದ ರಾಜ್ಯಾಧ್ಯಕ್ಷ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಗೆ ಬಿಡುಗಡೆ ಮಾಡಿರುವಂತ ಅವರು, ಸಿಎಂ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಜಯಪ್ರಕಾಶ್ ಹೆಗ್ಡೆ ಯವರು ನೀಡಿರು ಹಿಂದುಳಿದ ವರ್ಗಗಳ ಸಮಾಜಿಕ ಆರ್ಥಿಕ ಶೈಕ್ಷಣಿಕ ವರದಿಯು ಮಂಡನೆಯಾಗಿರುವುದನ್ನು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘವು ಸ್ವಾಗತಿಸುತ್ತದೆ. ಬಹುದಿನಗಳ, ಬಹು ಜನಗಳ, ಬಹು ಸಮಾಜಗಳ ಬೇಡಿಕೆಯಾಗಿತ್ತು. ರಾಜ್ಯದ ಹಿಂದುಳಿದ ವರ್ಗಗಳ ಬೇಡಿಕೆ ಕೈಗೂಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಕೆಲವು ಜಾತಿಯ ಪಟ್ಟಬಧ್ರ ಶಕ್ತಿಗಳು ವರದಿಯಲ್ಲಿ ಏನು ಇದೆ ಎಂಬುದು ತಿಳಿಯದಿದ್ದರೂ ವರದಿಯ ಬಗ್ಗೆ ತಳಬುಡ ಗೊತ್ತಿಲ್ಲದಿದ್ದರೂ ಕಿಡಿಗೇಡಿಗಳಂತೆ ವರದಿಯನ್ನು ವಿರೋದಿಸುತ್ತಿದ್ದಾರೆ. ಜೊತೆಗೆ ಇದು ಜಾತಿ ಜನಗಣತಿಯ ವರದಿ ಎಂದು ಬಿಂಬಿಸುತ್ತಿದ್ದಾರೆ. ಜನಗಣತಿಯನ್ನು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂಬ ಸಾಮಾನ್ಯ ಜ್ಞಾನವು ಈ ಮುಖಂಡರಿಗೆ ಇಲ್ಲದಂತಾಗಿದೆ ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ.

ದೇಶದಲ್ಲಿ ಆರ್ಥಿಕ ಸಾಮಾಜಿಕ ಮತ್ತು ಸ್ಥಾನಮಾನವನ್ನು ನಿರ್ದರಿಸಲು ದೇಶದ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳುವ ಕಾರ್ಯಕ್ಕೆ ಇಂತಹ ವರದಿಯು ಪೂರಕವಾಗಿರುತ್ತದೆ. ಬಹುಮುಖ್ಯವಾಗಿ ರಾಜ್ಯದ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ ಚುನಾವಣಾ ನಡೆಸಲು ಮತ್ತು ಚುನಾವಣೆಯಲ್ಲಿ ಮೀಸಲು ನಿಗದಿಪಡಿಸಲು ಸಹ ಇಂತಹ ವರದಿಗಳು ಅತಿಮುಖ್ಯವಾಗುತ್ತವೆ‌ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದರಿ ವರದಿಯನ್ನು ತಮ್ಮ ಸಚಿವ ಸಂಪುಟದಲ್ಲಿ ಮಂಡಿಸಿದ್ದಾರೆ. ಜೊತೆಗೆ ಅದರ ಬಗ್ಗೆ ಚರ್ಚಿಸಲು ಏಪ್ರಿಲ್.17 ರಂದು ಪ್ರತ್ಯೇಕವಾಗಿ ಸಚಿವ ಸಂಪುಟದ ಸಬೆ ಕರೆದಿರುವುದು ಸಮಾಜದ ನ್ಯಾಯದ ಪರಿಕಲ್ಪನೆಯಾಗಿದೆ. ಈಗ ವರದಿಯು ಬಹಿರಂಗವಾಗಿರುವುದರಿಂದ ಅದರಲ್ಲಿ ಇರುವ ವಿಷಯಗಳ ಬಗ್ಗೆ ಸಮಗ್ರವಾಗಿ ಅದ್ಯಯನ ಮಾಡಿ ಚರ್ಚಿಸಬಹುದು. ಸದರಿ ವರದಿಯನ್ನು ಓದದೇ ತಿಳಿಯದೇ ವಿರೊದಮಾಡುವವರು ದಯವಿಟ್ಟು ಒಂದೊಂದು ವರದಿಯ ಪ್ರತಿಯನ್ನು ಪಡೆದು ಪರಾಂಬರಿಸಬಹುದು. ಅದನ್ನು ಬಿಟ್ಟು ಎತ್ತು ಕರು ಹಾಕಿತು ಎಂದರೆ ಕೊಟ್ಟಿಗೆಗೆ ಕಟ್ಟಿ ಎನ್ನುವಂತಾಗಬಾರದು ಎಂಬುದಾಗಿ ತಿಳಿಸಿದ್ದಾರೆ.

