ನವದೆಹಲಿ : ರಾಜ್ಯಸಭಾ ಅಧಿವೇಶನಕ್ಕೆ ಮುಂಚಿತವಾಗಿ, ಆಮ್ ಆದ್ಮಿ ಪಕ್ಷವು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನ ರಾಜ್ಯಸಭೆಯಲ್ಲಿ ಎಎಪಿ ಸಂಸದೀಯ ಪಕ್ಷದ ನಾಯಕರಾಗಿ, ಸಂಸದ ರಾಘವ್ ಚಡ್ಡಾ ಅವರನ್ನ ಉಪನಾಯಕರಾಗಿ ಮತ್ತು ಎನ್ಡಿ ಗುಪ್ತಾ ಅವರನ್ನ ಮುಖ್ಯ ಸಚೇತಕರಾಗಿ ನಾಮನಿರ್ದೇಶನ ಮಾಡಿದೆ. ಎಎಪಿ ತನ್ನ ಮುಖ್ಯ ಸಚೇತಕರಾಗಿ ಎನ್ ಡಿ ಗುಪ್ತಾ ಅವರನ್ನ ಹೆಸರಿಸಿದೆ.
ಎಎಪಿಯಿಂದ 10 ರಾಜ್ಯಸಭಾ ಸಂಸದರು, ದೆಹಲಿಯಿಂದ 3 ಮತ್ತು ಪಂಜಾಬ್ನಿಂದ 7 ಸಂಸದರು ಇದ್ದಾರೆ. ಸ್ವಾತಿ ಮಲಿವಾಲ್ ಕೂಡ ಎಎಪಿ ಸಂಸದೆಯಾಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾಜಿ ಸಹಾಯಕ ಬಿಭವ್ ಕುಮಾರ್ ವಿರುದ್ಧ ಹಲ್ಲೆ ಪ್ರಕರಣ ದಾಖಲಾದ ನಂತ್ರ ಪಕ್ಷದೊಂದಿಗಿನ ಅವರ ಸಂಬಂಧ ಹದಗೆಟ್ಟಿದೆ.
ರಾಜ್ಯಸಭೆಯ ಅಧಿವೇಶನ ಜೂನ್ 27 ರಿಂದ ಪ್ರಾರಂಭವಾಗಲಿದೆ. 18ನೇ ಲೋಕಸಭೆ ರಚನೆಯ ನಂತರ ಇದು ರಾಜ್ಯಸಭೆಯ ಮೊದಲ ಅಧಿವೇಶನವಾಗಿದ್ದು, ಅಲ್ಲಿ ಸ್ಪೀಕರ್ ಮತ್ತು ಉಪ ಸ್ಪೀಕರ್ ಕಚೇರಿಯ ಸುತ್ತ ಜಗಳ ನಡೆಯುತ್ತಿದೆ. ಬಿಜೆಪಿ ಮತ್ತೊಮ್ಮೆ ಓಂ ಬಿರ್ಲಾ ಅವರನ್ನ ಸ್ಪೀಕರ್ ಅಭ್ಯರ್ಥಿಯನ್ನಾಗಿ ಮಾಡಿದರೆ, ಕಾಂಗ್ರೆಸ್ ಕೆ ಸುರೇಶ್ ವಿರೋಧ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಸ್ವಾತಂತ್ರ್ಯದ ನಂತರ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯುತ್ತಿರುವ ಮೊದಲ ಘಟನೆ ಇದಾಗಿದೆ. ಆದರೆ, ಸಂಪ್ರದಾಯವನ್ನ ಅನುಸರಿಸಿ ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನವನ್ನ ನೀಡಿದ್ರೆ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು.
‘ರೇಣುಕಾಸ್ವಾಮಿ ಸಹೋದರಿ’ಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ‘ಸಿಎಂ ಸಿದ್ದರಾಮಯ್ಯ’ ಭರಸವಸೆ
BREAKING: ಸನಾತನ ಧರ್ಮದ ಕುರಿತ ಹೇಳಿಕೆ ಕೇಸ್: ‘ಉದಯನಿಧಿ ಸ್ಟಾಲಿನ್’ಗೆ ಜಾಮೀನು ಮಂಜೂರು | Udhayanidhi Stalin
ಊರು ಬಿಟ್ಟು ಓಡಿಹೋಗುವಷ್ಟು ‘ಸಾಲ’ ಮಾಡಿದ್ದೀರಾ? ಜಸ್ಟ್ ‘ಗಣಪತಿ’ಗೆ ಈ ಪೂಜೆ ಮಾಡಿ ಸಾಕು, ತೀರುತ್ತೆ