Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೋಲಾರದಲ್ಲಿ ಭೀಕರ ಮರ್ಡರ್ : ಪ್ರೀತಿ ಒಪ್ಪದಕ್ಕೆ ಚಾಕುವಿನಿಂದ ಇರಿದು ಮಹಿಳೆಯ ಬರ್ಬರ ಹತ್ಯೆ : ಆರೋಪಿ ಅರೆಸ್ಟ್

15/01/2026 11:33 AM

ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ! ತಕ್ಷಣ ಫೋನ್ ಅಪ್‌ಡೇಟ್ ಮಾಡದಿದ್ದರೆ ಹ್ಯಾಕರ್ಸ್ ಪಾಲು ನಿಮ್ಮ ಡೇಟಾ: ಕೇಂದ್ರ ಸರ್ಕಾರದಿಂದ ತುರ್ತು ವಾರ್ನಿಂಗ್

15/01/2026 11:28 AM

BIG NEWS : ಬೆಂಗಳೂರಲ್ಲಿ ಖಾಸಗಿ ಬಸ್ ಹರಿದು ಸ್ಥಳದಲ್ಲೇ ಬೈಕ್ ಸವಾರ ದುರ್ಮರಣ!

15/01/2026 11:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನಲ್ಲಿ ಭಾರೀ ಮಳೆಗೆ ರಸ್ತೆಗಳು ಜಲಾವೃತ : ಮುಳುಗಿದ ಬೈಕ್, ಕಾರುಗಳು| WATCH VIDEO
KARNATAKA

BREAKING : ಬೆಂಗಳೂರಿನಲ್ಲಿ ಭಾರೀ ಮಳೆಗೆ ರಸ್ತೆಗಳು ಜಲಾವೃತ : ಮುಳುಗಿದ ಬೈಕ್, ಕಾರುಗಳು| WATCH VIDEO

By kannadanewsnow5719/05/2025 12:16 PM

ಬೆಂಗಳೂರು : ಬೆಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ರಸ್ತೆಯಲ್ಲಿ ನಿಂತಿರುವ ಬೈಕ್ ಗಳು, ಕಾರುಗಳು ಮುಳುಗಡೆ ಆಗಿವೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನಗರದಲ್ಲಿ ಭಾರಿ ಮಳೆಯ ಎಚ್ಚರಿಕೆಯನ್ನು ನೀಡಿದೆ. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ತೀವ್ರ ಜಲಾವೃತದಿಂದಾಗಿ ಸಂಚಾರಕ್ಕೆ ದೊಡ್ಡ ಅಡಚಣೆ ಉಂಟಾಯಿತು. ಸುಮಾರು 8 ರಿಂದ 9 ಗಂಟೆಗಳ ಕಾಲ ಮಳೆಯಾಗಿದೆ. ಸಾಯಿ ಲೇಔಟ್‌ನಂತಹ ತಗ್ಗು ಪ್ರದೇಶಗಳು ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ.

ಮೇ 18 ರ ತಡರಾತ್ರಿ ಬೆಂಗಳೂರು ವರ್ಷದ ಅತಿ ಹೆಚ್ಚು ಮಳೆಯನ್ನು ಕಂಡಿತು, ಬೆಳಗಿನ ಜಾವ 1.30 ರ ನಂತರ ಪ್ರಾರಂಭವಾದ ಪ್ರವಾಹವು ಬೆಳಗಿನ ಜಾವದವರೆಗೂ ಮುಂದುವರಿದು ನಗರದಾದ್ಯಂತ ವ್ಯಾಪಕ ಅವ್ಯವಸ್ಥೆಯನ್ನು ಉಂಟುಮಾಡಿತು. ಕೆಂಗೇರಿಯಲ್ಲಿ 123 ಮಿಮೀ ಮಳೆಯಾಗಿದ್ದು, ಜಯನಗರ, ಬಿಟಿಎಂ ಲೇಔಟ್ ಮತ್ತು ಯಶವಂತಪುರದಂತಹ ಇತರ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗಿದೆ. ತಡರಾತ್ರಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ಬೆಳಗಿನ ಸಂಚಾರಕ್ಕೆ ದೊಡ್ಡ ಅಡಚಣೆ ಉಂಟಾಯಿತು. ನಗರದ ಕೇಂದ್ರ ವ್ಯಾಪಾರ ಜಿಲ್ಲೆ ಮತ್ತು ದಕ್ಷಿಣ ಮತ್ತು ನೈಋತ್ಯ ಬೆಂಗಳೂರಿನ ಕೆಲವು ಭಾಗಗಳು ಮಳೆಯ ತೀವ್ರತೆಯನ್ನು ಅನುಭವಿಸಿದವು, ಹಲವಾರು ಮನೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತಗೊಂಡವು.

