ನವದೆಹಲಿ: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್), ಆರ್ಎಸ್ಎಸ್ ಸಂಯೋಜಿತ ಕೇಂದ್ರ ಕಾರ್ಮಿಕ ಸಂಘಟನೆ, ಹಳೆಯ ಪಿಂಚಣಿ ಯೋಜನೆಯನ್ನು ಪುನಃಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನವೆಂಬರ್ 21 ರಿಂದ ನವೆಂಬರ್ 29 ರವರೆಗೆ ನಡೆದ ಆರ್ಎಸ್ಎಸ್ ನಾಯಕರೊಂದಿಗೆ ನಡೆಸಿದ ಸಭೆಯಲ್ಲಿ ಈ ಬೇಡಿಕೆಯನ್ನು ಇಡಲಾಗಿದೆ. ಕೇಂದ್ರ ಬಜೆಟ್ ನ ರೂಪುರೇಷೆಗಳನ್ನು ರಚಿಸಲು ಹಣಕಾಸು ಸಚಿವರು ವಿವಿಧ ಸಂಸ್ಥೆಗಳು, ಉದ್ಯಮ ಮಂಡಳಿಗಳು ಮತ್ತು ತಜ್ಞರಿಂದ ಚರ್ಚಿಸಿ ಸಲಹೆಗಳನ್ನು ತೆಗೆದುಕೊಳ್ಳುವ ಅಭ್ಯಾಸದ ಭಾಗವಾಗಿ ಈ ಸಭೆ ನಡೆಯಿತು.

ಸರಣಿ ಸಭೆಗಳಲ್ಲಿ, ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಆರ್ಎಸ್ಎಸ್ಗೆ ಸಂಬಂಧಿಸಿದ ವಿವಿಧ ಸಂಘಟನೆಗಳು ಹಣಕಾಸು ಸಚಿವರಿಗೆ ಹಲವಾರು ಸಲಹೆಗಳನ್ನು ನೀಡಿದವು ಅಂತ ತಿಳಿದು ಬಂದಿದೆ. ಆರ್ಎಸ್ಎಸ್ ಸಂಯೋಜಿತ ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಒದಗಿಸಲಾದ ಆರ್ಥಿಕ ಲಾಭದ ಮೊತ್ತವನ್ನು ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ ಎನ್ನಲಾಗಿದೆ.

Share.
Exit mobile version