ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ 2 ವರ್ಷದ ಮಗುವಿನ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಗು ಕೊನೆಗೂ ಪೋಷಕರ ಮಡಿಲು ಸೇರಿದೆ.
ಹೌದು, ಚಿಕ್ಕಮಗಳುರು ಜಿಲ್ಲೆಯ ಕಡೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಸೀತಾಪುರ ಗ್ರಾಮದ ರಘುನಾಯಕ್ ಪುತ್ರಿ ಮಾನಸ (2) ಮಗುವನ್ನು ಮಹಿಳೆಯೊಬ್ಬಳು ಅಪಹರಣ ಮಾಡಿದ್ದಾಳೆ ಎನ್ನಲಾಗಿತ್ತು. ಆದರೆ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದು, ಮಗು ಒಬ್ಬಂಟಿಯಾಗಿ ನಿಂತಿದ್ದು ನೋಡಿ ಮಗುವನ್ನು ಪೋಷಕರ ಬಳಿ ಕರೆದೊಯ್ಯಲು ಹೋಗಿದ್ದೆ ಎಂದು ಮಹಿಳೆ ಹೇಳಿದ್ದು, ಸದ್ಯ ಮಗು ಪೋಷಕರ ಮಡಿಲು ಸೇರಿದೆ.
ಎಣ್ಣೆ ಗಾಣದ ಅಂಗಡಿ ಬಳಿ ನಿಂತಿದ್ದ ಮಗುವನ್ನು ಮಹಿಳೆಯೊಬ್ಬರು ಸೀರೆಯ ಸೆರೆಗು ಮುಚ್ಚಿಕೊಂಡು ಮಗುವನ್ನು ಕರೆದುಕೊಂಡು ಹೋಗಿದ್ದರು. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಕಡೂರು ಠಾಣೆಯ ಪೊಲೀಸರು ಮಗು ಪತ್ತೆಗಾಗಿ ಹುಡುಕಾಟ ನಡೆಸಿದ್ದರು.