Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ನ್ಯೂಸ್ ಚಾನಲ್’ ತೆರೆಯಲು ಅರ್ಹತೆ, ಮಾನದಂಡಗಳು, ದಾಖಲೆಗಳು ಏನು? ಇಲ್ಲಿದೆ ಮಾಹಿತಿ

20/12/2025 9:44 AM

ಇತಿಹಾಸ ಸೃಷ್ಟಿಸಿದ ವರುಣ್ ಚಕ್ರವರ್ತಿ : ದ್ವಿಪಕ್ಷೀಯ ಸರಣಿಯಲ್ಲಿ 3 ಬಾರಿ 10+ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್!

20/12/2025 9:39 AM

SHOCKING : ರಾಜ್ಯದಲ್ಲಿ `ಹೃದಯಾಘಾತ’ ಕ್ಕೆ ಮತ್ತೆ ಮೂವರು ಬಲಿ : ಶಿಕ್ಷಕಿ ಸೇರಿ ಮೂವರು ಸಾವು.!

20/12/2025 9:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಕರ್ತವ್ಯದ ವೇಳೆ ಇನ್ಮುಂದೆ ಈ ನಿಯಮಗಳ ಪಾಲನೆ ಕಡ್ಡಾಯ.!
KARNATAKA

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಕರ್ತವ್ಯದ ವೇಳೆ ಇನ್ಮುಂದೆ ಈ ನಿಯಮಗಳ ಪಾಲನೆ ಕಡ್ಡಾಯ.!

By kannadanewsnow5720/12/2025 9:26 AM

ಬೆಂಗಳೂರು :  ರಾಜ್ಯ ಸರ್ಕಾರದ ಕಛೇರಿಗಳಲ್ಲಿ ಸರ್ಕಾರಿ ನೌಕರರು ಚಲನವಲನ ವಹಿ (Movement Register) ಮತ್ತು ನಗದು ಘೋಷಣೆ ವಹಿ (Cash Declaration Register) ಯನ್ನು ನಿರ್ವಹಣೆ ಮಾಡದಿರುವುದು, ಸಭ್ಯ ಉಡುಗೆ ತೊಡುಗೆಗಳನ್ನು ಧರಿಸದಿರುವ ಕುರಿತು ಸಾರ್ವಜನಿಕರಿಂದ/ಸಂಘ ಸಂಸ್ಥೆಗಳಿಂದ ಹಲವಾರು ದೂರುಗಳು ಸ್ವೀಕೃತವಾಗುತ್ತಿವೆ. ಈ ಕುರಿತು ಈ ಹಿಂದೆ ಹಲವು ಸುತ್ತೋಲೆಗಳನ್ನು ಹೊರಡಿಸಲಾಗಿರುತ್ತದೆ. ಆದಾಗ್ಯೂ ಸದರಿ ಸುತ್ತೋಲೆಗಳನ್ನು ಪಾಲನೆ ಮಾಡದಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದೆ.

ಚಲನಾ ನೋಂದಣಿ

ಕಚೇರಿ ವೇಳೆಯಲ್ಲಿ ಸರ್ಕಾರಿ ನೌಕರರ ಚಲನವಲನವನ್ನು ನಿಯಂತ್ರಿಸಲು ಚಲನವಲನ ವಹಿಯ ನಿರ್ವಹಣೆ ಬಗ್ಗೆ ಸುತ್ತೋಲೆ ಸಂಖ್ಯೆ: ಸಿಆಸುಇ 02 ತಎಇ 2016, ದಿನಾಂಕ: 12.04.2016, ಸಿಆಸುಇ 05 ಕತವ 2020, ໖:07.02.2020 ಹಾಗೂ /4464335/2025, ໖:25.07.2022 , 03, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಚಲನವಲನ ವಹಿ (Movement Register) ಯನ್ನು ಕಡ್ಡಾಯವಾಗಿ ನಿರ್ವಹಿಸುವಂತೆ ಸೂಚಿಸಿದೆ.

ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಸರ್ಕಾರಿ ಕಚೇರಿಗಳ ನಿಗದಿತ ಪ್ರಾರಂಭ ಸಮಯವಾದ ಬೆಳಿಗ್ಗೆ 10.10 ಗಂಟೆಗೆ ಕಾರ್ಯಾಲಯಕ್ಕೆ ಹಾಜರಾಗಬೇಕು ಹಾಗೂ ಕಛೇರಿ ಸಮಯ ಮುಗಿಯುವವರೆಗೂ ತಮ್ಮ ಕರ್ತವ್ಯದ ಸ್ಥಳದಲ್ಲಿಯೇ ಹಾಜರಿರಬೇಕು. ಕಚೇರಿ ಸಮಯದಲ್ಲಿ ಅಧಿಕೃತ ಕಾರ್ಯಕ್ಕಾಗಿ ಹೊರ ಹೋಗಬೇಕಾದ್ದಲ್ಲಿ:

ಚಲನವಲನ ವಹಿಯಲ್ಲಿ ಹೊರ ಹೋಗುವ ಕಾರಣ/ಉದ್ದೇಶವನ್ನು ದಾಖಲಿಸಬೇಕು.

ಮೇಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು. ಹೊರ ಹೋಗುವ ಸಮಯ ಹಾಗೂ ಹಿಂದಿರುಗಿದ ಸಮಯವನ್ನು ಸಹಿ ಮತ್ತು ದಿನಾಂಕದೊಂದಿಗೆ ದಾಖಲಿಸಬೇಕು.

ಚಲನವಲನ ವಹಿಯಲ್ಲಿ ದಾಖಲು ಮಾಡದೇ ಕರ್ತವ್ಯ ಸ್ಥಳದಲ್ಲಿ ಹಾಜರಿಲ್ಲದ ಅಧಿಕಾರಿ/ಸಿಬ್ಬಂದಿಗಳನ್ನು ಅನಧಿಕೃತವಾಗಿ ಗೈರು ಹಾಜರಿ ಎಂದು ಪರಿಗಣಿಸುವುದು ಮತ್ತು ಮೇಲಾಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳುವುದು.

ಕಚೇರಿ ಸಮಯದಲ್ಲಿ ಅನಧಿಕೃತವಾಗಿ ಮೇಲಾಧಿಕಾರಿಗಳು ನಿಯಂತ್ರಿಸುವುದು. ಹೊರ ಹೋಗುವ ನೌಕರರನ್ನು ಮೇಲಾಧಿಕಾರಿಗಳು ನಿಯಂತ್ರಿಸುವುದು.

ನಗದು ಘೋಷಣೆ ವಹಿ (Cash Declaration Register):

ನಗದು ಘೋಷಣೆ ವಹಿಯನ್ನು ನಿರ್ವಹಿಸುವ ಕುರಿತು ಸಿಆಸುಇ(ಆಸು) 21 ಕತವ 2022, ದಿನಾಂಕ: 04.02.2022 ಮತ್ತು 14.03.2022 ರಲ್ಲಿ ಸುತ್ತೋಲೆಗಳನ್ನು ಹೊರಡಿಸಲಾಗಿದೆ.

Ins ಸರ್ಕಾರಿ ನೌಕರರು ಅಧಿಕೃತ ಸಹಿ ಹಾಜರಾತಿ ವಹಿ/ಎಎಂಎಸ್ ನಲ್ಲಿ ಕರ್ತವ್ಯಕ್ಕೆ ವರದಿ 15ಾ ಮಾಡಿದ ತಕ್ಷಣ, ಕಛೇರಿಗೆ ತಂದ ನಗದು ಮೊತ್ತವನ್ನು ನಗದು ಘೋಷಣೆ ವಹಿಯ 16. ನಿಗದಿತ ನಮೂನೆಯಲ್ಲಿ ಸಹಿಯೊಂದಿಗೆ ಘೋಷಿಸತಕ್ಕದ್ದು.

ಮೇಲಾಧಿಕಾರಿಗಳು ತಮ್ಮ ಎಲ್ಲಾ ಸಿಬ್ಬಂದಿಗಳು ನಗದು ಘೋಷಣಾ ವಹಿಯಲ್ಲಿ ನಮೂದಿಸುತ್ತಿರುವ ಬಗ್ಗೆ ಆಗ್ಗಿಂದಾಗ್ಗೆ ಪರಿಶೀಲಿಸಲು ಸೂಚಿಸಿದೆ.

ಸಭ್ಯ ಉಡುಗೆ ತೊಡುಗೆಗಳನ್ನು ಧರಿಸುವುದು:

ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ/ನೌಕರರುಗಳು ಸರ್ಕಾರದ ಘನತೆಗೆ ಧಕ್ಕೆ ಬಾರದಂತೆ ಮತ್ತು ಶೋಭೆಯನ್ನು ತರುವಂತಹ ಸಭ್ಯ ಉಡುಗೆ ತೊಡುಗೆಗಳನ್ನು ಮಾತ್ರ ಧರಿಸಬೇಕೆಂದು ಸರ್ಕಾರವು ಪರಿಷ್ಕೃತ ಸುತ್ತೋಲೆ ಸಂಖ್ಯೆ: ಸಿಆಸುಇ 65 ಇಆಸು 2013, ದಿನಾಂಕ:16.09.2013 ರಂದು ಸುತ್ತೋಲೆಯನ್ನು ಹೊರಡಿಸಲಾಗಿರುತ್ತದೆ. ಸದರಿ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.

