ಬೆಂಗಳೂರು : ಇಂದು ರಾಜ್ಯದ ಹಲವಡೆ ಬೆಳ್ಳಂಬೆಳಗ್ಗೆ ಲೋಕಾಯಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿ ಬಸವರಾಜ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಲಕ್ಷಾಂತರ ರೂ. ಹಣ, ಚಿನ್ನಭರಣ ಹಾಗೂ ಹುಲಿ ಉಗುರುಗಳು ಪತ್ತೆಯಾಗಿವೆ.
ಇಂದು ರಾಜ್ಯದ ಹಲವಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ಅಧಿಕಾರಿಗಳ ಮನೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಬೆಂಗಳೂರಿನ ಬಿಬಿಎಂಪಿ ಅಧಿಕಾರಿಯಾಗಿರುವವ ಬಸವರಾಜ ಮಾಗಿ ನಿವಾಸದಲ್ಲೂ ದಾಖಲೆಗಳ ಪರಿಶೀಲನೆ ನಡೆಸಲಾಗಿದ್ದು, ಕಂತೆ ಕಂತೆ ಹಣ, ಭಾರಿ ಚಿನ್ನಾಭರಣಗಳು, 2 ಹುಲಿ ಉಗುರು ಪತ್ತೆಯಾಗಿದೆ. ಜೊತೆಗೆ ತಲ್ವಾರ್, ಡ್ರ್ಯಾಗರ್ ಕೂಡ ಪತ್ತೆಯಾಗಿದೆ.ಅಲ್ಲದೇ 12.50 ಲಕ್ಷದ ಕ್ಯಾಸಿನೋ ಕಾಯಿನ್ಸ್ ಗಳು ಕೂಡ ಪತ್ತೆಯಾಗಿದೆ.