Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

06/04/2026 7:08 PM

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

06/04/2026 7:05 PM

ಕೆಲವರು ಸದಾ ಹಣ ಉಳಿಸುತ್ತಾರೆ, ಇನ್ನು ಕೆಲವರು ಪ್ರತಿ ತಿಂಗಳೂ ಪರದಾಡುತ್ತಾರೆ! ಯಾಕೀ ವ್ಯತ್ಯಾಸ? ಇಲ್ಲಿದೆ ಹಣಕಾಸು ತಜ್ಞರ ವಿಶ್ಲೇಷಣೆ

06/04/2026 7:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ
KARNATAKA

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

By kannadanewsnow0906/04/2026 7:05 PM

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಜನಸಾಮಾನ್ಯರನ್ನು ಬೆಲೆ ಏರಿಕೆಯ ಸುಳಿಗೆ ತಳ್ಳಿದೆ ಹಾಗೂ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ನೀಡದೆ ‘ಬಾಕಿ ಸರ್ಕಾರ’ವಾಗಿ ಮಾರ್ಪಟ್ಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿB ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತೆ ಅವರು ಕರೆ ನೀಡಿದ್ದಾರೆ.

ಬೆಲೆ ಏರಿಕೆಯಿಂದ ಜನಜೀವನ ಅಸ್ತವ್ಯಸ್ತ

ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, “2014ರಲ್ಲಿ 400 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಇಂದು 950 ರೂಪಾಯಿ ದಾಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಇದರಿಂದ ಹೋಟೆಲ್ ಉದ್ಯಮ ಮತ್ತು ಆಟೋ ಚಾಲಕರು ಬೀದಿಗೆ ಬೀಳುವಂತಾಗಿದೆ. ಈ ಬೆಲೆ ಏರಿಕೆಯಿಂದ ಬಿಜೆಪಿ ಕಾರ್ಯಕರ್ತರು ಕೂಡ ಬಸವಳಿದಿದ್ದಾರೆ. ಹೀಗಾಗಿ, ಜನವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿಗೆ ಅವರದ್ದೇ ಪಕ್ಷದ ಕಾರ್ಯಕರ್ತರು ಉಪಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಬೇಕು” ಎಂದು ಆಗ್ರಹಿಸಿದರು.

ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಕೊಡಿಸಿ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಭಂಡಾರಿ, “ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಜೋಶಿ ಅವರು ಮೊದಲು ಪ್ರಧಾನಿ ಮೋದಿಯವರ ಜೊತೆ ಮಾತನಾಡಿ ಕರ್ನಾಟಕಕ್ಕೆ ಬರಬೇಕಾದ ₹1.25 ಲಕ್ಷ ಕೋಟಿ ತೆರಿಗೆ ಪಾಲನ್ನು ಕೊಡಿಸಲಿ. 15ನೇ ಹಣಕಾಸು ಆಯೋಗದ ಅನುದಾನ, ಜಲಜೀವನ್ ಮಿಷನ್ ಹಾಗೂ ಮಹಾದಾಯಿ ಯೋಜನೆಯ ಬಾಕಿ ಹಣವನ್ನು ತರುವ ಕೆಲಸವನ್ನು ಅವರು ಮಾಡಲಿ” ಎಂದು ಸವಾಲು ಹಾಕಿದರು.

ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅಪಾರ

ದಾವಣಗೆರೆ ಅಭಿವೃದ್ಧಿಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪಾತ್ರ ಹಿರಿದು. ದಾವಣಗೆರೆಯನ್ನು ‘ವಿದ್ಯಾನಗರಿ’ಯನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಶಿವಶಂಕರಪ್ಪ ಅವರ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಕೂಡ ಸಾಥ್ ನೀಡಬೇಕು ಎಂದು ಅವರು ಮನವಿ ಮಾಡಿದರು.

ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ

“ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ದೇಶಕ್ಕೆ ಮಾದರಿಯಾಗಿದೆ. ಕಾಂಗ್ರೆಸ್ ಜನಸಾಮಾನ್ಯರ ಹಿತ ಕಾಯುವ ಪಕ್ಷವಾದರೆ, ಬಿಜೆಪಿ ಕೇವಲ ಅಂಬಾನಿ, ಅದಾನಿಯಂತಹ ಕಾರ್ಪೊರೇಟ್ ಕಂಪನಿಗಳ ಪರ ಕೆಲಸ ಮಾಡುತ್ತಿದೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಜೋಶಿ ಅವರಿಗೆ ಯಡಿಯೂರಪ್ಪ ಕುಟುಂಬ ಹಾಗೂ ಜೆಡಿಎಸ್ ಕುಟುಂಬ ರಾಜಕಾರಣ ಕಾಣಿಸುತ್ತಿಲ್ಲವೇ?” ಎಂದು ಪ್ರಶ್ನಿಸಿದ ಅವರು, ಬಿಜೆಪಿಗೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

“ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ, ಜನವರಿ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಲಿದೆ” ಎಂದು ಮಂಜುನಾಥ್ ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದರು.

Share. Facebook Twitter LinkedIn WhatsApp Email

Related Posts

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

06/04/2026 7:08 PM1 Min Read

ಭಾರತದ ಮೊದಲ ‘ಸೆಲ್ಫಿ ಮಿರರ್’ ಫೋನ್ ರಿಯಲ್‌ಮಿ 16 5G ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

06/04/2026 5:50 PM2 Mins Read

ಶಿವಮೊಗ್ಗದಲ್ಲಿ ಆರೋಗ್ಯ ಕ್ರಾಂತಿ: ‘ರಾಯಲ್ ಫಿಟ್‌ನೆಸ್ ಸ್ಟುಡಿಯೋ’ ಮೂಲಕ ನಿಮ್ಮ ಫಿಟ್‌ನೆಸ್ ಕನಸು ನನಸು!

06/04/2026 5:44 PM1 Min Read
Recent News

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

06/04/2026 7:08 PM

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

06/04/2026 7:05 PM

ಕೆಲವರು ಸದಾ ಹಣ ಉಳಿಸುತ್ತಾರೆ, ಇನ್ನು ಕೆಲವರು ಪ್ರತಿ ತಿಂಗಳೂ ಪರದಾಡುತ್ತಾರೆ! ಯಾಕೀ ವ್ಯತ್ಯಾಸ? ಇಲ್ಲಿದೆ ಹಣಕಾಸು ತಜ್ಞರ ವಿಶ್ಲೇಷಣೆ

06/04/2026 7:00 PM

ಐಟಿಆರ್ ಸಲ್ಲಿಸುವವರಿಗೆ ಮುಖ್ಯ ಮಾಹಿತಿ: ಈ ಹಣಕಾಸು ವರ್ಷದಿಂದ ಆದಾಯ ತೆರಿಗೆ ನಿಯಮಗಳಲ್ಲಿ ಪ್ರಮುಖ ಬದಲಾವಣೆ

06/04/2026 6:51 PM
State News
KARNATAKA

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

By kannadanewsnow0906/04/2026 7:08 PM KARNATAKA 1 Min Read

ಬೆಂಗಳೂರು: ಬೇಸಿಗೆಯ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ಕಲಬುರಗಿ ಮತ್ತು ಬೀದರ್ ನಗರಗಳಿಗೆ ಸಂಚರಿಸುವ…

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

06/04/2026 7:05 PM

ಭಾರತದ ಮೊದಲ ‘ಸೆಲ್ಫಿ ಮಿರರ್’ ಫೋನ್ ರಿಯಲ್‌ಮಿ 16 5G ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

06/04/2026 5:50 PM

ಶಿವಮೊಗ್ಗದಲ್ಲಿ ಆರೋಗ್ಯ ಕ್ರಾಂತಿ: ‘ರಾಯಲ್ ಫಿಟ್‌ನೆಸ್ ಸ್ಟುಡಿಯೋ’ ಮೂಲಕ ನಿಮ್ಮ ಫಿಟ್‌ನೆಸ್ ಕನಸು ನನಸು!

06/04/2026 5:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.