Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತಕ್ಕೆ ಆ.15ರಂದು ‘ಸ್ವಾತಂತ್ರ್ಯ’ ಸಿಕ್ಕಿದ್ದು ಹೇಗೆ.? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

13/08/2025 1:03 PM

BIG NEWS : ರಾಜ್ಯದಲ್ಲಿ ಇನ್ಮುಂದೆ ಮಹಿಳೆಯರ ರಕ್ಷಣೆಗೆ ಬರಲಿದೆ “ಅಕ್ಕ ಪಡೆ” : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

13/08/2025 12:48 PM

ದೇಶಭಕ್ತಿಯ ರೋಮಾಂಚನಕ್ಕೆ ಸಾಕ್ಷಿಯಾಗಲಿದೆ ವಂದೇ ಮಾತರಮ್‌

13/08/2025 12:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೆಂಗಳೂರಿನಲ್ಲಿ `79ನೇ ಸ್ವಾತಂತ್ರ್ಯ ದಿನಾಚರಣೆಗೆ’ ಸಕಲ ಸಿದ್ಧತೆ : ಮೊದಲ ಬಾರಿ `ಇ-ಪಾಸ್’ ವ್ಯವಸ್ಥೆ.!
KARNATAKA

BREAKING: ಬೆಂಗಳೂರಿನಲ್ಲಿ `79ನೇ ಸ್ವಾತಂತ್ರ್ಯ ದಿನಾಚರಣೆಗೆ’ ಸಕಲ ಸಿದ್ಧತೆ : ಮೊದಲ ಬಾರಿ `ಇ-ಪಾಸ್’ ವ್ಯವಸ್ಥೆ.!

By kannadanewsnow5713/08/2025 12:36 PM

ಬೆಂಗಳೂರು : 79ನೇ ಸ್ವಾತಂತ್ರ್ಯ ದಿನಾಚರಣೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ದಿನಾಂಕ:15-08-2025 ರಂದು ರಾಜ್ಯ ಮಟ್ಟದ 79ನೇ ಸ್ವಾತಂತ್ರೋತ್ಸವದ ಆಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಕಾರ್ಯಕ್ರಮ ಸುಲಲಿತವಾಗಿ ನಡೆಯಲು ಹಾಗೂ ಮೈದಾನದ ಭದ್ರತೆಯ ಸಲುವಾಗಿ ಮುಂಜಾಗೃತ ಕ್ರಮಗಳಾಗಿ ಕಳೆದ 15 ದಿನಗಳಿಂದ ಮೈದಾನಕ್ಕೆ ಪೊಲೀಸರನ್ನು ಕಣ್ಣಾವಲು ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ. ಹಾಗೂ ಬೆಂಗಳೂರು ನಗರದ ಎಲ್ಲಾ ಹೋಟೆಲ್, ಲಾಡ್ಜ್‌ಗಳು, ತಂಗುದಾಣಗಳು. ಇನ್ನಿತರೆ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡುವವರ ಮೇಲೆ ಸೂಕ್ತ ನಿಗಾವಹಿಸಲಾಗಿರುತ್ತದೆ.

ದಿನಾಂಕ:15-08-2025 ರಂದು ನಡೆಯುವ ಧ್ವಜಾರೋಹಣ, ಕವಾಯತು ಹಾಗೂ ಸಾಂಸ್ಕೃತಿಕ ಸಮಾರಂಭದ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೆರವೇರಿಸಲಿದ್ದು, ಈ ಸಂಬಂಧ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿರ್ವಹಣೆಗಾಗಿ ವಿಸ್ತ್ರತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

ಮೈದಾನದ ಸುತ್ತ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ನಿಗಾವಹಿಸಲು ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಮತ್ತು ಬ್ಯಾಗೇಜ್ ಸ್ಕ್ಯಾನರ್, ಡಿಎಫ್‌ಎಂಡಿ ಮತ್ತು ಹೆಚ್.ಹೆಚ್.ಎಂ.ಡಿ.ಗಳನ್ನು ಅಳವಡಿಸಲಾಗಿರುತ್ತದೆ.

ಸ್ವಾತಂತ್ರೋತ್ಸವದ ಆಚರಣೆ ಸಂಬಂಧ ಕಾರ್ಯಕ್ರಮಕ್ಕೆ ಆಗಮಿಸುವವರ ಭದ್ರತೆಯ ದೃಷ್ಟಿಯಿಂದ ಆಹ್ವಾನಿತರುಗಳಿಗೆ ಪಾಸ್‌ಗಳನ್ನು ವಿತರಿಸಲಾಗಿದ್ದು, ಡಾರ್ಕ್ ಪಿಂಕ್ ಬಣ್ಣದ ವಿವಿಐಪಿ ಪಾಸ್ ಹೊಂದಿರುವವರು ಗೇಟ್ ನಂ.02 ರಲ್ಲಿ ಕ್ರ.ಸಂ 1 ರಿಂದ 500 ವರೆಗಿನ ಗಣ್ಯರು/ಅಧಿಕಾರಿಗಳು ಬ್ಲಾಕ್ 01 ರಲ್ಲಿ ಪ್ರವೇಶಿಸಿ, ಸಂಬಂಧಪಟ್ಟ ಗಣ್ಯರು/ಹಿರಿಯ ಅಧಿಕಾರಿಗಳ ಹೆಸರುಗಳನ್ನು ಸೂಚಿಸಿರುವ ಆಸನಗಳನ್ನು ಬಿಟ್ಟು ಇತರೆ ಆಸನಗಳಲ್ಲಿ ಆಸಿನರಾಗುವುದು.

