Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ‘ವದಂತಿ ಹಬ್ಬಿಸಬೇಡಿ, ತನಿಖೆ ಪ್ರಗತಿಯಲ್ಲಿದೆ’: ನೌಗಾಮ್ ಸ್ಫೋಟ ‘ಆಕಸ್ಮಿಕ’ ಎಂದ J&K ಡಿಜಿ ನಳಿನ್ ಪ್ರಭಾತ್!

15/11/2025 10:48 AM

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಜಲಪಾತದಲ್ಲಿ ಕಾಲು ಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು!

15/11/2025 10:47 AM

BREAKING : ಸ್ಯಾಂಡಲ್ ವುಡ್ ನಟಿಗೆ ಲೈಂಗಿಕ ಕಿರುಕುಳ ಆರೋಪ : ಉದ್ಯಮಿ ವೆಂಕಟೇಶ್ ರೆಡ್ಡಿ ಅರೆಸ್ಟ್

15/11/2025 10:35 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜೋಗ ಅಭಿವೃದ್ಧಿಗೆ ಬಿಜೆಪಿ ಕೊಟ್ಟಿದ್ದು 20 ಕೋಟಿ, ನಾವು 75 ಕೋಟಿ ಬಿಡುಗಡೆ: MLA ಬೇಳೂರು ಗೋಪಾಲಕೃಷ್ಣ
KARNATAKA

ಜೋಗ ಅಭಿವೃದ್ಧಿಗೆ ಬಿಜೆಪಿ ಕೊಟ್ಟಿದ್ದು 20 ಕೋಟಿ, ನಾವು 75 ಕೋಟಿ ಬಿಡುಗಡೆ: MLA ಬೇಳೂರು ಗೋಪಾಲಕೃಷ್ಣ

By kannadanewsnow0927/11/2024 10:22 PM

ಶಿವಮೊಗ್ಗ: ಜೋಗದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ತ್ವರಿತವಾಗಿ ನಡೆಸೋದಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಸಿಗರು ಜೋಗಕ್ಕೆ ಬಂದ್ರೆ ಇಲ್ಲಿಂದ ಬಿಟ್ಟು ಹೋಗಲೇ ಬಾರದು ಆ ರೀತಿ ಅಭಿವೃದ್ಧಿಗೊಳಿಸುವುದು. ಬಿಜೆಪಿ ಹೇಳುತ್ತಿರುವುದು ಸುಳ್ಳು. ಬಿಜೆಪಿ ಅವಧಿಯಲ್ಲಿ 20 ಕೋಟಿ ಮಾತ್ರವೇ ಜೋಗ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 75 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

ಇಂದು ಜೋಗ ಅಭಿವೃದ್ಧಿ ಪ್ರಾಧಿಕಾರದ ಸಭೆಯನ್ನು ಜೋಗದಲ್ಲಿನ ಕಚೇರಿಯಲ್ಲಿ ನಡೆಸಿದಂತ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಜೋಗದಲ್ಲಿ ನಡೆಯುತ್ತಿರುವಂತ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ ಜೋಗದಲ್ಲಿ ನಡೆಯುತ್ತಿರುವಂತ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಖುದ್ದು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಜೋಗಕ್ಕೆ ಪ್ರವಾಸಿಗರು ಬಂದ್ರೆ ಬಿಟ್ಟೋಗ ಬಾರದು ಹಾಗೆ ಅಭಿವೃದ್ಧಿ

ಜೋಗ ಅಭಿವೃದ್ಧಿಗೆ 185 ಕೋಟಿ ಅನುದಾನ ನೀಡಲಾಗಿದೆ. ಜೋಗದ ಎಲ್ಲಾ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಜನರಿಗೆ ಆಕರ್ಷಣೆ ಇರಬೇಕು. ಜನರು ನಿರಂತರವಾಗಿ ಈ ಜೋಗದ ಜಲಪಾತಕ್ಕೆ ಭೇಟಿ ನೀಡಬೇಕು. ಇಲ್ಲಿನ ಸೌಂದರ್ವಯನ್ನು ಸವಿಯುವಂತಾಗಬೇಕು. ಈಗಾಗಲೇ ಹೋಟೆಲ್, ರೂಮ್ಸ್, ಪಾರ್ಕ್, ಮ್ಯೂಸಿಕಲ್ ಪೌಂಟೇನ್, ಸಾರ್ವಜನಿಕರಿಗೆ ಏನೇನೋ ಬೇಕೋ ಅದೆಲ್ಲವನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಅಲ್ಲದೇ ಗ್ಲಾಸ್ ಹೌಸ್ ಕೂಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಜೋಗ ಸಮೀಪದ ಸಿರೂರು ಕೆರೆಯ ಬಳಿಯಲ್ಲಿ 20 ಎಕರೆ ಜಾಗವಿದೆ. ಅಲ್ಲಿಯೂ ಪ್ರವಾಸಿಗರನ್ನು ಸೆಳೋದಕ್ಕೆ ಏನೇನು ಬೇಕೋ ಅದೆಲ್ಲವನ್ನು ನಿರ್ಮಾಣ ಮಾಡೋ ಸಂಬಂಧ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರೊಂದಿಗೆ ಮಾತನಾಡಲಾಗಿದೆ. ಈಗಾಗಲೇ 95 ಕೋಟಿ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲಾಗಿದೆ. ಬಾಕಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅದರಲ್ಲಿ ಏನೇನು ಮಾಡಬೇಕೋ ಅದರ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.