ಬೆಂಗಳೂರಿನ ಭಾರೀ ಮಳೆಯಿಂದಾಗಿ ಹಲವಡೆ ಅವಾಂತರ ಸೃಷ್ಟಿಯಾಗಿದ್ದು, ಆಡುಗೋಡಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಜನರಿಗೆ ಸಂಕಷ್ಟ ಎದುರಾಗಿದೆ. ಮನೆಯಿಂದ ನೀರು ಹೊರಹಾಕಲು ಜನರು ಪರದಾಡಿದ್ದಾರೆ. ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಮನೆಗಳಲ್ಲಿ ಇದ್ದ ವಸ್ತುಗಳು, ಆಹಾರ ಪದಾರ್ಥಗಳು ಚೆಲ್ಲಾಪಿಲ್ಲಿಯಾಗಿವೆ. ಶಾಂತಿನಗರ, ರಿಚ್ ಮಂಡ್ ಸರ್ಕಲ್ ಬಳಿ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಬೆಂಗಳೂರಿನ ಶಾಂತಿನಗರದ ಬಿಎಂಟಿಸಿ ಬಸ್ ಡಿಪೋ-2 ಸಂಪೂರ್ಣ ಜಲಾವೃತಗೊಂಡಿದ್ದು, 100 ಕ್ಕೂ ಹೆಚ್ಚು ಬಸ್ ಗಳು ಸಂಚರಿಸಿದೇ ನಿಂತಿವೆ.

ಇನ್ನೂ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಲಕ್ಕಸಂದ್ರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಪುಕ್ ರಾಜ್ ಬಡಾವಣೆಯ 2ನೇ ಮುಖ್ಯ ರಸ್ತೆ ಜಲಾವೃತೊಂಡಿದೆ. ಮನೆಗಳಿಗೆ ನೀರು ನುಗ್ಗಿ ಸ್ಥಳಿಯ ನಿವಾಸಿಗಳು ಪರದಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮೋಟಾರ್ ಹಾಕಿ ನೀರು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚಾಮರಾಜಪೇಟೆಯ ಶಿರಸಿ ರಸ್ತೆಯಲ್ಲಿ ಮಳೆ ಅಬ್ಬರಕ್ಕೆ ರಸ್ತೆ ಬದಿಯ ಬೃಹತ್ ಮರ ಉರುಳಿ ಬಿದ್ದಿದ್ದು, ವಾಹನ ಸವಾರರು ಪರದಾಡಿದ್ದಾರೆ.

#WATCH | Bengaluru, Karnataka: Several parts of the city witness waterlogging after heavy rains.

(Visuals from Sri Kanteerava Outdoor Stadium) pic.twitter.com/yWAQ2EIM39

— ANI (@ANI) May 19, 2025

#WATCH | Bengaluru, Karnataka: Several parts of the city witness waterlogging after heavy rains.

(Visuals from Silk Board Metro Station) pic.twitter.com/ji5gjGygCr

— ANI (@ANI) May 19, 2025

BREAKING: Heavy rains in Bengaluru flood roads: Bikes cars submerged | WATCH VIDEO
Share. Facebook Twitter LinkedIn WhatsApp Email

Related Posts

ಕೋಲಾರದಲ್ಲಿ ಭೀಕರ ಮರ್ಡರ್ : ಪ್ರೀತಿ ಒಪ್ಪದಕ್ಕೆ ಚಾಕುವಿನಿಂದ ಇರಿದು ಮಹಿಳೆಯ ಬರ್ಬರ ಹತ್ಯೆ : ಆರೋಪಿ ಅರೆಸ್ಟ್

15/01/2026 11:33 AM1 Min Read

BIG NEWS : ಬೆಂಗಳೂರಲ್ಲಿ ಖಾಸಗಿ ಬಸ್ ಹರಿದು ಸ್ಥಳದಲ್ಲೇ ಬೈಕ್ ಸವಾರ ದುರ್ಮರಣ!

