Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? : ಕೃಷ್ಣ ಭೈರೇಗೌಡ

13/05/2025 7:24 PM

ಈಗ ಪಾಕಿಸ್ತಾನದ ಮುಂದಿರುವುದು ಪಿಒಕೆ ತೆರವುಗೊಳಿಸುವುದು ಮಾತ್ರ: ವಿದೇಶಾಂಗ ವ್ಯವಹಾರಗಳ ಸಚಿವಾಲಯ

13/05/2025 7:15 PM

BREAKING : ಬಳ್ಳಾರಿ ಬಳಿಕ ಹಾವೇರಿ, ಗದಗದಲ್ಲೂ ಸಿಡಿಲು ಬಡಿದು ಮೂವರು ಸಾವು!

13/05/2025 7:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ‘ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಸಾಮಾಜಿಕ ಭದ್ರತಾ ವ್ಯವಸ್ಥೆ’ ಜಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : ‘ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಸಾಮಾಜಿಕ ಭದ್ರತಾ ವ್ಯವಸ್ಥೆ’ ಜಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5708/04/2025 2:48 PM

ಬೆಂಗಳೂರು : ಸರ್ಕಾರದಿಂದ ನೇರವಾಗಿ / ಪರೋಕ್ಷವಾಗಿ ನೇಮಕಗೊಂಡಿರುವ ಅಧಿಕಾರಿಗಳು/ ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವ ಅಥವಾ ವಿಸ್ತರಿಸುವ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದನ್ವಯ, ದಿನಾಂಕ:30.01.2025ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ: ಸಿ.80/2025ರಲ್ಲಿ ತಿರ್ಮಾನಿಸಿದಂತೆ, ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳು ಒದಗಿಸುವ “ಸಂಬಳ ಪ್ಯಾಕೇಜ್‌ಗಳ” ಅಡಿಯಲ್ಲಿ ಖಾತೆಗಳನ್ನು ತೆರೆಯುವುದು/ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ/ನೌಕರರಿಗೆ (ಸರ್ಕಾರಿ / ಸರ್ಕಾರಿ ಸಂಸ್ಥೆಗಳು, ಇತ್ಯಾದಿ) ಕಡ್ಡಾಯಗೊಳಿಸುವ ಬಗ್ಗೆ ಆದೇಶಿಸಲಾಗಿದೆ.

ಉಲ್ಲೇಖಿತ ಪತ್ರದಲ್ಲಿನ ಅಂಶಗಳ ಹಿನ್ನೆಲೆ ಹಾಗೂ ಸಚಿವ ಸಂಪುಟದ ಸಭೆಯಲ್ಲಿ ತಿರ್ಮಾನಿಸಿದಂತೆ, ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಈ ಕೆಳಗಿನಂತೆ ಆದೇಶಿಸಲಾಗಿದೆ:-

a) ವಿವಿಧ ಬ್ಯಾಂಕುಗಳು ಒದಗಿಸುವ “ಸಂಬಳ ಪ್ಯಾಕೇಜ್‌ಗಳ” ಅಡಿಯಲ್ಲಿ ಖಾತೆಗಳನ್ನು ತೆರೆಯುವುದು/ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ/ನೌಕರರಿಗೆ (ಸರ್ಕಾರಿ / ಸರ್ಕಾರಿ ಸಂಸ್ಥೆಗಳು, ಇತ್ಯಾದಿ) ಕಡ್ಡಾಯಗೊಳಿಸಿದೆ.

b) ಬ್ಯಾಂಕ್‌ಗಳು/ಅಂಚೆ ಕಚೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವಿಮಾ ರಕ್ಷಣೆಯನ್ನು ಪಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿ/ನೌಕರರಿಗೆ ಆದೇಶಿಸುವುದು.

c) ಬ್ಯಾಂಕ್‌ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿ/ನೌಕರರಿಗೆ ತಿಳಿಸುವುದು.

ಸರ್ಕಾರದ ಅಧಿಕಾರಿ/ನೌಕರರ PMJJBY ಮತ್ತು PMSBY ಯೋಜನೆಗಳ ವಿವರಗಳನ್ನು HRMSನಲ್ಲಿ ನಮೂದಿಸಲು ಈ ಕೆಳಗಿನ ಕ್ರಮವನ್ನು ಅನುಸರಿಸುವುದು.