 

BIG NEWS: State government employees take note: It is now mandatory to follow these rules while on duty!
Share. Facebook Twitter LinkedIn WhatsApp Email

Related Posts

‘ನ್ಯೂಸ್ ಚಾನಲ್’ ತೆರೆಯಲು ಅರ್ಹತೆ, ಮಾನದಂಡಗಳು, ದಾಖಲೆಗಳು ಏನು? ಇಲ್ಲಿದೆ ಮಾಹಿತಿ

20/12/2025 9:44 AM4 Mins Read

SHOCKING : ರಾಜ್ಯದಲ್ಲಿ `ಹೃದಯಾಘಾತ’ ಕ್ಕೆ ಮತ್ತೆ ಮೂವರು ಬಲಿ : ಶಿಕ್ಷಕಿ ಸೇರಿ ಮೂವರು ಸಾವು.!

20/12/2025 9:26 AM1 Min Read

ಹಿರಿಯ ಪತ್ರಕರ್ತರ ‘ದೊಡ್ಡ ಬೊಮ್ಮಯ್ಯ’ ನಿಧನಕ್ಕೆ ‘KUWJ’ ಸಂತಾಪ

20/12/2025 9:13 AM1 Min Read
Recent News

‘ನ್ಯೂಸ್ ಚಾನಲ್’ ತೆರೆಯಲು ಅರ್ಹತೆ, ಮಾನದಂಡಗಳು, ದಾಖಲೆಗಳು ಏನು? ಇಲ್ಲಿದೆ ಮಾಹಿತಿ

20/12/2025 9:44 AM

ಇತಿಹಾಸ ಸೃಷ್ಟಿಸಿದ ವರುಣ್ ಚಕ್ರವರ್ತಿ : ದ್ವಿಪಕ್ಷೀಯ ಸರಣಿಯಲ್ಲಿ 3 ಬಾರಿ 10+ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್!

20/12/2025 9:39 AM

SHOCKING : ರಾಜ್ಯದಲ್ಲಿ `ಹೃದಯಾಘಾತ’ ಕ್ಕೆ ಮತ್ತೆ ಮೂವರು ಬಲಿ : ಶಿಕ್ಷಕಿ ಸೇರಿ ಮೂವರು ಸಾವು.!

20/12/2025 9:26 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಕರ್ತವ್ಯದ ವೇಳೆ ಇನ್ಮುಂದೆ ಈ ನಿಯಮಗಳ ಪಾಲನೆ ಕಡ್ಡಾಯ.!

20/12/2025 9:26 AM
State News
KARNATAKA

‘ನ್ಯೂಸ್ ಚಾನಲ್’ ತೆರೆಯಲು ಅರ್ಹತೆ, ಮಾನದಂಡಗಳು, ದಾಖಲೆಗಳು ಏನು? ಇಲ್ಲಿದೆ ಮಾಹಿತಿ

By kannadanewsnow5720/12/2025 9:44 AM KARNATAKA 4 Mins Read

ತಮ್ಮದೇ ಆದ ಒಂದು ಟಿವಿ ನ್ಯೂಸ್ ಚಾನೆಲ್ ಆರಂಭಿಸಬೇಕು, ಸಮಾಜಕ್ಕೆ ಧ್ವನಿಯಾಗಬೇಕು ಎಂಬ ಕನಸು ಹಲವರಲ್ಲಿ ಇರುತ್ತದೆ. ಆದರೆ, ಈ…

SHOCKING : ರಾಜ್ಯದಲ್ಲಿ `ಹೃದಯಾಘಾತ’ ಕ್ಕೆ ಮತ್ತೆ ಮೂವರು ಬಲಿ : ಶಿಕ್ಷಕಿ ಸೇರಿ ಮೂವರು ಸಾವು.!

20/12/2025 9:26 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಕರ್ತವ್ಯದ ವೇಳೆ ಇನ್ಮುಂದೆ ಈ ನಿಯಮಗಳ ಪಾಲನೆ ಕಡ್ಡಾಯ.!

20/12/2025 9:26 AM

ಹಿರಿಯ ಪತ್ರಕರ್ತರ ‘ದೊಡ್ಡ ಬೊಮ್ಮಯ್ಯ’ ನಿಧನಕ್ಕೆ ‘KUWJ’ ಸಂತಾಪ

20/12/2025 9:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.