ಲೈಟ್ ಪಿಂಕ್ ಬಣ್ಣದ ಕ್ರ.ಸಂ. 501 ರಿಂದ 2500 ವರೆಗಿನ ವಿವಿಐಪಿ ಪಾಸ್ ಹೊಂದಿರುವ ಗಣ್ಯರು/ಅಧಿಕಾರಿಗಳು ಗೇಟ್ ನಂ 02 ರಲ್ಲೇ ಪ್ರವೇಶಿಸಿ, ಬ್ಲಾಕ್ 02 ಮತ್ತು 03 ರಲ್ಲಿ ಆಸಿನರಾಗುವುದು.

ಗೇಟ್ ನಂ.04 ರಲ್ಲಿ ಬಿಳಿ ಬಣ್ಣದ ಪಾಸ್ ಹೊಂದಿರುವವರಿಗೆ ಪ್ರವೇಶವಿದ್ದು, ಸದರಿಯವರು ಬ್ಲಾಕ್ 04, 05 ಮತ್ತು 06 ರಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತದೆ.

ಗೇಟ್ ನಂ 04 ರ ಮೂಲಕ ಮಾಧ್ಯಮದವರಿಗೆ ಪ್ರವೇಶ ಕಲ್ಪಿಸಲಾಗಿದ್ದು, ಎಲೆಕ್ಟ್ರಾನಿಕ್ ಮಾದ್ಯಮದವರು ಮೀಡಿಯಾ ಬಾಕ್ಸ್‌ಗೆ ತೆರಳುವುದು ಮತ್ತು ಪ್ರಿಂಟ್ ಮಾಧ್ಯಮದವರು ಬ್ಲಾಕ್ ನಂ.4 ರಲ್ಲಿ ಮಾದ್ಯಮದವರಿಗೆ ಕಾಯ್ದಿರಿಸಿರುವ ಸ್ಥಳದಲ್ಲಿ ಕುಳಿತುಕೊಳ್ಳುವುದು. ಗೇಟ್ ನಂ 04 ರಲ್ಲಿ ಮಾಧ್ಯಮದ ಓ.ವಿ. ವಾಹನಗಳ ಪ್ರವೇಶಕ್ಕೆ ಅವಕಾಶವಿರುತ್ತದೆ.

ಗೇಟ್ ನಂ 05 ರಲ್ಲಿ ಹಸಿರು ಬಣ್ಣದ ಪಾಸ್ ಹೊಂದಿರುವ ಸಾರ್ವಜನಿಕರಿಗೆ ಪ್ರವೇಶವಿದ್ದು, ಇವರುಗಳು ಬ್ಲಾಕ್ ನಂ 07, 08, 09 ರಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತದೆ. ಮತ್ತು ಇ-ಪಾಸ್ ಹೊಂದಿರುವ ಸಾರ್ವಜನಿಕರು ಅಸಲು ಗುರುತಿನ ಚೀಟಿಯೊಂದಿಗೆ ಗೇಟ್ ನಂ. 05ರಲ್ಲಿ ಪ್ರವೇಶಿಸಿ, ಬ್ಲಾಕ್ ನಂ.07. 08, 09 ರಲ್ಲಿ ಕುಳಿತುಕೊಳ್ಳುವುದು. ಕಾರ್ಯಕ್ರಮದ ಭದ್ರತಾ ದೃಷ್ಟಿಯಿಂದ ಗೇಟ್‌ಗಳ ಬಳಿ ತಪಾಸಣೆಗೆ ಒಳಪಟ್ಟು ಪೊಲೀಸರೊಂದಿಗೆ ಸಹಕರಿಸುವಂತೆ ಕೋರಲಾಗಿದೆ.

ಕಾರ್ಯಕ್ರಮಕ್ಕೆ ಆಗಮಿಸುವವರಲ್ಲಿ ಮನವಿ

1. ಸಮಾರಂಭಕ್ಕೆ ಆಗಮಿಸುವವರು ಬೆಳಿಗ್ಗೆ 08-30 ರ ಒಳಗಾಗಿ ತಮ್ಮ ಆಸನಗಳಲ್ಲಿ ಆಸೀನರಾಗತಕ್ಕದ್ದು. ಯಾವುದೇ ಕಾರಣಕ್ಕೂ ಮೈದಾನದದೊಳಗೆ ಪ್ರವೇಶಿಸತಕ್ಕದ್ದಲ್ಲ.

2. ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರು, ಹಸಿರು ಬಣ್ಣದ ಪಾಸ್ (ಇ-ಪಾಸ್) ಹೊಂದಿರುವವರು ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್‌ರಸ್ತೆ ಮೂಲಕ ಗೇಟ್ ನಂ.05 ರಲ್ಲಿ ಆಗಮಿಸಲು ಸೂಚಿಸಲಾಗಿದೆ.

3. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು ತಮ್ಮೊಂದಿಗೆ ಅನಗತ್ಯವಾದ ಲಗೇಜು ಹಾಗೂ ಇತರೆ ವಸ್ತುಗಳನ್ನು ತರುವಂತಿಲ್ಲ.

4. ಯಾವುದಾದರೂ ಅನುಮಾನಾಸ್ಪದ ವಸ್ತುಗಳು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವುದು.

5. ಭದ್ರತೆಯ ಅಂಗವಾಗಿ ಮೈದಾನಕ್ಕೆ ಆಗಮಿಸುವವರು ಗೇಟ್‌ಗಳ ಬಳಿ ತಪಾಸಣೆಗೆ ಪೊಲೀಸರೊಂದಿಗೆ ಸಹಕರಿಸುವಂತೆ ಕೋರಲಾಗಿದೆ. ಹಾಗೂ ಈ ಕೆಳಕಂಡ ವಸ್ತುಗಳನ್ನು ಮೈದಾನದೊಳಗೆ ನಿಷೇಧಿಸಲಾಗಿದೆ.

BREAKING: All ready for `79th Independence Day' in Bangalore: First time `E-Pass' system.!
Share. Facebook Twitter LinkedIn WhatsApp Email

Related Posts

ಭಾರತಕ್ಕೆ ಆ.15ರಂದು ‘ಸ್ವಾತಂತ್ರ್ಯ’ ಸಿಕ್ಕಿದ್ದು ಹೇಗೆ.? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

13/08/2025 1:03 PM3 Mins Read

BIG NEWS : ರಾಜ್ಯದಲ್ಲಿ ಇನ್ಮುಂದೆ ಮಹಿಳೆಯರ ರಕ್ಷಣೆಗೆ ಬರಲಿದೆ “ಅಕ್ಕ ಪಡೆ” : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

13/08/2025 12:48 PM2 Mins Read

ದೇಶಭಕ್ತಿಯ ರೋಮಾಂಚನಕ್ಕೆ ಸಾಕ್ಷಿಯಾಗಲಿದೆ ವಂದೇ ಮಾತರಮ್‌

13/08/2025 12:47 PM1 Min Read
Recent News

ಭಾರತಕ್ಕೆ ಆ.15ರಂದು ‘ಸ್ವಾತಂತ್ರ್ಯ’ ಸಿಕ್ಕಿದ್ದು ಹೇಗೆ.? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

13/08/2025 1:03 PM

BIG NEWS : ರಾಜ್ಯದಲ್ಲಿ ಇನ್ಮುಂದೆ ಮಹಿಳೆಯರ ರಕ್ಷಣೆಗೆ ಬರಲಿದೆ “ಅಕ್ಕ ಪಡೆ” : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

13/08/2025 12:48 PM

ದೇಶಭಕ್ತಿಯ ರೋಮಾಂಚನಕ್ಕೆ ಸಾಕ್ಷಿಯಾಗಲಿದೆ ವಂದೇ ಮಾತರಮ್‌

13/08/2025 12:47 PM

‘ಬಾಲ್ಯವಿವಾಹ’ ತಡೆಗಟ್ಟಲು ಸರ್ಕಾರಿದಂದ ಕಠಿಣ ಕ್ರಮ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

13/08/2025 12:45 PM
State News
KARNATAKA

ಭಾರತಕ್ಕೆ ಆ.15ರಂದು ‘ಸ್ವಾತಂತ್ರ್ಯ’ ಸಿಕ್ಕಿದ್ದು ಹೇಗೆ.? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

By kannadanewsnow5713/08/2025 1:03 PM KARNATAKA 3 Mins Read

ನವದೆಹಲಿ: ಆಗಸ್ಟ್ 15, 1947 ರಂದು ಭಾರತದ ಸ್ವಾತಂತ್ರ್ಯವು ಒಂದು ಐತಿಹಾಸಿಕ ಕ್ಷಣವಾಗಿತ್ತು, ಆದರೆ ಈ ಸ್ವಾತಂತ್ರ್ಯದ ಹಿಂದೆ ನಡೆದ…

BIG NEWS : ರಾಜ್ಯದಲ್ಲಿ ಇನ್ಮುಂದೆ ಮಹಿಳೆಯರ ರಕ್ಷಣೆಗೆ ಬರಲಿದೆ “ಅಕ್ಕ ಪಡೆ” : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

13/08/2025 12:48 PM

ದೇಶಭಕ್ತಿಯ ರೋಮಾಂಚನಕ್ಕೆ ಸಾಕ್ಷಿಯಾಗಲಿದೆ ವಂದೇ ಮಾತರಮ್‌

13/08/2025 12:47 PM

‘ಬಾಲ್ಯವಿವಾಹ’ ತಡೆಗಟ್ಟಲು ಸರ್ಕಾರಿದಂದ ಕಠಿಣ ಕ್ರಮ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

13/08/2025 12:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.