Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಸಂಸದ ಬಸವರಾಜ ಬೊಮ್ಮಾಯಿ

14/12/2025 5:58 PM

ಯುವಜನತೆಯ ಹಠಾತ್ ಸಾವಿಗೂ ಕೋವಿಡ್ ಲಸಿಕೆಗೂ ಸಂಬಂಧವಿಲ್ಲ: ಏಮ್ಸ್ | Covid Vaccine

14/12/2025 5:49 PM

ಸಿಡ್ನಿ ಬೋಂಡಿ ಬೀಚ್ ಗುಂಡಿನ ದಾಳಿಯಲ್ಲಿ 12 ಮಂದಿ ಸಾವು: ಇದು ಭಯೋತ್ಪಾದಕರ ಕೃತ್ಯವೆಂದ NSW ಪೊಲೀಸ್ ಮುಖ್ಯಸ್ಥ

14/12/2025 5:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : `ಜಾತಿ ಗಣತಿ ಸಮೀಕ್ಷೆ’ಯ ಜಾತಿ ಕಾಲಂನಲ್ಲಿ ತಪ್ಪಾಗಿ ಕೋಡ್ ನಮೂದು : ಶಿಕ್ಷಕ ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ.!
KARNATAKA

BREAKING : `ಜಾತಿ ಗಣತಿ ಸಮೀಕ್ಷೆ’ಯ ಜಾತಿ ಕಾಲಂನಲ್ಲಿ ತಪ್ಪಾಗಿ ಕೋಡ್ ನಮೂದು : ಶಿಕ್ಷಕ ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ.!

By kannadanewsnow5717/05/2025 10:08 AM

ಬೆಂಗಳೂರು : ಜಾತಿ ಗಣಿತಿ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಜಾತಿ ಕೋಡನ್ನು ತಪ್ಪಾಗಿ ನಮೂದಿಸಿದ ಕಾರಣ ಸದರಿ ಶಿಕ್ಷಕರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆದೇಶದಲ್ಲಿ ಏನಿದೆ?

ಸೋಮಪ್ಪ ತಂದೆ ಭೀಮಪ್ಪ ಸರಕಾರಿ ಹಿರಿಯ ಪ್ರಥಮಿಕ ಶಾಲೆ ಹೆಗ್ಗಾಪೂರು ತಾಂಡಾ ತಾ:ಲಿಂಗಸುಗೂರು ಇವರು ಕರ್ತವ್ಯದಲ್ಲಿ ತಾಳಿರುವ ಬೇಜವಾಬ್ದಾರಿತನ ಮತ್ತು ನಿರ್ಲಕ್ಷತೆ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ.

ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನ್ ದಾಸ್ ರವರ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಸಮೀಕ್ಷೆ ನಡೆಸುವ ಹಿನ್ನೆಲೆಯಲ್ಲಿ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಲಾಗಿದ್ದು, ದಿನಾಂಕ:05-05-2025 ರಿಂದ 23-05-2025 ರವರೆಗೆ ನಡೆಯಲಿರುವ ಸಮೀಕ್ಷಾ ಕಾರ್ಯಕ್ಕೆ ಸರ್ಕಾರದ ಆದೇಶದಂತೆ ಈಗಾಗಲೇ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಿ ಆದೇಶಿಸಲಾಗಿರುತ್ತದೆ. ಸದರಿ ಸಮೀಕ್ಷಾ ಕಾರ್ಯಕ್ಕೆ ಸರಕಾರಿ ಹಿರಿಯ ಪ್ರಥಮಿಕ ಶಾಲೆ ಶಾಲೆ ಹೆಗ್ಗಾಪೂರು ತಾಂಡಾದ ಶಿಕ್ಷಕರಾದ ನಿಮ್ಮನ್ನು ಜಾತಿ ಗಣತಿ ಸಮೀಕ್ಷೆಗಾಗಿ ನೇಮಿಸಲಾಗಿರುತ್ತದೆ.

ಅಂಗಸುಗೂರು ತಾಲೂಕಿನ ನಾಗಲಾಪೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೆಗ್ಗಾಪೂರು ತಾಂಡಾದಲ್ಲಿ ಜಾತಿ ಗಣತಿ ಸಮೀಕ್ಷೆ ಮಾಡುವಾಗ ಜಾತಿ ಕಾಲಂನಲ್ಲಿ ಹಿಂದೂ ಲಂಬಾಣಿ ಎಂದು ನಮೂದಿಸದೇ ಆದಿ ಆಂದ್ರ ಎಂದು ತಪ್ಪಾಗಿ ನಮೂದಿಸಿರುತ್ತಾರೆ ಎಂದು ಉಲ್ಲೇಖ (1)ರನ್ವಯ ಅಧ್ಯಕ್ಷರು, ಆಲ್ ಇಂಡಿಯಾ ಬಂಜಾರ ಸೇವಾ ಸಂಗ (ರಿ) ತಲೂಕ ಘಟಕ ಅಂಗಸುಗೂರುರವರು ದೂರನ್ನು ಸಲ್ಲಿಸಿರುತ್ತಾರೆ.

