ಪುರ್ಬಾ ಮೇದಿನಿಪುರ : ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವ್ರ ಬೆಂಗಾವಲು ವಾಹನಕ್ಕೆ ಭೀಕರ ಅಪಘಾತ ಸಂಭವಿಸಿದ್ದು, ಬೆಂಗಾವಲು ಪಡೆಯಲ್ಲಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಬೆಂಗಾವಲು ಪಡೆಯಲ್ಲಿದ್ದ ಒಂದು ಕಾರಿಗೆ ಅಪಘಾತ ಸಂಭವಿಸಿದ್ದು, ಆ ಕಾರಲ್ಲಿ ಸುವೇಂದು ಅಧಿಕಾರಿ ಇರಲಿಲ್ಲ ಎಂದು ತಿಳಿದುಬಂದಿದೆ.

ಇನ್ನು ಘಟನೆಯ ನಂತರ ಟ್ರಕ್ʼನ ಚಾಲಕ ಪರಾರಿಯಾಗಿದ್ದು, ಯಾರಿಗೂ ಗಂಭೀರವಾಗಿ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಸಧ್ಯ ಮಾಹಿತಿ ಪಡೆದ ಮಾರಿಚಡಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಸುವೇಂದು ಅಧಿಕಾರಿ ಶುಕ್ರವಾರ ಬೆಳಿಗ್ಗೆ ಶಾಂತಿಕುಂಜ್ʼನಿಂದ ಹೊರಟು ತಮ್ಲುಕ್ʼಗೆ ತೆರಳಿದ್ದರು. ಅವರು ತಮ್ಲುಕ್ʼನಲ್ಲಿ ರಥಯಾತ್ರೆಯಲ್ಲಿ ಭಾಗವಹಿಸಬೇಕಾಗಿತ್ತು. ಅವರ ಬೆಂಗಾವಲು ಪಡೆಯಲ್ಲಿ ಒಟ್ಟು 6 ಕಾರುಗಳಿದ್ದು, ಅವ್ರು ಮೂರನೇ ಸಂಖ್ಯೆಯ ಕಾರಿನಲ್ಲಿದ್ದರು ಎನ್ನಲಾಗ್ತಿದೆ. ಟ್ರಕ್ ಅವ್ರ ಪಕ್ಕದ ಕಾರಿಗೆ ಅಂದರೆ ನಾಲ್ಕನೇ ಕಾರಿಗೆ ಡಿಕ್ಕಿ ಹೊಡೆದಿದೆ. ಆರಂಭದಲ್ಲಿ, ಟ್ರಕ್ ತಮ್ಲುಕ್ʼನಿಂದ ಕಾಂತಿಗೆ ಹೋಗುತ್ತಿದೆ ಎಂದು ವರದಿಯಾಗಿದ್ದು, ಅದರ ವೇಗವೂ ತುಂಬಾ ಹೆಚ್ಚಾಗಿತ್ತು ಎನ್ನಲಾಗ್ತಿದೆ. ಇನ್ನು ಮಾರಿಚ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಡರ್ಮೂಟ್ ಬಳಿ ಈ ಘಟನೆ ನಡೆದಿದೆ.

ಇನ್ನು ಡಿಕ್ಕಿ ಹೊಡೆದ ನಂತ್ರ ಚಾಲಕ ಟ್ರಕ್ʼನ ವೇಗವನ್ನ ಹೆಚ್ಚಿಸಿ ಪರಾರಿಯಾಗಿದ್ದು, ಮಾಹಿತಿ ಪಡೆದ ಪೊಲೀಸ್ ವ್ಯಾನ್ ಟ್ರಕ್ʼನ ಬೆನ್ನಟ್ಟಿದೆ. ಆದಾಗ್ಯೂ, ಟ್ರಕ್ ಚಾಲಕನ ಯಾವುದೇ ಕುರುಹು ಈವರೆಗೆ ಸಿಕ್ಕಿಲ್ಲ.

Share.
Exit mobile version