ಚೆನ್ನೈ : ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ತಮಿಳು ವೆಟ್ರಿ ಕಲಾಗಂ (TVK) ನಾಯಕ ಮತ್ತು ನಟ ವಿಜಯ್ ಅವರಿಗೆ ಸಿಬಿಐ ಆಘಾತ ನೀಡಿದೆ. ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಅಂದ್ಹಾಗೆ, ಸೆಪ್ಟೆಂಬರ್ 27ರಂದು ಕರೂರಿನಲ್ಲಿ ವಿಜಯ್ ಆಯೋಜಿಸಿದ್ದ ಪ್ರಚಾರ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 41 ಜನರು ಪ್ರಾಣ ಕಳೆದುಕೊಂಡಿದ್ದರು. ನಟ ವಿಜಯ್ ಸಭೆಗೆ ತಡವಾಗಿ ಬಂದ ನಂತರ ನೆರೆದಿದ್ದ ದೊಡ್ಡ ಜನಸಮೂಹದಿಂದ ಕಾಲ್ತುಳಿತ ಸಂಭವಿಸಿದೆ ಮತ್ತು ಸರಿಯಾದ ನೀರು ಸರಬರಾಜು ಇಲ್ಲದ ಕಾರಣ ಅನೇಕ ಜನರು ನಿರ್ಜಲೀಕರಣದಿಂದ ಸಾವನ್ನಪ್ಪಿದ್ದಾರೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ, ಜನವರಿ 12 ರಂದು ದೆಹಲಿಯಲ್ಲಿರುವ ತನ್ನ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ವಿಜಯ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಕರೂರ್ ಘಟನೆಗೆ ಸಂಬಂಧಿಸಿದಂತೆ ನಟ ವಿಜಯ್ ಅವರಿಗೆ ನೀಡಲಾದ ನೋಟಿಸ್ ತಮಿಳು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತಂಡವು ಮೇಲ್ವಿಚಾರಣೆ ಮಾಡುತ್ತಿದೆ. ನಿವೃತ್ತ ನ್ಯಾಯಾಧೀಶ ಅಜಯ್ ರಸ್ತೋಗಿ ನೇತೃತ್ವದ ತಂಡದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಸುಮಿತ್ ಚರಣ್ ಮತ್ತು ಸೋನಲ್ ಮಿಶ್ರಾ ಸೇರಿದ್ದಾರೆ. ಸಿಬಿಐ ಈಗಾಗಲೇ ಕರೂರ್ ಎಸ್ಪಿ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು ಮತ್ತು ಬಲಿಪಶುಗಳ ಕುಟುಂಬಗಳನ್ನು ಪ್ರಶ್ನಿಸಿದೆ. ಸಭೆಯನ್ನು ಆಯೋಜಿಸುವಲ್ಲಿ ಪೊಲೀಸರಿಂದ ಭದ್ರತಾ ಲೋಪವಾಗಿದೆಯೇ ಅಥವಾ ಪಕ್ಷದ ಸಂಘಟಕರ ಕಳಪೆ ಯೋಜನೆಯಿಂದಾಗಿ ಅಪಘಾತ ಸಂಭವಿಸಿದೆಯೇ ಎಂದು ನಿರ್ಧರಿಸಲು ಅಧಿಕಾರಿಗಳು ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ.
ಚಾಮರಾಜನಗರ : ಏಕಾಏಕಿ ಕುಸಿದು ಬಿದ್ದ ಅಂಗನವಾಡಿಯ ಮೇಲ್ಚಾವಣಿ : ಮಕ್ಕಳಿಲ್ಲದ ಕಾರಣ ತಪ್ಪಿದ ಭಾರಿ ಅನಾಹುತ!
‘LIC’ಯ ಅದ್ಭುತ ಯೋಜನೆ ; ಕೇವಲ ₹150 ಉಳಿಸಿ ₹26 ಲಕ್ಷ ಗಳಿಸಿ! ಹೀಗೆ ಹೂಡಿಕೆ ಮಾಡಿ!








