ಚಿಕ್ಕಮಗಳೂರು : ಟ್ರಕ್ಕಿಂಗ್ ಗೆ ತೆರಳಿ ಕಾಡಿನಲ್ಲಿ ಚಿತ್ರದುರ್ಗ ಮೂಲದ 10 ಚಾರಣಿಗರು ದಾರಿ ತಪ್ಪಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರಿನ ಬಲ್ಲಾಳ ರಾಯನ ದುರ್ಗ ಕಾಡಿಗೆ ಚಾರಣೆಗೆ ಹೋಗಿದ್ದ ಚಿತ್ರದುರ್ಗ ಮೆಡಿಕಲ್ ಕಾಲೇಜಿನ 10 ವಿದ್ಯಾರ್ಥಿಗಳು ಕಾಡಿನಲ್ಲಿ ಬೆಳಗ್ಗೆಯಿಂದ ದಾರಿ ತಪ್ಪಿದ್ದರು. ಸ್ಥಳೀಯರು ಅವರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.
ಚಿತ್ರದುರ್ಗದ ಮೆಡಿಕಲ್ ಕಾಲೇಜಿನ 10 ವಿದ್ಯಾರ್ಥಿಗಳು ಬೆಳ್ತಂಗಡಿ ಮಾರ್ಗವಾಗಿ ಟ್ರಕ್ಕಿಂಗ್ ಆರಂಭಿಸಿದ್ದರು. ಮಾರ್ಗ ತಿಳಿಯದೇ ಬೆಳಗ್ಗೆಯಿಂದ ಕಾಡಿನಲ್ಲೇ ಸುತ್ತಾಡುತ್ತಿದ್ದರು. ಸ್ಥಳೀಯರು ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತಂದಿದ್ದಾರೆ.