ಸದರಿ ಶಿಕ್ಷಕರು ಆಪ್‌ನಲ್ಲಿ ಮಾಹಿತಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಕೋಡ್ ನಂ. 001 ಆದಿ ಆಂದ್ರ ಎಂದು ತಪ್ಪಾಗಿ ಆಯ್ಕೆ ಮಾಡಿದ್ದು ಮತ್ತು ಲಂಬಾಣಿ ಎಂಬ ಜಾತಿ ಸಂಖ್ಯೆ ಕೋಡ್ ನಂ. 017.2 ಎಂದು ಆಯ್ಕೆ ಮಾಡಬೇಕಾಗಿದ್ದು, 50 ಮನೆಗಳ ಜಾತಿ ಗಣತಿ ತಪ್ಪಾಗಿ ನಮೂದಿಸಲಾಗಿರುತ್ತದೆ ಎಂದು ಉಲ್ಲೇಖ (2) ಮತ್ತು (3)ರನ್ವಯ ತಹಶೀಲ್ದಾರರು ಅಂಗಸುಗೂರು ರವರು ಸಹಾಯಕ ಆಯುಕ್ತರು, ಅಂಗಸುಗೂರುರವರು ವರದಿಯನ್ನು ಸಲ್ಲಿಸಿರುತ್ತಾರೆ.

ಉಲ್ಲೇಖ (4)ರನ್ವಯ ಕಾರ್ಯದರ್ಶಿಗಳು, ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನ್ ದಾಸ್ ರವರ ಏಕ ಸದಸ್ಯ ಆಯೋಗ ಬೆಂಗಳೂರುರವರು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಕಾರಣ ಕೇಳುವ ನೋಟೀಸನ್ನು ಜಾರಿ ಮಾಡಿರುತ್ತಾರೆ.

ಒಟ್ಟಿನಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತು ಮೊಬೈಲ್ ಆ್ಯಪ್‌ನಲ್ಲಿ ಪರಿಶಿಷ್ಟ ಜಾತಿ ಕುಟುಂಬದವರ ಮಾಹಿತಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಲಂಬಾಣಿ ಜಾತಿಯ ಕೋಡ್ ನಂ.017.2 ಎಂದು ಆಯ್ಕೆ ಮಾಡುವ ಬದಲು, ಕೋಡ್ ನಂ.001 ಆದಿ ಆಂದ್ರ ಎಂದು ತಪ್ಪಾಗಿ ಆಯ್ಕೆ ಮಾಡಿ 50 ಮನೆಗಳ ಸಮೀಕ್ಷೆ ಮಾಡಿರುತ್ತೀರಿ.

ಒಬ್ಬ ಜವಾಬ್ದಾರಿಯುತ ಶಿಕ್ಷಕರಾದ ನೀವು ತಾಲೂಕ ಮಟ್ಟದ ಮಾಸ್ಟರ್ ಟ್ರೈನರ್‌ಗಳಿಂದ ತರಬೇತಿಯನ್ನು ಪಡೆದ ನಂತರ ಸಮೀಕ್ಷೆ ಕುರಿತು ಸಿದ್ಧಪಡಿಸಿರುವ ಕೈಪಿಡಿಯನ್ನು ಅಧ್ಯಯನ ಮಾಡಿ ಅಲ್ಲದೆ ಸದರಿ ವಿಷಯದ ಕುರಿತು ವಿಡಿಯೋ ಸಂವಾದ ಸಭೆಯಲ್ಲಿ ತಿಳಿಸಲಾಗಿರುತ್ತದೆ. ಆದರೂ ಪರಿಶಿಷ್ಟ ಜಾತಿಯ ಕೋಡ್ ಅನ್ನು ಸರಿಯಾಗಿ ಆಯ್ಕೆ ಮಾಡುವುದು ನಿಮ್ಮ ಅಧ್ಯ ಕರ್ತವ್ಯವಾಗಿದ್ದು, 50 ಕುಟುಂಬಗಳ ಜಾತಿಯ ಮಾಹಿತಿಯನ್ನು ತಪ್ಪಾಗಿ ನಮೂದಿಸಿ ಬೇಜವಾಬ್ದಾರಿತನ ತೋರಿರುತ್ತೀರಿ.

ಈ ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಶ್ರೀ.ಸೋಮಪ್ಪ ತಂದೆ ಭೀಮಪ್ಪ ಸರಕಾರಿ ಹಿರಿಯ ಪ್ರಥಮಿಕ ಶಾಲೆ ಹೆಗ್ಗಾಪೂರು ತಾಂಡಾ ತಾ:ಲಿಂಗಸುಗೂರು ಇವರು ಕರ್ತವ್ಯದಲ್ಲಿ ಬೇಜವಾಬ್ದಾರಿತನ ಮತ್ತು ನಿರ್ಲಕ್ಷತನ ವಹಿಸಿದ್ದು ಕಂಡುಬಂದಿದ್ದು, ಸದರಿಯವರನ್ನು ಸೇವೆಯಿಂದ ಅಮಾನತ್ತುಗೊಳಿಸಲು ಈ ಕೆಳಕಂಡ ಆದೇಶ.

