Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಕಪ್ಪು ಕಲೆಗಳಿರುವ `ಈರುಳ್ಳಿ’ ಸೇವನೆ ಆರೋಗ್ಯಕ್ಕೆ ಡೇಂಜರ್.!

18/11/2025 6:23 AM

ರಾಜ್ಯದ ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಕ್ಕಿ’ ಬೆಲೆ ಏರಿಕೆ ಸಾಧ್ಯತೆ.!

18/11/2025 6:22 AM

ALERT : ರಾಜ್ಯ ಸರ್ಕಾರಿ ನೌಕರರೇ ಎಚ್ಚರ : ಆನ್ ಲೈನ್ ವಂಚನೆ, ಸೈಬರ್ ಕ್ರೈಮ್ ಗಳ ಬಗ್ಗೆ ಜಾಗೃತರಾಗಿರಿ.!

18/11/2025 6:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಕ್ಕಿ’ ಬೆಲೆ ಏರಿಕೆ ಸಾಧ್ಯತೆ.!
KARNATAKA

ರಾಜ್ಯದ ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಕ್ಕಿ’ ಬೆಲೆ ಏರಿಕೆ ಸಾಧ್ಯತೆ.!

By kannadanewsnow5718/11/2025 6:22 AM

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಅತ್ಯಧಿಕ ಭತ್ತ ಬೆಳೆಯುವ ಅಚ್ಚುಕಟ್ಟು ಪ್ರದೇಶವಾದ ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆ ಬೆಳಗೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಇದರ ಪರಿಣಾಮ ಭತ್ತ ಮತ್ತು ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿ 12.5 ಲಕ್ಷಕ್ಕೂ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. 2.5 ಕೋಟಿ ಕ್ವಿಂಟಲ್ ಭತ್ತ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಈ ಪ್ರದೇಶದಲ್ಲಿ ಈ ಬಾರಿ ಬೆಳೆ ಬೆಳೆಯುವುದಿಲ್ಲ. ಇದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

ಬೇಸಿಗೆ ಬೆಳೆಗೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಹೇಳುತ್ತಿದ್ದಂತೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಆರ್.ಎನ್.ಆರ್. ಭತ್ತದ ದರ 75 ಕೆಜಿಗೆ 1950-2000 ರೂ. ವರೆಗೆ ಏರಿಕೆಯಾಗಿದೆ. ಸೋನಾ ಮಸೂರಿ ದರ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ಕೆಲವು ದಲ್ಲಾಳಿಗಳು ಮುಂಗಾರು ಬೆಳೆ ಕಟಾವು ಪ್ರಾರಂಭವಾಗುತ್ತಿದ್ದಂತೆ ಭತ್ತ, ಅಕ್ಕಿಸಂಗ್ರಹಿಸಿ ಅಭಾವ ಸೃಷ್ಟಿಸುವ ಸಾಧ್ಯತೆ ಇದೆ.

ಭತ್ತಕ್ಕೆ ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಸಲಹೆ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೇ ಬೆಳೆಗೆ ನೀರಿಲ್ಲದೇ ಇರುವುದರಿಂದ ಭತ್ತಕ್ಕೆ ಪರ್ಯಾಯ ಕೆಲವು ಬೆಳೆ ಬೆಳೆಯಲು ಕೊಪ್ಪಳ ಕೃಷಿ ಇಲಾಖೆ ಹಾಗೂ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದಿಂದ ಸಲಹೆಗಳನ್ನು ನೀಡಲಾಗಿದೆ.

