Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ‘BMTC’ ಕಂಡಕ್ಟರ್-ಡ್ರೈವರ್ ಮೇಲೆ ನಾಲ್ವರಿಂದ ಹಲ್ಲೆ : ಓರ್ವ ಆರೋಪಿ ಅರೆಸ್ಟ್!

05/09/2025 8:14 AM

ಉಕ್ರೇನ್ ಯುದ್ಧಕ್ಕೆ ಭಾರತವೇ ಪ್ರಮುಖ ಪಾತ್ರ: ಪ್ರಧಾನಿ ಮೋದಿಗೆ ಕರೆ ಮಾಡಿದ ಯುರೋಪಿಯನ್ ಯೂನಿಯನ್ ನಾಯಕರು!

05/09/2025 8:11 AM

ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲು ನನಗೂ ಕೂಡ ಹಣದ ಆಮಿಷ ಒಡ್ಡಿದ್ದರು : ಮಂಡ್ಯ ಯೂಟ್ಯೂಬರ್ ಸ್ಪೋಟಕ ಹೇಳಿಕೆ!

05/09/2025 8:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವಿಶ್ವವಿಖ್ಯಾತ `ಮೈಸೂರು ದಸರಾ ಮಹೋತ್ಸವ’ದ ಅಧಿಕೃತ `ಆಹ್ವಾನ ಪತ್ರಿಕೆ’ ಬಿಡುಗಡೆ : CM ಸಿದ್ದರಾಮಯ್ಯ, DCM ಡಿಕೆಶಿ `ಶುಭ ಸಂದೇಶ’!
KARNATAKA

BREAKING : ವಿಶ್ವವಿಖ್ಯಾತ `ಮೈಸೂರು ದಸರಾ ಮಹೋತ್ಸವ’ದ ಅಧಿಕೃತ `ಆಹ್ವಾನ ಪತ್ರಿಕೆ’ ಬಿಡುಗಡೆ : CM ಸಿದ್ದರಾಮಯ್ಯ, DCM ಡಿಕೆಶಿ `ಶುಭ ಸಂದೇಶ’!

By kannadanewsnow5705/09/2025 5:57 AM

ಮೈಸೂರು : ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಭರ್ಜರಿ ಸಿದ್ಧತೆ ನಡೆದಿದ್ದು, ಮೈಸೂರಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಂದೇಶವನ್ನೊಳಗೊಂಡ ನಾಡಹಬ್ಬ ದಸರಾ ಮಹೋತ್ಸವದ ಅಧಿಕೃತ ಆಹ್ವಾನ ಪತ್ರಿಕೆಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ವಿಶ್ವವಿಖ್ಯಾತ ಮೈಸೂರು ದಸರಾ- ಸಿಎಂ ಸಿದ್ದರಾಮ್ಯಯ ಶುಭಸಂದೇಶ

ನಾಡಿನ ಸಮಸ್ತ ಜನತೆಗೆ ನಾಡಹಬ್ಬ ಮೈಸೂರು ದಸರಾದ ಹಾರ್ದಿಕ ಶುಭಾಶಯಗಳು.

ನಮ್ಮ ರಾಜ್ಯದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಹೊನಲಿನಲ್ಲಿ ಪ್ರಕಾಶಮಾನವಾಗಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ಕರ್ನಾಟಕದ ಹೆಮ್ಮೆ ಶಕ್ತಿಯ ಆರಾಧನೆ, ಕಲಾ ಸಂಸ್ಕೃತಿಯ ಪೋಷಣೆ ಮತ್ತು ಸಮೂಹ ಸೌಹಾರ್ದತೆಯ ಪ್ರತೀಕವಾಗಿದೆ, ನ್ಯಾಯದ ಸ್ಥಾಪನೆಯ ಸಂಕೇತವಾಗಿದೆ.

ಈ ದಸರಾ ಹಬ್ಬದ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಿಯ ಕೃಪೆ ಎಲ್ಲರ ಮೇಲೂ ಇರಲಿ. ನಾಡಿನಲ್ಲಿ ಶಾಂತಿ, ಸಮೃದ್ಧಿ ಮತ್ತು ಸೌಭಾಗ್ಯ ಮೇಲೈಸಲಿ ಎಂಬುದೇ ನನ್ನ ಹಾರೈಕೆ.