15/01/2026 11:21 AM1 Min Read

BIG NEWS : ನಟೋರಿಯಸ್ ರೌಡಿಶೀಟರ್, ಗುಬ್ಬಚ್ಚಿ ಸೀನನ ವಿರುದ್ಧ ಕೋಕಾ ಆಕ್ಟ್ ದಾಖಲಿಸಿದ ಪೊಲೀಸರು

15/01/2026 11:08 AM1 Min Read
Recent News

ಕೋಲಾರದಲ್ಲಿ ಭೀಕರ ಮರ್ಡರ್ : ಪ್ರೀತಿ ಒಪ್ಪದಕ್ಕೆ ಚಾಕುವಿನಿಂದ ಇರಿದು ಮಹಿಳೆಯ ಬರ್ಬರ ಹತ್ಯೆ : ಆರೋಪಿ ಅರೆಸ್ಟ್

15/01/2026 11:33 AM

ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ! ತಕ್ಷಣ ಫೋನ್ ಅಪ್‌ಡೇಟ್ ಮಾಡದಿದ್ದರೆ ಹ್ಯಾಕರ್ಸ್ ಪಾಲು ನಿಮ್ಮ ಡೇಟಾ: ಕೇಂದ್ರ ಸರ್ಕಾರದಿಂದ ತುರ್ತು ವಾರ್ನಿಂಗ್

15/01/2026 11:28 AM

BIG NEWS : ಬೆಂಗಳೂರಲ್ಲಿ ಖಾಸಗಿ ಬಸ್ ಹರಿದು ಸ್ಥಳದಲ್ಲೇ ಬೈಕ್ ಸವಾರ ದುರ್ಮರಣ!

15/01/2026 11:21 AM

BIG NEWS : ನಟೋರಿಯಸ್ ರೌಡಿಶೀಟರ್, ಗುಬ್ಬಚ್ಚಿ ಸೀನನ ವಿರುದ್ಧ ಕೋಕಾ ಆಕ್ಟ್ ದಾಖಲಿಸಿದ ಪೊಲೀಸರು

15/01/2026 11:08 AM
State News
KARNATAKA

ಕೋಲಾರದಲ್ಲಿ ಭೀಕರ ಮರ್ಡರ್ : ಪ್ರೀತಿ ಒಪ್ಪದಕ್ಕೆ ಚಾಕುವಿನಿಂದ ಇರಿದು ಮಹಿಳೆಯ ಬರ್ಬರ ಹತ್ಯೆ : ಆರೋಪಿ ಅರೆಸ್ಟ್

By kannadanewsnow0515/01/2026 11:33 AM KARNATAKA 1 Min Read

ಕೋಲಾರ : ಕೋಲಾರದಲ್ಲಿ ಮಹಿಳೆಯ ಹಿಂದೆ ಬಿದ್ದ ವ್ಯಕ್ತಿಯೊಬ್ಬ ತನ್ನ ಪ್ರೀತಿ ಒಪ್ಪದಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ,…

BIG NEWS : ಬೆಂಗಳೂರಲ್ಲಿ ಖಾಸಗಿ ಬಸ್ ಹರಿದು ಸ್ಥಳದಲ್ಲೇ ಬೈಕ್ ಸವಾರ ದುರ್ಮರಣ!

15/01/2026 11:21 AM

BIG NEWS : ನಟೋರಿಯಸ್ ರೌಡಿಶೀಟರ್, ಗುಬ್ಬಚ್ಚಿ ಸೀನನ ವಿರುದ್ಧ ಕೋಕಾ ಆಕ್ಟ್ ದಾಖಲಿಸಿದ ಪೊಲೀಸರು

15/01/2026 11:08 AM

ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟಗೊಂಡು, ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದ ಶೆಡ್‌ಗಳು ಬೆಂಕಿಗಾಹುತಿ!

15/01/2026 10:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.