ಪ್ರಸ್ತಾವನೆಯಲ್ಲಿ ವಿವರಿಸಿದಂತೆ, ಕೆ.ನಿತೀಶ್. ಭಾಜ. ಜಿಲ್ಲಾಧಿಕಾರಿಗಳು ರಾಯಚೂರು ಆದ ನಾನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ 10 (1)(ಡಿ) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ.ಸೋಮಪ್ಪ ತಂದೆ ಭೀಮಪ್ಪ ಸರಕಾರಿ ಹಿರಿಯ ಪ್ರಥಮಿಕ ಶಾಲೆ ಹೆಗ್ಗಾಪೂರು ತಾಂಡಾ ತಾ:ಲಿಂಗಸುಗೂರು ಇವರ ವಿರುದ್ಧ ಮಾಡಲಾದ ಆರೋಪಗಳ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾಡಲಾದ ಆರೋಪಗಳ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದೇನೆ.

ಆರೋಪಿತ ನೌಕರರು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 98 ರನ್ವಯ ಜೀವನಾಂಶ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಹಾಗೂ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ತಿಳಿಸಲಾಗಿದೆ.

BREAKING: Wrong code entered in caste column of `Caste Census Survey': State government orders suspension of teacher!
Share. Facebook Twitter LinkedIn WhatsApp Email

Related Posts

ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಸಂಸದ ಬಸವರಾಜ ಬೊಮ್ಮಾಯಿ

14/12/2025 5:58 PM2 Mins Read

ಶಿವಾಜಿ ಮಹಾರಾಜ ಒಬ್ಬ ವೀರ ಯೋಧನಲ್ಲ, ಸಮಾನತೆ, ಮಾನವೀಯ ಮೌಲ್ಯ ಪ್ರತಿಪಾದಿಸಿದ ಮಹಾನ್ ನಾಯಕ: ಸತೀಶ್ ಜಾರಕಿಹೊಳಿ

14/12/2025 4:49 PM1 Min Read

ಡಿ.25 ರಿಂದ 30ರವರೆಗೆ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ: ಸಂಸದ ಬಸವರಾಜ ಬೊಮ್ಮಾಯಿ

14/12/2025 4:42 PM2 Mins Read
Recent News

ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಸಂಸದ ಬಸವರಾಜ ಬೊಮ್ಮಾಯಿ

14/12/2025 5:58 PM

ಯುವಜನತೆಯ ಹಠಾತ್ ಸಾವಿಗೂ ಕೋವಿಡ್ ಲಸಿಕೆಗೂ ಸಂಬಂಧವಿಲ್ಲ: ಏಮ್ಸ್ | Covid Vaccine

14/12/2025 5:49 PM

ಸಿಡ್ನಿ ಬೋಂಡಿ ಬೀಚ್ ಗುಂಡಿನ ದಾಳಿಯಲ್ಲಿ 12 ಮಂದಿ ಸಾವು: ಇದು ಭಯೋತ್ಪಾದಕರ ಕೃತ್ಯವೆಂದ NSW ಪೊಲೀಸ್ ಮುಖ್ಯಸ್ಥ

14/12/2025 5:20 PM

BREAKING: ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್ ನೇಮಕ | Nitin Nabin

14/12/2025 5:15 PM
State News
KARNATAKA

ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಸಂಸದ ಬಸವರಾಜ ಬೊಮ್ಮಾಯಿ

By kannadanewsnow0914/12/2025 5:58 PM KARNATAKA 2 Mins Read

ಹಾವೇರಿ: ಓಟ್ ಚೋರಿ ಹೆಸರಿನಲ್ಲಿ ಕಾಂಗ್ರೆಸ್ ನವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ‌. ಅದರಿಂದ ಏನೂ ಆಗುವುದಿಲ್ಲ ಎಂದು ಮಾಜಿ…

ಶಿವಾಜಿ ಮಹಾರಾಜ ಒಬ್ಬ ವೀರ ಯೋಧನಲ್ಲ, ಸಮಾನತೆ, ಮಾನವೀಯ ಮೌಲ್ಯ ಪ್ರತಿಪಾದಿಸಿದ ಮಹಾನ್ ನಾಯಕ: ಸತೀಶ್ ಜಾರಕಿಹೊಳಿ

14/12/2025 4:49 PM

ಡಿ.25 ರಿಂದ 30ರವರೆಗೆ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ: ಸಂಸದ ಬಸವರಾಜ ಬೊಮ್ಮಾಯಿ

14/12/2025 4:42 PM

ಬಾಗಲಕೋಟೆ : ಕಲ್ಲು ಗಣಿಗಾರಿಕೆಯ ವೇಳೆ ಕಲ್ಲು ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವು!

14/12/2025 4:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.