ನವದೆಹಲಿ : ಕೆನಡಾದ ಸರ್ರೆಯಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಅವರ ರೆಸ್ಟೋರೆಂಟ್ ಮೇಲೆ ಕಳೆದ ನಾಲ್ಕು ತಿಂಗಳಲ್ಲಿ ಮೂರನೇ ಬಾರಿಗೆ ಗುಂಡಿನ ದಾಳಿ ನಡೆದಿದ್ದು, ಮಾಬ್ ಬಾಸ್ ಲಾರೆನ್ಸ್ ಬಿಷ್ಣೋಯ್ ಕಾರ್ಯಾಚರಣೆಯ ಭಾಗವಾಗಿರುವ ದರೋಡೆಕೋರರಾದ ಗೋಲ್ಡಿ ಧಿಲ್ಲೋನ್ ಮತ್ತು ಕುಲದೀಪ್ ಸಿಧು ಸಾಮಾಜಿಕ ಮಾಧ್ಯಮದಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
ದಾಳಿಯ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ವಾಹನದ ಒಳಗಿನಿಂದ ಚಿತ್ರೀಕರಿಸಲಾದ ಅಲುಗಾಡುವ ಕ್ಲಿಪ್’ನಲ್ಲಿ ಒಬ್ಬ ವ್ಯಕ್ತಿ ತನ್ನ ತೋಳನ್ನ ಕಿಟಕಿಯಿಂದ ಹೊರಗೆ ಚಾಚಿ ಹ್ಯಾಂಡ್ಗನ್ನಿಂದ ಹಲವಾರು ಗುಂಡು ಹಾರಿಸುತ್ತಿರುವುದನ್ನು ತೋರಿಸಲಾಗಿದೆ. ಕನಿಷ್ಠ 6ಕ್ಕೂ ಹೆಚ್ಚು ಜನರು ಗುಂಡು ಹಾರಿಸಿದ್ದಾರೆ
ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಡು “ಸಾರ್ವಜನಿಕರಿಗೆ” ದೂರವಿರಲು ಎಚ್ಚರಿಕೆ ನೀಡಿ – ಧಿಲ್ಲೋನ್ ಮತ್ತು ಸಿಧು ಪೋಸ್ಟ್ ಹಾಕಲಾಗಿದೆ. “ನಾನು, ಕುಲದೀಪ್ ಸಿಧು ಮತ್ತು ಗೋಲ್ಡಿ ಧಿಲ್ಲೋನ್ (ಕಾಪ್ಸ್ ಕೆಫೆಯಲ್ಲಿ) ನಡೆದ ಮೂರು ಗುಂಡಿನ ದಾಳಿಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ನಮಗೆ ಸಾರ್ವಜನಿಕರೊಂದಿಗೆ ಯಾವುದೇ ದ್ವೇಷವಿಲ್ಲ” ಎಂದಿದೆ.
“ನಮಗೆ ವಿವಾದವಿರುವವರು ನಮ್ಮಿಂದ ದೂರವಿರಬೇಕು. ಕಾನೂನುಬಾಹಿರ (ಅಸ್ಪಷ್ಟ) ಕೆಲಸದಲ್ಲಿ ತೊಡಗಿರುವವರು ಮತ್ತು ಜನರಿಗೆ ಹಣ ನೀಡದವರು ಸಹ ಸಿದ್ಧರಾಗಿರಬೇಕು” ಎಂದು ಎಚ್ಚರಿಸಲಾಗಿದೆ.
BREAKING ; ಬಿಹಾರ ಚುನಾವಣೆಗೆ ಬಿಜೆಪಿ ‘ಸ್ಟಾರ್ ಪ್ರಚಾರಕರ’ ಪಟ್ಟಿ ಬಿಡುಗಡೆ
ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಬ್ಲ್ಯಾಕ್ಮೇಲ್: MLC ಛಲವಾದಿ ನಾರಾಯಣಸ್ವಾಮಿ