ಬೆಂಗಳೂರು: ಅಹಿಂದ ವರ್ಗಗಳ ಮತಗಳನ್ನು ಹಾಗೂ ಎಲ್ಲಾ ವರ್ಗದ ಜನರನ್ನು ಸೆಳೆಯಬಲ್ಲಂತಹ ವ್ಯಕ್ತಿತ್ವ. ನಮ್ಮ ನಡುವಿನ ಜನಪ್ರಿಯ ನಾಯಕ ಸಿದ್ದರಾಮಯ್ಯನವರು. ಇವರ ತೇಜೋವಧೆ ಮಾಡುವ ಕೆಲಸಕ್ಕೆ ಬಿಜೆಪಿ ಇಳಿದಿದೆ, ಇದು ಖಂಡನೀಯ ಎಂಬುದಾಗಿ ರಾಜ್ಯಸಭಾ ಮಾಜಿ ಸದಸ್ಯರಾದ ಎಲ್ ಹನುಮಂತಯ್ಯ ಹೇಳಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಇಡೀ ದೇಶದ ಅಹಿಂದ ವರ್ಗದ ನಾಯಕರಲ್ಲಿ ಭ್ರಷ್ಟಾತೀತ ನಾಯಕರು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಮಾತ್ರ. ಎಲ್ಲಾ ಪಕ್ಷದ ನಾಯಕರನ್ನು ಮುಂದೆ ಕೂರಿಸಿಕೊಂಡು ಈ ಮಾತನ್ನು ಧೈರ್ಯವಾಗಿ ಹೇಳಬಲ್ಲೆ ಎಂದರು.
ಜನನಾಯಕರಾದ, ಜನರ ಅತ್ಯಂತ ವಿಶ್ವಾಸ ಗಳಿಸಿರುವ ನಾಯಕರನ್ನು ಗುರಿ ಮಾಡಿ ಅವರ ಜನಪ್ರಿಯತೆ ಕುಗ್ಗಿಸುವ ಕೆಲಸ ಬಿಜೆಪಿ ಮೊದಲಿನಿಂದಲೂ ಮಾಡುತ್ತಿದೆ. ಇದು ಕೇವಲ ಸಿದ್ದರಾಮಯ್ಯನವರ ಮೇಲೆ ಮಾತ್ರ ಮಾಡುತ್ತಿಲ್ಲ ವಿರೋಧ ಪಕ್ಷದಲ್ಲಿರುವ ಎಲ್ಲಾ ನಾಯಕರನ್ನು ಗುರಿಯಾಗಿಸಿಕೊಂಡು ಈ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಲಿಕ್ಕರ್ ಕೇಸಿನಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದೆ ಬಿಜೆಪಿ. ಜಾರ್ಖಂಡಿನ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಸಹ ಇದೇ ರೀತಿ ಜೈಲಿಗೆ ಕಳಿಸಲಾಗಿತ್ತು. ಈ ರೀತಿಯ ಕೃತಕ ಕೆಲಸವನ್ನು ಬಿಜೆಪಿ ಮಾಡುತ್ತದೆ ಆದ ಕಾರಣಕ್ಕೆ ಲೋಕಸಭೆಯಲ್ಲಿ ನಮ್ಮ ಜನರು ಸರಿಯಾದ ಬುದ್ಧಿ ಕಲಿಸಿದ್ದಾರೆ. ಆದರೂ ಅವರಿಗೆ ಇನ್ನೂ ಬುದ್ಧಿ ಬಂದಂತಿಲ್ಲ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಸಿದ್ದರಾಮಯ್ಯನವರ ಮೇಲೆ ಮೂಡ ಭೂ ಹಗರಣವನ್ನು ಬೇಕಂತಲೇ ಹೊರಿಸುತ್ತಿದ್ದಾರೆ. ಕಾನೂನಿನ ಅರಿವಿಲ್ಲದೆ ಪಿ ಟಿ ಸಿ ಎಲ್ ಕಾಯ್ದೆ ಅಡಿ ಆ ಭೂಮಿ ಬರುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ. 1936ರಲ್ಲಿ ಹರಾಜಿನಲಿ ಆ ಭೂಮಿಯನ್ನು ಮೂಲ ಮಾಲೀಕರು ಪಡೆದಿರುವ ಕಾರಣ ಪಿ ಟಿ ಸಿ ಎಲ್ ಕಾಯ್ದೆಯ ಅಡಿ ಇದು ಬರುವುದಿಲ್ಲ ಎಂದು ಹೇಳಿದರು.
ಪಿ ಟಿ ಸಿ ಎಲ್ ಕಾಯ್ದೆಯ ಅಡಿ ಇದು ಬರುತ್ತದೆ ಎಂದು ನಿರ್ಲಜ್ಜವಾಗಿ ಬಿಜೆಪಿ ಸುಳ್ಳು ಹೇಳುತ್ತಿದೆ. ರಾಜ್ಯಪಾಲರೂ ಸಹ ನಿರ್ಲಜ್ಜವಾಗಿ ನಡೆದುಕೊಂಡಿದ್ದಾರೆ. ಬಿಜೆಪಿಯ ನಿರ್ಲಜ್ಜ ರಾಜಕಾರಣಕ್ಕೆ ನಾವು ಹೆದರುವುದಿಲ್ಲ ಎಂಬುದಾಗಿ ಗುಡುಗಿದರು.
BREAKING: ಬೆಂಗಳೂರಲ್ಲಿ ನಟೋರಿಯಸ್ ರೌಡಿ ಶೀಟರ್ ಕಾಲಿಗೆ ಪೊಲೀಸರ ಗುಂಡೇಟು, ಅರೆಸ್ಟ್ | Police Firing
ವೀರಶೈವ, ಲಿಂಗಾಯತ ಸಮುದಾಯದವರಿಗೆ ಗುಡ್ ನ್ಯೂಸ್: ಈ ಯೋಜನೆಗಳಿಗೆ ಅರ್ಜಿ ಆಹ್ವಾನ