ಜೋಗದ ಜಲಪಾತ ಎಂಟ್ರಿ ಕೊಟ್ಟ ತಕ್ಷಣ ಪ್ರವಾಸಿಗರನ್ನು ಸೆಳೆಯುವಂತೆ ಇರಬೇಕು. ಅದಕ್ಕಾಗಿ ದ್ವಿಪಥ ರಸ್ತೆಯನ್ನು ನಿರ್ಮಾಣ ಮಾಡುವ ತೀರ್ಮಾವನ್ನು ಕೈಗೊಳ್ಳಲಾಗಿದೆ. ಜಿಪ್ ಲೈನ್ ಕೂಡ ನಿರ್ಮಾಣ ಮಾಡಲಾಗುತ್ತದೆ. ಕೆಲವೊಂದು ಕಾಮಗಾರಿಯನ್ನು ಈ ಭಾಗದ ಜನರಿಗೆ ತೊಂದರೆ ಆಗದಂತೆ ಮಾಡೋದಕ್ಕೂ ತೀರ್ಮಾನ ಕೈಗೊಳ್ಳಲಾಗಿದೆ. ಬೋಡಿಂಗ್ ಮತ್ತಷ್ಟು ಪ್ರವಾಸಿ ಸ್ನೇಹಿಯಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶಕ್ಕೆ ಒತ್ತು

ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಲಾಗುತ್ತದೆ. ನೂರಾರು ಜನರಿಗೆ ಜೋಗ ಅಭಿವೃದ್ಧಿ ಕಾಮಗಾರಿ ಮುಕ್ತಾಯದ ನಂತ್ರ ಉದ್ಯೋಗಾವಕಾಶ ಸಿಗಲಿದೆ. ನಮ್ಮ ಮೊದಲ ಪ್ರಾಮುಖ್ಯತೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವುದಾಗಿದೆ ಎಂದರು.

ಬಿಜೆಪಿ ಅವಧಿಯಲ್ಲಿ 20 ಕೋಟಿ ಮಾತ್ರ ಅನುದಾನ ಬಿಡುಗಡೆ

ಬಿಜೆಪಿ ಅವಧಿಯಲ್ಲಿ ಜೋಗ ಅಭಿವೃದ್ಧಿ ಘೋಷಣೆಯಾಗಿ ಅನುದಾನ ಬಿಡುಗಡೆ ಮಾಡಲಾಗಿತ್ತು ಅಂತ ಹೇಳುತ್ತಿದ್ದಾರೆ. ಇದರ ಬಗ್ಗೆ ಏನು ಹೇಳುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆ, ಸ್ಥಳದಲ್ಲೇ ಇದ್ದಂತ ಗುತ್ತಿಗೆದಾರರನ್ನು ಕರೆದಂತ ಶಾಸಕ ಬೇಳೂರು ಗೋಪಾಲಕೃಷ್ಣ, ಹೇಳಿ ಬಿಜೆಪಿ ಅವಧಿಯಲ್ಲಿ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಷ್ಟು ಬಿಡುಗಡೆ ಮಾಡಲಾಗಿದೆ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದಂತ ಜೋಗ ಕಾಮಗಾರಿ ಗುತ್ತಿಗೆದಾರರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 20 ಕೋಟಿ ಅನುದಾನ ಮಾತ್ರವೇ ಬಿಡುಗಡೆ ಮಾಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಜೋಗ ಅಭಿವೃದ್ಧಿ ಕಾಮಗಾರಿಗಾಗಿ 75 ಕೋಟಿ ಅನುದಾನ ಬಿಡುಗಡೆ ಮಾಡಿರುವುದಾಗಿ ವಾಸ್ತವಾಂಶವನ್ನು ತೆರೆದಿಟ್ಟರು.

