ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟರ್ ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

BIG NEWS: ಬೆಂಗಳೂರಿಗರಿಗೆ ಸ್ವಾತಂತ್ರೋತ್ಸವದಂದು ಭರ್ಜರಿ ಗಿಫ್ಟ್: ಆ.15ರಂದು ‘BMTC ಬಸ್’ನಲ್ಲಿ ಇಡೀ ದಿನ ‘ಉಚಿತ ಪ್ರಯಾಣ’ಕ್ಕೆ ಅವಕಾಶ

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ತಲಪಾಡಿ ಚೆಕ್ ಪೋಸ್ಟ್ ಬಳಿ ಇಂದು ಬೆಳಗ್ಗೆ 7 ಗಂಟೆಗೆ ಪ್ರವೀಣ್ ಹತ್ಯೆ ಆರೋಪಿಗಳನ್ನು ಬಂಧಿಸಿದ್ದೇವೆ. ಆರೋಪಿಗಳಿಗೆ ಆಶ್ರಯ ನೀಡಿದ್ದವರನ್ನೂ ವಿಚಾರಣೆ ನಡೆಸುತ್ತೇವೆ. ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಯಾವ ಕಾರಣಕ್ಕಾಗಿ ಪ್ರವೀಣ್ ಹತ್ಯೆ ಮಾಡಿದ್ದಾರೆಂದು ವಿಚಾರಣೆ ಮಾಡುತ್ತೇವೆ. ಬಂಧಿತ ಶಿಯಾಬುದ್ದಿ ಅಲಿಯಾಸ್ ಶಿಯಾಬ್ ಸುಳ್ಯ ನಿವಾಸಿಯಾಗಿದ್ದಾರೆ. ಇನ್ನಿಬ್ಬರು ರಿಯಾಜ್, ಬಶೀರ್ ಅರೋಪಿಗಳಾಗಿದ್ದು, ಅವರನ್ನೂ ವಿಚಾರಣೆ ನಡೆಸುತ್ತೆವೆ. ಆರೋಪಿಗಳು ಪ್ರವೀಣ್ ಹತ್ಯೆಗೆ 4 ಬೈಕ್, 1 ಕಾರು ಬಳಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

BIG BREAKING NEWS: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಜಗದೀಶ್ ಧಂಕರ್ ಪ್ರಮಾಣವಚನ ಸ್ವೀಕಾರ | Jagdeep Dhankhar takes oath

Share.
Exit mobile version