ನವದೆಹಲಿ : ಯುದ್ಧಪೀಡಿತ ಇರಾನ್ನಿಂದ ಸ್ಥಳಾಂತರಿಸಲಾದ 290 ಭಾರತೀಯರನ್ನು ಹೊತ್ತ ವಿಶೇಷ ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಬಂದಿಳಿದಿದೆ.
ಇರಾನ್ನಿಂದ ಸ್ಥಳಾಂತರಿಸಲಾದ ಭಾರತೀಯ ಪ್ರಜೆಗಳನ್ನು ಹೊತ್ತ ಮತ್ತೊಂದು ವಿಮಾನ ದೆಹಲಿ ತಲುಪಿತು. ವಿಮಾನ ನಿಲ್ದಾಣದಿಂದ ಹೊರಬರುವಾಗ ಜನರು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿದರು.
ಇರಾನ್ನಿಂದ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಸ್ಥಳಾಂತರಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಕಾರ್ಯಾಚರಣೆಯಾದ ಆಪರೇಷನ್ ಸಿಂಧು ಅನ್ನು ಭಾರತ ಪ್ರಾರಂಭಿಸಿದೆ.
ಯುದ್ಧಪೀಡಿತ ಇರಾನ್ ನಿಂದ 290 ಭಾರತೀಯರು ವಾಪಸ್ ಆಗಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ 290 ವಿದ್ಯಾರ್ಥಿಗಳು ಬಂದಿಳಿದಿದ್ದು, ಅವರು ಬರುತ್ತಿದ್ದಂತೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಮೊಳಗಿಸಲಾಗಿದೆ. ಆಪರೇಷನ್ ಸಿಂಧು ಹೆಸರಿನಲ್ಲಿ ಭಾರತೀಯರನ್ನು ಏರ್ಲಿಫ್ಟ್ ಮಾಡಲಾಗಿದ್ದು, 290 ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಇರಾನ್ ನಿಂದ ದೆಹಲಿಗೆ 16 ಮಂದಿ ಕನ್ನಡಿಗರು ಕೂಡ ಆಗಮಿಸಿದ್ದಾರೆ. ಇವರು ದೆಹಲಿಯಿಂದ ಬೆಂಗಳೂರಿಗೆ ಹೊರಡಲಿದ್ದಾರೆ. ಬೆಳಗ್ಗೆ 7:30ರ ವಿಮಾನದಲ್ಲಿ ದೆಹಲಿಯಿಂದ ಎಂಟು ಮಂದಿ ಪ್ರಯಾಣ ಬೆಳೆಸಲಿದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು ಸೇರಿ ಒಟ್ಟು 290 ಜನ ಪಾಪಸಾಗಿದ್ದಾರೆ. ಜಮ್ಮು ಕಾಶ್ಮೀರದ 190, ಉತ್ತರ ಪ್ರದೇಶದ 42, ಕರ್ನಾಟಕದ 16, ದೆಹಲಿಯ 12, ಮಹಾರಾಷ್ಟ್ರದ 8, ಹರಿಯಾಣದ 7, ಬಿಹಾರ, ಪಶ್ಚಿಮ ಬಂಗಾಳದ ಇಬ್ಬರು, ಮಧ್ಯಪ್ರದೇಶದ ಇಬ್ಬರು, ಜಾರ್ಖಂಡ್ ನ ಓರ್ವ ಹಾಗೂ ವಿವಿಧ ರಾಜ್ಯದ 10 ಮಂದಿ ವಾಪಸ್ ಆಗಿದ್ದಾರೆ.
#WATCH | #OperationSindhu | Delhi: Mohammad Ali Qazim, an Indian National evacuated from Iran, says, "I am coming from Mashhad. It feels very good to return home… We had gone on a religious journey. The situation there is not good, especially in Tehran… Indian government… pic.twitter.com/TQ96IKlTff
— ANI (@ANI) June 21, 2025
#WATCH | #OperationSindhu | Delhi: Another flight carrying evacuated Indian Nationals from Iran, reaches Delhi. People raise slogans of 'Bharat Mata ki Jai' as they leave the airport. pic.twitter.com/eSEbij495E
— ANI (@ANI) June 20, 2025