ಕೊಪ್ಪಳ : ಕೊಪ್ಪಳದಲ್ಲಿ ನಾಪತ್ತೆಯಾಗಿದ್ದ ಉದ್ಯಮಿ ಅರ್ಜುನ್ ಸಾ ಕಾಟ್ವಾ ಅವರ ಶವ ಹುಲಿಕೆರೆಯಲ್ಲಿ ಪತ್ತೆಯಾಗಿದೆ.
ಕೊಪ್ಪಳ ನಗರದ ವಿದ್ಯಾನಗರದ ನಿವಾಸಿ ಅರ್ಜುನ್ ಸಾ ಕಾಟ್ವಾ ಅವರು ನಾಪತ್ತೆಯಾಗಿದ್ದು, ಇಂದು ಕೊಪ್ಪಳ ನಗರದ ಹೊರವಲಯದ ಹುಲಿಕೆರೆಯಲ್ಲಿ ಶವ ಪತ್ತೆಯಾಗಿದೆ.
ಅರ್ಜುನ್ ಸಾ ಕಾಟ್ವಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.