ವಿಜಯಪುರ : ಇಂದು ವಿಜಯಪುರ ಜಿಲ್ಲೆಯಲ್ಲಿ ಘನ ಘೋರವಾದಂತಹ ಘಟನೆ ನಡೆಯದಿದ್ದು ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಸುಮಾರು 4 ಜನರು ಜಲ ಸಮಾಧಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಕೋಲಾರದ ಸಮೀಪ ಬಳುತಿ ಎಂಬಲ್ಲಿ ನಡೆದಿದೆ.

ಹೌದು ವಿಜಯಪುರ ಜಿಲ್ಲೆಯ ಕೋಲಾರ ಸಮೀಪ ಬಳುತಿ ಎಂಬಲ್ಲಿ ತೆಪ್ಪ ಮಗುಚಿ 4 ಜನರು ಜಲ ಸಮಾಧಿಯಾಗಿದ್ದಾರೆ. ಬಳುತಿ ಜಾಕ್ ವೆಲ್ ಬಳಿಯ ಕೃಷ್ಣಾ ನದಿಯಲ್ಲಿ ಈ ಒಂದು ಘಟನೆ ನಡೆದಿದೆ. ವಿಜಯಪುರದ ಕೋಲಾರ ತಾಲೂಕಿನ ಬೂಳುತಿ ಜಾಕ್ ವೆಲ್ ಬಳಿ ಈ ಒಂದು ಘಟನೆ ನಡೆದಿದೆ.

ನದಿ ದಡದಲ್ಲಿ ಈ ಒಂದು ಗುಂಪು ಇಸ್ಪೀಟ್ ಆಡುತ್ತಿತ್ತು ಎನ್ನಲಾಗಿದೆ. ಪೊಲೀಸರು ಬರುತ್ತಿರುವ ಮಾಹಿತಿಯನ್ನು ಸ್ಥಳೀಯರು ನೀಡುತ್ತಿದ್ದಂತೆ ಹೆದರಿಕೊಂಡು ನದಿಯ ನಡುಗಡ್ಡೇಗೆ ತೆಪ್ಪದಲ್ಲಿ 6 ಜನರು ತೆರಳಿದ್ದಾರೆ. ಈ ವೇಳೆ ಜೋರಾಗಿ ಗಾಳಿ ಬೀಸಿದ್ದರಿಂದ ತೆಪ್ಪ ಮಗುಚಿದೆ. ತಕ್ಷಣ 6 ಜನರು ನೀರು ಪಾಲಾಗಿದ್ದಾರೆ.ಈ ವೇಳೆ ಇಬ್ಬರು ಈಜಿ ದಡ ಸೇರಿದ್ದಾರೆ. ಸದ್ಯ ಇಬ್ಬರ ಶವವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರಗಡೆ ತೆಗೆದಿದ್ದಾರೆ.ಇನ್ನು ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Share.
Exit mobile version