ಭತ್ತಕ್ಕೆ ಪರ್ಯಾಯ ಬೆಳೆಗಳು: ಭತ್ತದ ಬದಲಾಗಿ ಸಾಸಿವೆ (ಎನ್.ಆರ್.ಸಿ.ಹೆಚ್.ಬಿ-101, ಪಿ.ಎಮ್-30, ಕೆ.ಎಮ್-29), ಎಳ್ಳು (ಶ್ವೇತಾ, ವಿ.ಆರ್.ಐ-1), ಮೆಕ್ಕೆಜೋಳ (ಆರ್.ಸಿ.ಎಮ್.ಎಚ್-2 & 4, ಒಂದು ಅಥವಾ ಎರಡು ನೀರು ಕೊಡಬೇಕು), ಕಡಲೆ (ಅಣ್ಣಿಗೇರಿ-1, ಜೆಜಿ-11, ಬಿ.ಜಿ.ಡಿ-103), ಸೂರ್ಯಕಾಂತಿ (ಕೆ.ಬಿ.ಎಸ್.ಹೆಚ್-44, 53) (ಆರ್.ಎಫ್.ಎಸ್.ಹೆಚ್-700, ಆರ್.ಎಫ್.ಎಸ್.ಹೆಚ್-1877), ಹೆಸರು (ಬಿ.ಜಿ.ಎಸ್-9, ಪಿ.ಡಿ.ಎಮ್-139), ಭತ್ತ ಉದ್ದು (ಡಿ.ಯು-1, ಎಲ್.ಬಿ.ಜಿ-752), ಹುರುಳಿ (ಕ್ರೀಡಾ-1, ಪಿ.ಹೆಚ್.ಜಿ-9), ಅಲಸಂದಿ (ಸಿ-152, ಡಿ.ಸಿ.-15) ಬೆಳೆಯಬಹುದು. ನೀರು ಲಭ್ಯವಿದ್ದರೆ ಟೋಮ್ಯಾಟೋ, ಕಲ್ಲಂಗಡಿ, ಸೌತೆಕಾಯಿ, ಬೆಂಡೆಕಾಯಿ, ಹೀರೆಕಾಯಿ, ಬೀಟ್‌ರೂಟ್, ಈ ತರಕಾರಿಗಳನ್ನು ಬೆಳೆಯಬಹುದು. ನೀರಿನ ಅನುಕೂಲವಿದ್ದಲ್ಲಿ ತರಕಾರಿಗಳು ಸೊಪ್ಪಿನ ಬೆಳೆಗಳಾದ ಪಾಲಕ್, ಮೆಂತ್ಯೆ, ಸಬ್ಬಸಿಗೆ, ರಾಜಗಿರಿ, ಉಳ್ಳಿಚಿಕಾ, ಖಾಸಗಿ ತಳಿಗಳನ್ನು ಬೆಳೆಯಬಹುದು. ಉಳಿದಿರುವ ತೇವಾಂಶದಿಂದ ಹಸಿರೆಲೆ ಡಯಾಂಚಾ, ಸೆಣಬು, ಪಿಳ್ಳೆಪೆಸರು ಸಹ ಬೆಳೆಯಬಹುದು. ಇದಲ್ಲದೇ ಭತ್ತ ಮೇವಿನ ಬೆಳೆಗಳ (ಹೈಬ್ರಿಡ್ ನೇಪಿಯರ್, ಸಿ.ಓ.ಎಫ್.ಹೆಚ್-29, ಸಿ.ಓ-4) ಬೆಳೆಯಬಹುದಾಗಿದೆ.

ನೀರು ಲಭ್ಯ ಇರುವ ಪ್ರದೇಶದಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ, ಈರುಳ್ಳಿ, ತರಕಾರಿ ಬೆಳೆಗಳನ್ನು ಬೆಳೆಯಬಹುದು. ಕಡಿಮೆ ನೀರಿರುವ ಪ್ರದೇಶದಲ್ಲಿ ಶೇಂಗಾ, ಹೆಸರು, ಉದ್ದು, ಸೂರ್ಯಕಾಂತಿ, ಅಲಸಂದಿ ಹಾಗೂ ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ, ಊದಲು, ಬರಗು ಮತ್ತು ಅತಿ ಕಡಿಮೆ ನೀರಿರುವ ಪ್ರದೇಶದಲ್ಲಿ ಸಾಸಿವೆ, ಕುಸುಬೆ, ಹುರುಳಿ, ಹಿಂಗಾರಿ ಜೋಳ, ಹೆಸರು, ಉದ್ದು ಬೆಳೆಯಬಹುದಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ALERT : ಕಪ್ಪು ಕಲೆಗಳಿರುವ `ಈರುಳ್ಳಿ’ ಸೇವನೆ ಆರೋಗ್ಯಕ್ಕೆ ಡೇಂಜರ್.!

