ಬೆಂಗಳೂರು: ನಟ ದರ್ಶನ್ ಸದ್ಯ ಕೊಲೆ ಆರೋಪದ ಮೇಲೆ ಪೊಲೀಸರ ವಶದಲ್ಲಿದ್ದು, ದಿನದಿಂದ ದಿನಕ್ಕೆ ಆತನ ಒಂದೊಂದು ಭಯಾನಕ ನಡವಳಿಕೆಗಳು ಬೆಳಕಿಗೆ ಬರುತ್ತಲಿವೆ.
ಈ ನಡುವೆ ಆತನ ವಿರುದ್ದ ರೌಡಿ ಶೀಟ್ ತೆಗೆಯಲು ಪೊಲೀಸ್ ಇಲಾಖೆ ಮುಂದಾಗಿದ್ದು, ಎಲ್ಲವೂ ಅಂದುಕೊಂಡತೆ ಆದರೆ ಈ ವಾರದಲ್ಲಿ ಆತನ ವಿರುದ್ದ ರೌಡಿ ಶೀಟ್ ತೆಗೆದು ಪೊಲೀಸ್ ಠಾಣೆಯ ಬೋರ್ಡ್ನಲ್ಲಿ ಆತನ ಫೋಟೋವನ್ನು ಹಾಕುವುದು ಫಿಕ್ಸ್ ಎನ್ನಲಾಗುತ್ತಿದೆ. ರೇಣುಕಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದ ಬಳಿಕ ನಟ ದರ್ಶನ್ ಪಾತಕಿ ಕೆಲಸಗಳು ಒಂದು ಒಂದೇ ಬೆಳಕಿಗೆ ಬರುತ್ತಿದ್ದು, ಅವುಗಳ ಬೆನ್ನು ಹತ್ತಿರುವ ಪೊಲೀಸರಿಗೆ ಶಾಕಿಂಗ್ ಮಾಹಿತಿಗಳು ಹೊರ ಬರುತ್ತಿವೆ. ಇವೆಲ್ಲದರ ನಡುವೆ ನಟ ದರ್ಶನ್ ರಾಜ್ಯದ ಪ್ರತಿಯೊಂದು ಜಿಲ್ಲೆಯಗಳ ಹೆಸರಾಂತ ರೌಡಿಗಳ ಜೊತೆಗೆ ಗುರುತಿಸಿಕೊಂಡಿದ್ದ ಎನ್ನಲಾಗಿದ್ದು, ತನ್ನ ವಿರುದ್ದ ಮಾತನಾಡುತ್ತಿದ್ದವರಿಗೆ ಅವರ ಮೂಲಕ ಬಿಸಿ ಮುಟ್ಟಿಸುತ್ತಿದ್ದ ಎನ್ನಲಾಗಿದೆ.
ಇದಲ್ಲದೇ ಹಲವು ಮಂದಿಯನ್ನು ಕರೆ ತಂದು ಅವರಿಗೆ ಹೆದರಿಸಿ ಬೆದರಿಸುತ್ತಿದ್ದ ಎನ್ನುವ ಗಂಭಿರ ಆರೋಪ ಕೂಡ ಕೇಳಿ ಬಂದಿದೆ. ಹಿಂದಿನ ಮತ್ತು ಈಗಿನ ಕೇಸ್ ಅನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ಇನ್ನೇನು ಕೆಲವೇ ದಿನದಲ್ಲಿ ದರ್ಶನ್ಗೆ ನೋಟಿಸ್ ನೀಡಿ ನಿಮ್ಮ ವಿರುದ್ದ ಏಕೆ ರೌಡಿ ಶೀಟ್ ತೆರೆಯಬಾರದು ಎನ್ನುವ ಕಾರಣ ಕೇಳಿ ಬಳಿಕ ರೌಡಿ ಶೀಟ್ ಅನ್ನು ಕಾನೂನು ಪ್ರಕಾರ ತೆರೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ. ಈಗಾಗಲೇ ಹಲವು ಮಂದಿ ದರ್ಶನ್ ಅಕ್ರಮ, ಮತ್ತು ಆತನ ವರ್ತನೆ ವಿರುದ್ದ ಕಿಡಿಕಾರುತ್ತಿರುವುದನ್ನು ಕಾಣಬಹುದಾಗಿದೆ.