ಬೆಂಗಳೂರು : ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ 2500 ಕಿ.ಮೀ. ಉದ್ದದ ಮಾನವ ಸರಪಳಿಗೆ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ವೇಳೆ ಯುವಕನೊಬ್ಬ ಹೈಡ್ರಾಮಾ ಮಾಡಿದ್ದು, ಸಿಎಂ ಇದ್ದ ವೇದಿಕೆ ಮೇಲೆ ಜಂಪ್ ಮಾಡಿ ಗಾಬರಿ ಹುಟ್ಟಿಸಿದ್ದಾನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನದ ಪೀಠಿಕೆ ಓದುವ ಮೂಲಕ ಚಾಲನೆ ನೀಡಿದ್ದಾರೆ. ಈ ವೇಳೆ ಶಾಲು ಹಿಡಿದ ಯುವಕನೊಬ್ಬ ಸಿದ್ದರಾಮಯ್ಯ ಇದ್ದ ವೇದಿಕೆ ಮೇಲೆ ನುಗ್ಗಿದ್ದಾನೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಗಾಬರಿಗೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವೇದಿಕಗೆ ಮೇಲೆ ಕುಳಿತಿದ್ದ ವೇಳೆ ಕೆಳಗಿನಿಂದ ಒಮ್ಮೆಲೇ ವೇದಿಕೆ ಮೇಲೆ ಜಂಪ್ ಮಾಡಿದ ಯುವಕ ಸಿಎಂ ಸಿದ್ದರಾಮಯ್ಯರತ್ತ ಶಾಲು ಎಸೆಯಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಯುವಕನ್ನು ವಶಕ್ಕೆ ಪಡೆದಿದ್ದಾರೆ. ಆದರೂ ಯುವಕ ಶಾಲು ಎಸೆಯಲು ಮುಂದಾಗಿದ್ದಾನೆ.