ಅಹ್ಮದಾಬಾದ್: ಅಹಮದಾಬಾದ್ನಲ್ಲಿ ಗುರುವಾರ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 241 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಡಿಎನ್ಎ ಹೋಲಿಕೆಯಾಗಿದೆ ಎಂದು ರಾಜ್ಯ ಗೃಹ ಸಚಿವ ಹರ್ಷ ಸಾಂಘವಿ ಭಾನುವಾರ ದೃಢಪಡಿಸಿದ್ದಾರೆ.
ಬೆಳಿಗ್ಗೆ ೧೧.೧೦ ಕ್ಕೆ ಬಂದ ಡಿಎನ್ ಎ ವರದಿಯಲ್ಲಿ ದೃಢೀಕರಣ ಮಾಡಲಾಗಿದೆ.ಅವರ ಅಂತಿಮ ವಿಧಿಗಳು ರಾಜ್ ಕೋಟ್ ನಲ್ಲಿ ನಡೆಯಲಿವೆ.ಅವರ ಮೃತ ದೇಹಗಳ ಸಾಗಣೆಯನ್ನು ಸಮನ್ವಯಗೊಳಿಸಲು ಸಿಎಂಒ ಅಧಿಕಾರಿಗಳು ನಗರದ ಸಿವಿಲ್ ಆಸ್ಪತ್ರೆಯಲ್ಲಿದ್ದರು