ವೈಭವೋಪೇತ ಮೈಸೂರು ದಸರಾ ಹಬ್ಬವು ನಾಡಿನ ವೈಶಿಷ್ಟ್ಯತೆ, ಜನಪದ ಕಲಾಪರಂಪರೆ ಮತ್ತು ಸಾಮೂಹಿಕ ಉತ್ಸವ ಸಂಸ್ಕೃತಿಯನ್ನೂ ವಿಶ್ವದವರೆಗೆ ಹರಡುವ ನಿಟ್ಟಿನಲ್ಲಿ ವಿಶ್ವದ ಕನ್ನಡಿಗರ ಸಾಂಸ್ಕೃತಿಕ ಹಬ್ಬವಾಗಿ ಅತ್ಯಂತ ಮಹತ್ವಪೂರ್ಣವಾಗಿದೆ.

ಈ ಬಾರಿಯ ದಸರಾ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 02 ರವರೆಗೆ ಜರುಗಲಿದೆ. ಇಂತಹ ನಾಡಹಬ್ಬದ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ, ಸಹಭಾಗಿತ್ವದಿಂದ, ಕನ್ನಡ ನಾಡು-ನುಡಿಗೆ ಗೌರವ ನೀಡುವ ದಿಕ್ಕಿನಲ್ಲಿ ಕೈಜೋಡಿಸೋಣ.

ಮತ್ತೊಮ್ಮೆ ನಾಡಹಬ್ಬ ದಸರಾ ಶುಭಾಶಯಗಳು.

ಡಿಸಿಎಂ ಡಿಕೆ ಶಿವಕುಮಾರ್ ಶುಭಸಂದೇಶ

ಕರ್ನಾಟಕದ ಜನತೆಗೆ ನಾಡಹಬ್ಬ ದಸರಾದ ಶುಭಾಶಯಗಳು.

“ಮೈಸೂರು ದಸರಾ ಎಷ್ಟೊಂದು ಸುಂದರ” ಶಕ್ತಿ, ಶಾಂತಿ ಮತ್ತು ಸಮಾನತೆಯನ್ನು ಸಾರುವ ಮಂದಾರ. ಇತಿಹಾಸ, ಸಂಸ್ಕೃತಿಯ ಪ್ರತೀಕವಾದ ಭಕ್ತಿ, ವೈಭವವನ್ನು ಒಳಗೊಂಡಿರುವ ಕರುನಾಡಿನ ಅತ್ಯಂತ ಪವಿತ್ರ ಹಾಗೂ ಪ್ರತಿಷ್ಠಿತವಾದ ಸಂಭ್ರಮದ ಹಬ್ಬವಾಗಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಪ್ರಾರಂಭವಾಗಿ ಮೈಸೂರು ಅರಸರ ಅಳ್ವಿಕೆಯಲ್ಲಿ ಹೊಸ ರೂಪ ಪಡೆದು, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಇತಿಹಾಸದ ಕೊಂಡಿಯಾಗಿ ಸರ್ವರನ್ನೂ ಬೆನಯುತ್ತಿರುವ ಹಬ್ಬ ದಸರಾ.

ಮೈಸೂರು ದಸರಾ ಕೇವಲ ಉತ್ಸವವಲ್ಲ. ನಮ್ಮ ನಾಡು-ನುಡಿಗಳ ಸಾಂಸ್ಕೃತಿಕ ಸಮ್ಮಿಲನ. ನಮ್ಮ ನಾಡಿನ ಪರಂಪರೆಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸುವ ಶಕ್ತಿಯುತ ವೇದಿಕೆ. ಇಂತಹ ಉತ್ಸವಗಳು ನಮ್ಮ ನೆಲದ ಮೂಲ ಗುಣವಾದ ಸೌಹಾರ್ದತೆಯನ್ನು ಸಾರುತ್ತವೆ. ಈ ಹಬ್ಬವು ನಮ್ಮ ನಾಡಿನಲ್ಲಿ ಶ್ರೇಯಸ್ಸು, ವೈಭವ ಮತ್ತು ಸಮಾನತೆಯ ಬೆಳಕು ಹರಡಲಿ ಎಂದು ಆಶಿಸುತ್ತೇನೆ.

ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ಕೃಪಾಕಟಾಕ್ಷವು ರಾಜ್ಯದ ಜನರ ಮೇಲಿರಲಿ. ಎಲ್ಲಾ ಕೆಡುಕುಗಳಿಂದ ರಕ್ಷಣೆ ದೊರೆತು, ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ತರಲಿ ಎಂದು ಪ್ರಾರ್ಥಿಸುತ್ತೇನೆ. ಈ ಸಂತಸದ ಸಂದರ್ಭದಲ್ಲಿ ರಾಜ್ಯದ ಎಲ್ಲರಿಗೂ ನಾಡಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ.

