ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಜೊತೆಗಿನ ವಿಡಿಯೋ ವೈರಲ್ ಆದ ಬೆನ್ನಲ್ಲೇ ರೌಡಿ ಶೀಟರ್ ಜನಾರ್ಧನ್ ಪುತ್ರ ಸತ್ಯ ಇದೀಗ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೌಡಿ ಶೀಟರ್ ಧರ್ಮ ಜೊತೆ ವಿಡಿಯೋ ಕಾಲ್ ಮಾಡುವಾಗ ಸತ್ಯ ನಟ ದರ್ಶನ್ ಜೊತೆ ಕೂಡ ಮಾತನಾಡಿದ್ದನು. ಬ್ಯಾಡರಹಳ್ಳಿ ರೌಡಿಶೀಟರ್ ಜನಾರ್ಧನ ಪುತ್ರ ಈ ಸತ್ಯ ದರ್ಶನ್ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದನು. ಈ ಹಿನ್ನೆಲೆ ಆತನನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದರು. ಆದರೆ ಸತ್ಯ ಇದೀಗ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎನ್ನಲಾಗಿದೆ. ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದರೂ ಜೈಲಿನಲ್ಲಿ ದರ್ಶನ್ ಸಕಲ ಸೌಲಭ್ಯಗಳೊಂದಿಗೆ ಕಾಲಕಳೆಯುತ್ತಿರುವಂತಿದೆ. ಜೈಲಿನಲ್ಲಿ ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಿರುವ ದರ್ಶನ್ ಫೋಟೊ ವೈರಲ್ ಆಗಿದ್ದು, ಸಾಕಷ್ಟು ಅಚ್ಚರಿ, ಅನುಮಾನಗಳಿಗೆ ಕಾರಣವಾಗಿದೆ.