ಬೆಳಗಾವಿ : ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತುರಕರ ಶೀಗಿಹಳ್ಳಿಯಲ್ಲಿ ನಡೆದಿದೆ.
ಯಲ್ಲವ್ವ (40) ಕೊಲೆಗೈದು ಶಿವಪ್ಪ ಸಣ್ಣಬಸಪ್ಪ ಕಂಬಳಿ (46) ಆತ್ಮಹತ್ಯೆಗೆ ಶರಣಾಗಿದ್ದಾರೆ. ತವರು ಮನೆಗೆ ಹೋಗುತ್ತಿದ್ದ ಹೆಂಡತಿ ಜೊತೆಗೆ ಜಗಳ ಮಾಡುತ್ತಿದ್ದ ಪತಿ. ತಾಯಿ ಸತ್ತು ಒಂದು ವಾರ ಆಗಿದೆ, ಹೋಗಿ ಬರ್ತೀನಿ ಎಂದು ಯಲ್ಲವ್ವ ಹೇಳಿದ್ದರು. ಆದರೆ ತವರು ಮನೆಗೆ ಹೋಗದಂತೆ ಪತಿ ಶಿವಪ್ಪ ತಾಕೀತು ಮಾಡಿದ್ದ.
ಈ ವೇಳೆ ಜಗಳ ನಡೆದು ಪತ್ನಿ ಯಲ್ಲವ್ವ ಕುತ್ತಿಗೆ, ಬೆನ್ನಿಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.