BREAKING: Official 'invitation' for the world-famous 'Mysore Dasara Mahotsav' released: CM Siddaramaiah DCM DK Shi send 'good wishes'!
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ‘BMTC’ ಕಂಡಕ್ಟರ್-ಡ್ರೈವರ್ ಮೇಲೆ ನಾಲ್ವರಿಂದ ಹಲ್ಲೆ : ಓರ್ವ ಆರೋಪಿ ಅರೆಸ್ಟ್!

05/09/2025 8:14 AM1 Min Read

ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲು ನನಗೂ ಕೂಡ ಹಣದ ಆಮಿಷ ಒಡ್ಡಿದ್ದರು : ಮಂಡ್ಯ ಯೂಟ್ಯೂಬರ್ ಸ್ಪೋಟಕ ಹೇಳಿಕೆ!

05/09/2025 8:07 AM1 Min Read

ಚಿಕ್ಕಬಳ್ಳಾಪುರ :’ತಾಯಿಯ ಪಿಂಚಣಿ ಹಣಕ್ಕಾಗಿ ಸಹೋದರರ ಮಧ್ಯ ಗಲಾಟೆ, ಅಣ್ಣನ ಕೊಲೆಯಲ್ಲಿ ಅಂತ್ಯ!

05/09/2025 7:52 AM1 Min Read
Recent News

BREAKING : ಬೆಂಗಳೂರಲ್ಲಿ ‘BMTC’ ಕಂಡಕ್ಟರ್-ಡ್ರೈವರ್ ಮೇಲೆ ನಾಲ್ವರಿಂದ ಹಲ್ಲೆ : ಓರ್ವ ಆರೋಪಿ ಅರೆಸ್ಟ್!

05/09/2025 8:14 AM

ಉಕ್ರೇನ್ ಯುದ್ಧಕ್ಕೆ ಭಾರತವೇ ಪ್ರಮುಖ ಪಾತ್ರ: ಪ್ರಧಾನಿ ಮೋದಿಗೆ ಕರೆ ಮಾಡಿದ ಯುರೋಪಿಯನ್ ಯೂನಿಯನ್ ನಾಯಕರು!

05/09/2025 8:11 AM

ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲು ನನಗೂ ಕೂಡ ಹಣದ ಆಮಿಷ ಒಡ್ಡಿದ್ದರು : ಮಂಡ್ಯ ಯೂಟ್ಯೂಬರ್ ಸ್ಪೋಟಕ ಹೇಳಿಕೆ!

05/09/2025 8:07 AM

BREAKING: ಅನಿಲ್ ಅಂಬಾನಿಗೆ ಸಂಕಷ್ಟ: RCOM ಸಾಲವನ್ನು ‘ವಂಚನೆ’ ಎಂದು ಘೋಷಿಸಿದ ಬ್ಯಾಂಕ್ ಆಫ್ ಬರೋಡಾ!

05/09/2025 7:53 AM
State News
KARNATAKA

BREAKING : ಬೆಂಗಳೂರಲ್ಲಿ ‘BMTC’ ಕಂಡಕ್ಟರ್-ಡ್ರೈವರ್ ಮೇಲೆ ನಾಲ್ವರಿಂದ ಹಲ್ಲೆ : ಓರ್ವ ಆರೋಪಿ ಅರೆಸ್ಟ್!

By kannadanewsnow0505/09/2025 8:14 AM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಬಿಎಂಟಿಸಿ ಸಿಬ್ಬಂದಿಗಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಮತ್ತೊಂದು ಹಲ್ಲೆ ಪ್ರಕರ ಣ ನಡೆದಿದ್ದು,…

ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲು ನನಗೂ ಕೂಡ ಹಣದ ಆಮಿಷ ಒಡ್ಡಿದ್ದರು : ಮಂಡ್ಯ ಯೂಟ್ಯೂಬರ್ ಸ್ಪೋಟಕ ಹೇಳಿಕೆ!

05/09/2025 8:07 AM

ಚಿಕ್ಕಬಳ್ಳಾಪುರ :’ತಾಯಿಯ ಪಿಂಚಣಿ ಹಣಕ್ಕಾಗಿ ಸಹೋದರರ ಮಧ್ಯ ಗಲಾಟೆ, ಅಣ್ಣನ ಕೊಲೆಯಲ್ಲಿ ಅಂತ್ಯ!

05/09/2025 7:52 AM

ಬೆಂಗಳೂರಲ್ಲಿ ಮಹಿಳಾ​ ಪಿಜಿಗೆ ನುಗ್ಗಿ ಯುವತಿಯೊಂದಿಗೆ ಅನುಚಿತ ವರ್ತನೆ, ಹಣ ಸುಲಿಗೆ : ಆರೋಪಿ ಅರೆಸ್ಟ್

05/09/2025 7:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.