ಬೆಂಗಳೂರು; ಬೊಮ್ಮಾಯಿಯವರೆ, ‘ನೀನ್ಯಾರು ಎಂದು ಹೇಳಬೇಡ, ನಿನ್ನ ಸ್ನೇಹಿತರು ಯಾರು ಎಂದು ಹೇಳು. ಆಗ ನೀನ್ಯಾರು ಎಂದು ತಿಳಿಯುತ್ತದೆ’ ಎಂಬುದು ಹಿರಿಯರ ಅನುಭವದ ಮಾತು. ನಿಮ್ಮ ಪಕ್ಷದವರ ಸ್ನೇಹ ಸಂಬಂಧ ರೌಡಿಗಳು,ಕೊಲೆಗಡಕರು ಮತ್ತು ರೇಪಿಸ್ಟ್‌ಗಳ ಜೊತೆ. ಇಷ್ಟು ಸಾಕಲ್ಲವೇ ನಿಮ್ಮ ಪಕ್ಷದ ಯೋಗ್ಯತೆ, ಸಂಸ್ಕಾರ ಮತ್ತು ಸಂಸ್ಕೃತಿ ಏನು ಎಂದು ಅರಿಯಲು? ಎಂಬುದಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ಕುಖ್ಯಾತ ಮತ್ತು ವಾಂಟೆಡ್ ರೌಡಿಗಳ ಜೊತೆ BJP ನಾಯಕರು ವೇದಿಕೆ ಹಂಚಿಕೊಂಡಿದ್ದಾರೆ. ಯಾವ ರೌಡಿಯನ್ನು ಹಿಡಿಯಲು ಪೊಲೀಸರು ಹೆಣಗಾಡುತ್ತಿದ್ದಾರೋ, ಅದೇ ರೌಡಿಯ ಹೆಗಲ ಮೇಲೆ BJPಯ ಸಚಿವರು,MPಗಳು,MLAಗಳು ಕೈಹಾಕಿ ನಿಂತರೆ. ಅವನನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವೇ? ಎಂದು ಕೇಳಿದೆ.

ಬೊಮ್ಮಾಯಿಯವರೆ,ನಿಮ್ಮ ಪಕ್ಷದ ನಾಯಕರು ‘ಸೈಲೆಂಟ್’ ಆಗಿ ರೌಡಿಗಳ ಜೊತೆ ಕೈ ಜೋಡಿಸಿದರೆ,ಪೊಲೀಸರು ನಿಸ್ಸಹಾಯಕರಾಗಿ ‘ಸೈಲೆಂಟ್’ ಆಗುವುದಿಲ್ಲವೆ? ನೀವು ‘ಸೈಲೆಂಟ್’ ಆಗಿ ರೌಡಿಗಳ ಜೊತೆ ಶಾಮೀಲಾದರೆ, ನಮ್ಮ ಪೊಲೀಸರು ‘ಫೈಟರ್’ಗಳಾಗಲು ಸಾಧ್ಯವೇ? ರಾಮ ರಾಜ್ಯ ಮಾಡುತ್ತೀವಿ ಎಂದು ರೌಡಿ ರಾಜ್ಯ ಮಾಡಲು ಹೊರಟಿರುವ ನಿಮಗೆ ಏನು ಹೇಳಲು ಸಾಧ್ಯ ಸ್ವಾಮಿ? ಎಂದು ಪ್ರಶ್ನಿಸಿದ್ದಾರೆ.

Share.
Exit mobile version