18/11/2025 6:23 AM2 Mins Read

ALERT : ರಾಜ್ಯ ಸರ್ಕಾರಿ ನೌಕರರೇ ಎಚ್ಚರ : ಆನ್ ಲೈನ್ ವಂಚನೆ, ಸೈಬರ್ ಕ್ರೈಮ್ ಗಳ ಬಗ್ಗೆ ಜಾಗೃತರಾಗಿರಿ.!

18/11/2025 6:16 AM2 Mins Read

BIG NEWS : `ವಂಶವೃಕ್ಷ’ದಲ್ಲಿ ಪೌತಿ ವಾರಸುದಾರರ ಹೆಸರನ್ನು ಕೈಬಿಟ್ಟರೆ ಕಾನೂನು ಕ್ರಮ ಫಿಕ್ಸ್.!

18/11/2025 6:13 AM1 Min Read
Recent News

ALERT : ಕಪ್ಪು ಕಲೆಗಳಿರುವ `ಈರುಳ್ಳಿ’ ಸೇವನೆ ಆರೋಗ್ಯಕ್ಕೆ ಡೇಂಜರ್.!

18/11/2025 6:23 AM

ರಾಜ್ಯದ ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಕ್ಕಿ’ ಬೆಲೆ ಏರಿಕೆ ಸಾಧ್ಯತೆ.!

18/11/2025 6:22 AM

ALERT : ರಾಜ್ಯ ಸರ್ಕಾರಿ ನೌಕರರೇ ಎಚ್ಚರ : ಆನ್ ಲೈನ್ ವಂಚನೆ, ಸೈಬರ್ ಕ್ರೈಮ್ ಗಳ ಬಗ್ಗೆ ಜಾಗೃತರಾಗಿರಿ.!

18/11/2025 6:16 AM

BIG NEWS : `ವಂಶವೃಕ್ಷ’ದಲ್ಲಿ ಪೌತಿ ವಾರಸುದಾರರ ಹೆಸರನ್ನು ಕೈಬಿಟ್ಟರೆ ಕಾನೂನು ಕ್ರಮ ಫಿಕ್ಸ್.!

18/11/2025 6:13 AM
State News
KARNATAKA

ALERT : ಕಪ್ಪು ಕಲೆಗಳಿರುವ `ಈರುಳ್ಳಿ’ ಸೇವನೆ ಆರೋಗ್ಯಕ್ಕೆ ಡೇಂಜರ್.!

By kannadanewsnow5718/11/2025 6:23 AM KARNATAKA 2 Mins Read

ಈರುಳ್ಳಿಯನ್ನು ಹೆಚ್ಚಾಗಿ ಅವುಗಳ ಸಮೃದ್ಧ ಉತ್ಕರ್ಷಣ ನಿರೋಧಕಗಳು ಮತ್ತು ಗಂಧಕದ ಸಂಯುಕ್ತಗಳಿಂದಾಗಿ ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುವ ಸೂಪರ್ಫುಡ್ ಎಂದು ಪ್ರಶಂಸಿಸಲಾಗುತ್ತದೆ.…

ರಾಜ್ಯದ ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಕ್ಕಿ’ ಬೆಲೆ ಏರಿಕೆ ಸಾಧ್ಯತೆ.!

18/11/2025 6:22 AM

ALERT : ರಾಜ್ಯ ಸರ್ಕಾರಿ ನೌಕರರೇ ಎಚ್ಚರ : ಆನ್ ಲೈನ್ ವಂಚನೆ, ಸೈಬರ್ ಕ್ರೈಮ್ ಗಳ ಬಗ್ಗೆ ಜಾಗೃತರಾಗಿರಿ.!

18/11/2025 6:16 AM

BIG NEWS : `ವಂಶವೃಕ್ಷ’ದಲ್ಲಿ ಪೌತಿ ವಾರಸುದಾರರ ಹೆಸರನ್ನು ಕೈಬಿಟ್ಟರೆ ಕಾನೂನು ಕ್ರಮ ಫಿಕ್ಸ್.!

18/11/2025 6:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.