ಸದರಿ ವರದಿಯನ್ನು ತಯಾರು ಮಾಡಲು ಲಕ್ಷಾಂತರ ಸರ್ಕಾರಿ ನೌಕರರು ಹಗಲು ರಾತ್ರಿ ಕಷ್ಟ ಪಟ್ಟು ಪ್ರತಿ ಮನೆ ಮನೆಗೂ ತೆರಳಿ ಮಾಹಿತಿ ಸಂಗ್ರಹಿಸಿ ಈ ವರದಿಯನ್ನು ತಯಾರು ಮಾಡಿದ್ದಾರೆ. ಈ ವರದಿಯನ್ನು ತಯಾರಿಸಲು ಸರ್ಕಾರದ ಸುಮಾರು 175 ಕೋಟಿ ಹಣ ವ್ಯಯವಾಗಿರುತ್ತದೆ. ಸರ್ಕಾರದ ಹಣ ಸಾರ್ವಜನಿಕರ ಹಣವಾಗಿರುತ್ತದೆ. ಸರ್ಕಾರದ ಹಣ ಸರ್ಕಾರಿ ನೌಕರರ ಶ್ರಮವ್ಯರ್ಥವಾಗದಂತೆ ನೋಡಿಕೊಳ್ಳುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ ಆಗಿರುತ್ತದೆ ಎಂದಿದ್ದಾರೆ.

ಶೋಷಿತ ಸಮುದಾಯಗಳ ಮತ್ತು ಹಿಂದುಳಿದ ವರ್ಗಗಳ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವರದಿಯನ್ನು ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ನೀಡಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಆಶಾಕಿರಣವಾಗಬೇಕೆಂದು ನಿಮ್ಮೋಂದಿಗೆ ರಾಜ್ಯದ ಹಿಂದುಳಿದ ವರ್ಗಗಳ ಸದಾ ನಿಮ್ಮ ಬೆನ್ನಿಗೆ ನಿಲ್ಲುತ್ತವೆ ಎಂದು ಜೊತೆಗೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿಯ ಸಂಘದ ರಾಜ್ಯಾದ್ಯಕ್ಷರಾದ ಸಿ ಶಿವುಯಾದವ್ ತಿಳಿಸಿದ್ದಾರೆ.

ಬಿಜೆಪಿ ನಾಯಕರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್ ಬದಲಿಸಿಕೊಳ್ಳಲಿ: DKS ವ್ಯಂಗ್ಯ

ಕೇಂದ್ರದ ತಪ್ಪು ನೀತಿಯೇ ಬೆಲೆ ಏರಿಕೆಗೆ ಕಾರಣ: ಬಿಜೆಪಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇಲ್ಲ: ಸಿಎಂ ಸಿದ್ದರಾಮಯ್ಯ

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಸ್ಥಳೀಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ!

31/05/2025 4:10 PM1 Min Read

ಕುರಿಗಾಹಿಗಳಿಗೆ ಬಂದೂಕು ನೀಡೋದು ಸಮರ್ಪಕಗೊಳಿಸಿ : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

31/05/2025 3:58 PM1 Min Read

BIG NEWS : ಡಿಸಿಗಳು ನಿಯಮಿತವಾಗಿ ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ ಸೂಚನೆ

31/05/2025 3:54 PM1 Min Read
Recent News

BREAKING : ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಸ್ಥಳೀಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ!

31/05/2025 4:10 PM

ಕುರಿಗಾಹಿಗಳಿಗೆ ಬಂದೂಕು ನೀಡೋದು ಸಮರ್ಪಕಗೊಳಿಸಿ : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

31/05/2025 3:58 PM

BIG NEWS : ಡಿಸಿಗಳು ನಿಯಮಿತವಾಗಿ ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ ಸೂಚನೆ

31/05/2025 3:54 PM

ಆಂಜನೇಯನ ಮುಂದೆ ಈ ವಸ್ತು ಇಟ್ಟುಬಿಡಿ ಸಾಕು ಎಷ್ಟೇ ಸಾಲ ಇದ್ದರೂ ಸಾಕ್ಷಾತ್ ಆಂಜನೇಯನೆ ಬಂದು ನಿಮ್ಮ ಸಾಲವನ್ನು ತೀರಿಸಿದಂತೆ ತೀರುತ್ತದೆ. 

31/05/2025 3:48 PM
State News
KARNATAKA

BREAKING : ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಸ್ಥಳೀಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ!

By kannadanewsnow0531/05/2025 4:10 PM KARNATAKA 1 Min Read

ಬೆಂಗಳೂರು : ಇಷ್ಟು ದಿನ ಬೆಂಗಳೂರು ಶಾಂತವಾಗಿತ್ತು ಇದೀಗ ಮತ್ತೆ ಬೆಂಗಳೂರಿನ ಜನತೆಗೆ ಚಿರತೆಯ ಕಾಟ ಶುರುವಾಗಿದೆ. ಹೌದು ಬೆಂಗಳೂರಿನ…

ಕುರಿಗಾಹಿಗಳಿಗೆ ಬಂದೂಕು ನೀಡೋದು ಸಮರ್ಪಕಗೊಳಿಸಿ : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

31/05/2025 3:58 PM

BIG NEWS : ಡಿಸಿಗಳು ನಿಯಮಿತವಾಗಿ ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ ಸೂಚನೆ

31/05/2025 3:54 PM

ಆಂಜನೇಯನ ಮುಂದೆ ಈ ವಸ್ತು ಇಟ್ಟುಬಿಡಿ ಸಾಕು ಎಷ್ಟೇ ಸಾಲ ಇದ್ದರೂ ಸಾಕ್ಷಾತ್ ಆಂಜನೇಯನೆ ಬಂದು ನಿಮ್ಮ ಸಾಲವನ್ನು ತೀರಿಸಿದಂತೆ ತೀರುತ್ತದೆ. 

31/05/2025 3:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.