ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸೌಜನ್ಯ ಅವರ ತಾಯಿ ಮತ್ತೆ ಎಸ್ಐಟಿ ವಶದಲ್ಲಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯ ವಿರುದ್ಧ ಸೌಜನ್ಯ ತಾಯಿ ಕುಸುಮ ದೂರು ನೀಡಿದ್ದಾರೆ.
ಇಂದು ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಆಗಮಿಸಿದ ಕುಸುಮಾ ಚಿನ್ನಯ್ಯ ಅವರ ಈ ಹಿಂದಿನ ಹೇಳಿಕೆಗಳನ್ನು ಆಧರಿಸಿ ದೂರು ಕೊಟ್ಟಿದ್ದಾರೆ. ಎಸ್ಐಟಿ ತನಿಖೆ ಆರಂಭಕ್ಕೂ ಮುನ್ನ ಚಿನ್ನಯ್ಯ ಯೂಟ್ಯೂಬ್ಗೆ ಸಂದರ್ಶನ ಕೊಡುವ ವೇಳೆ ತಾನು ಸೌಜನ್ಯ ಹೆಣವನ್ನು ಹೊತ್ತುಕೊಂಡು ಹೋಗಿದ್ದನ್ನು ನೋಡಿದ್ದಾಗಿ ಹೇಳಿದ್ದ. ಆ ವಿಚಾರವನ್ನು ಉಲ್ಲೇಖಿಸಿ ಕುಸುಮಾ ದೂರು ನೀಡಲು ಮುಂದಾಗಿದ್ದಾರೆ.
ಎಸ್ ಐಟಿಗೆ ಪ್ರಕರಣ ಹೋಗುವ ಮೊದಲು ಚಿನ್ನಯ್ಯ ಯೂಟ್ಯೂಬ್ ಗೆ ಸಂದರ್ಶನ ಕೊಡುವಾಗ ಈ ಹೇಳಿಕೆ ನೀಡಿದ್ದ ಎನ್ನಲಾಗಿದೆ. ಎಸ್ಐಟಿ ಅಧಿಕಾರಿಗಳು ನಾವು ಸೂಚಿಸಿದ ಬಳಿಕ ಬಂದು ದೂರು ನೀಡುವಂತೆ ವಾಪಸ್ ಕಳಿಸಿದ್ದಾರೆ ಎನ್ನಲಾಗಿದೆ.