ಬಿಹಾರ : ಬಿಹಾರದಲ್ಲಿ ಭಾರೀ ಮಳೆಯಿಂದಾಗಿ 22 ಜನರು ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ.ಗಳನ್ನು ಪರಿಹಾರ ನೀಡಲಾಗುವುದು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಘೋಷಣೆ ಮಾಡಿದ್ದಾರೆ.
ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಿಂದಾಗಿ ಸಿಡಿಲು ಬಡಿದು 16 ಜನರು ಸಾವನ್ನಪ್ಪಿದ್ದಾರೆ. ಮರಗಳು ಉರುಳಿ ಆರು ಜನರು ಸಾವನ್ನಪ್ಪಿದ್ದಾರೆ. ಜೆಹನಾಬಾದ್ನಲ್ಲಿ ಮೂರು, ಭೋಜ್ಪುರ, ಮುಜಫರ್ಪುರ ಮತ್ತು ಪಶ್ಚಿಮ ಚಂಪಾರಣ್ನಲ್ಲಿ ತಲಾ ಇಬ್ಬರು ಮತ್ತು ಸರನ್, ಗೋಪಾಲ್ಗಂಜ್, ಖಗರಿಯಾ, ಕಿಶನ್ಗಂಜ್ ಮತ್ತು ನಳಂದದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.