ಶಾಲಾ ವಿದ್ಯಾರ್ಥಿಗಳಿಗೆ ರೂ.5 ಟಿಕೆಟ್

ಶಾಲಾ ವಿದ್ಯಾರ್ಥಿಗಳು ಜೋಗದ ಜಲಪಾತವನ್ನು ವೀಕ್ಷಣೆಗೆ ಬಂದ್ರೆ ರಿಯಾಯಿತಿ ದರದ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಶಾಲಾ ದಾಖಲೆ ತೋರಿಸಲಿ ಅಥವಾ ತೋರಿಸದೇ ಇರಲೀ, ಶಾಲಾ ವಿದ್ಯಾರ್ಥಿಗಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಓರ್ವ ವಿದ್ಯಾರ್ಥಿಗಳಿಗೆ ರೂ.5 ಟಿಕೆಟ್ ದರ ನಿಗದಿ ಪಡಿಸಲಾಗಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಾಗರ ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ, ರಾಜಕುಮಾರ್, ಜೋಗ ಕಾರ್ಗಲ್ ಪಟ್ಟಣಪಂಚಾಯ್ತಿ ಅಧ್ಯಕ್ಷ ರಾಜು, ಉಪಾಧ್ಯಕ್ಷರು, ಪಟ್ಟಣ ಪಂಚಾಯ್ತಿ ಸದಸ್ಯರು, ರಮೇಶ್ ಹಿರಿಗೆಗದ್ದೆ, ಕಾರ್ಗಲ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹೊಳೆಬಸಪ್ಪ ಹೋಳಿ, ಪೊಲೀಸ್ ಸಿಬ್ಬಂದಿಗಳಾದಂತ ಸುಕೂರ್, ಮಲ್ಲಪ್ಪ, ಅಣ್ಣಪ್ಪ, ಜೋಗ ಅಭಿವೃದ್ಧಿ ಪ್ರಾಧಿಕಾರದ ಸೆಕ್ಯೂರಿಟಿ ಭಾಸ್ಕರ್, ಮ್ಯಾನೇಜರ್ ಧರ್ಮಪ್ಪ, ಎಸ್ ಎನ್ ಸಿ ಸೈಟ್ ಮ್ಯಾನೇಜರ್ ಸಂದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Share. Facebook Twitter LinkedIn WhatsApp Email

Related Posts

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಜಲಪಾತದಲ್ಲಿ ಕಾಲು ಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು!

15/11/2025 10:47 AM1 Min Read

BREAKING : ಸ್ಯಾಂಡಲ್ ವುಡ್ ನಟಿಗೆ ಲೈಂಗಿಕ ಕಿರುಕುಳ ಆರೋಪ : ಉದ್ಯಮಿ ವೆಂಕಟೇಶ್ ರೆಡ್ಡಿ ಅರೆಸ್ಟ್

15/11/2025 10:35 AM1 Min Read

Vastu Tips : ನೀವು ಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡುವುದು ಅಶುಭ.!

15/11/2025 10:34 AM2 Mins Read
Recent News

BREAKING: ‘ವದಂತಿ ಹಬ್ಬಿಸಬೇಡಿ, ತನಿಖೆ ಪ್ರಗತಿಯಲ್ಲಿದೆ’: ನೌಗಾಮ್ ಸ್ಫೋಟ ‘ಆಕಸ್ಮಿಕ’ ಎಂದ J&K ಡಿಜಿ ನಳಿನ್ ಪ್ರಭಾತ್!

15/11/2025 10:48 AM

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಜಲಪಾತದಲ್ಲಿ ಕಾಲು ಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು!

15/11/2025 10:47 AM

BREAKING : ಸ್ಯಾಂಡಲ್ ವುಡ್ ನಟಿಗೆ ಲೈಂಗಿಕ ಕಿರುಕುಳ ಆರೋಪ : ಉದ್ಯಮಿ ವೆಂಕಟೇಶ್ ರೆಡ್ಡಿ ಅರೆಸ್ಟ್

15/11/2025 10:35 AM

Vastu Tips : ನೀವು ಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡುವುದು ಅಶುಭ.!

15/11/2025 10:34 AM
State News
KARNATAKA

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಜಲಪಾತದಲ್ಲಿ ಕಾಲು ಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು!

By kannadanewsnow0515/11/2025 10:47 AM KARNATAKA 1 Min Read

ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಜಲಪಾತದಲ್ಲಿ ಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು…

BREAKING : ಸ್ಯಾಂಡಲ್ ವುಡ್ ನಟಿಗೆ ಲೈಂಗಿಕ ಕಿರುಕುಳ ಆರೋಪ : ಉದ್ಯಮಿ ವೆಂಕಟೇಶ್ ರೆಡ್ಡಿ ಅರೆಸ್ಟ್

15/11/2025 10:35 AM

Vastu Tips : ನೀವು ಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡುವುದು ಅಶುಭ.!

15/11/2025 10:34 AM
Want to reduce your risk of diabetes and heart disease

ALERT : `ಮಧುಮೇಹ’ದಿಂದ ಹೃದಯಾಘಾತ, ಪಾರ್ಶ್ವವಾಯು ಸೇರಿ ಈ ಗಂಭೀರ ಕಾಯಿಲೆಗಳು ಬರಬಹುದು ಎಚ್ಚರ.!

15/11/2025 10:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.