ಹಂತ-01 ನಿಮ್ಮ DDO ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ

ಹಂತ-02 PMJJBY ಮತ್ತು PMSBY ಆಯ್ಕೆಮಾಡಿ

ಉದ್ಯೋಗಿ ಸ್ವಯಂ ಸೇವೆ PM3JBY ಯೋಜನೆಯಲ್ಲಿ ಉದ್ಯೋಗಿಗಳ ನೋಂದಣಿ ಸ್ಥಿತಿ

ಹಂತ-03 PMJJBY ಅಥವಾ PMSBY ಯೋಜನೆಯನ್ನು ಆಯ್ಕೆಮಾಡಿ

ಹಂತ-04 ಆಕ್ಷನ್ ಅಂಕಣದಲ್ಲಿ ಹೌದು ಅಥವಾ ಇಲ್ಲ ಆಯ್ಕೆಮಾಡಿ

ಹಂತ-05 ಉದ್ಯೋಗಿಗಳ ಡೇಟಾವನ್ನು ಸಲ್ಲಿಸಿ

ಎಲ್ಲಾ ಅಧಿಕಾರಿ/ನೌಕರರ PMJJBY ಮತ್ತು PMSBY ಯೋಜನೆಗಳ ವಿವರಗಳನ್ನು ಎಲ್ಲಾ ಇಲಾಖೆಯ ಡಿ.ಡಿ.ಒ.ಗಳು ಈ ಮಾಹಿತಿಯನ್ನು ಹೆಚ್.ಆ‌ರ್.ಎಂ.ಎಸ್-1 ರಲ್ಲಿ ನಮೂದಿಸಲು ತಿಳಿಸಿದ ಒಂದು ವೇಳೆ ಒಬ್ಬ ನೌಕರನ ವಿವರವನ್ನು ನಮೂದಿಸದಿದಲ್ಲಿ ತಮ್ಮ ಡಿ.ಡಿ.ಒ. ಹಂತದಲ್ಲಿನ ಯಾವ ನೌಕರರಿಗೂ ವೇತನವನ್ನು ಸೆಳೆಯಲು ಸಾಧ್ಯವಾಗುವುದಿಲ್ಲಾ.

ಎಲ್ಲಾ ಅಧಿಕಾರಿ/ನೌಕರರು ತಮ್ಮ ಬ್ಯಾಂಕ್ ಖಾತೆಗಳನ್ನು “ಸಂಬಳ ಪ್ಯಾಕೇಜ್” ಆಗಿ ಪರಿವರ್ತಿಸಿಕೊಳಲು ಹಾಗೂ ಎಲ್ಲಾ ಇಲಾಖೆಯ ಡಿ.ಡಿ.ಒ.ಗಳು ಈ ಮಾಹಿತಿಯನ್ನು ಹೆಚ್.ಆರ್.ಎಂ.ಎಸ್-1 ರಲ್ಲಿ ನಮೂದಿಸಲು ತಿಳಿಸಿದೆ. ಆದ್ದರಿಂದ ಎಲ್ಲಾ ಇಲಾಖೆಗಳು ತಮ್ಮ ಅಧೀನದಲ್ಲಿರುವ ಸಿಬ್ಬಂದಿಯವರಿಗೆ ಈ ಕೂಡಲೇ ಕಡ್ಡಾಯವಾಗಿ ತಮ್ಮ ಚಾಲ್ತಿ ಬ್ಯಾಂಕ್ ಖಾತೆಗಳನ್ನು “ಸಂಬಳ ಪ್ಯಾಕೇಜ್” ಖಾತೆಯಾಗಿ ಮಾಡಿಕೊಳಲು / ಮಾರ್ಪಡಿಸಿಕೊಳಲು ಸೂಚಿಸಿದೆ.

“ಸಂಬಳ ಪ್ಯಾಕೇಜ್” ಪ್ರಕ್ರಿಯೆಯನ್ನು ಮಾಡಲು ಈ ಮುಂದಿನ ರೀತಿಯನ್ನು ಈ ಕೆಳಕಂಡಂತೆ ಅನುಸರಿಸುವುದು ಡಿಡಿಓ ಲಾಗಿನ್ ಆದ ತಕ್ಷಣ, ಡಿಡಿಓ ಅಡಿಯಲ್ಲಿ ಬರುವ ಪ್ರತಿಯೊಬ್ಬ ಉದ್ಯೋಗಿ ಬ್ಯಾಂಕ್ ಸಂಬಳ ಪ್ಯಾಕೇಜ್‌ಗಳನ್ನು ಅಳವಡಿಸಿಕೊಂಡಿದ್ದಾರೆಯೇ ಎಂದು ದೃಢೀಕರಿಸುವುದು (ಹೌದು/ಇಲ್ಲಾ) ಆಯ್ಕೆಯನ್ನು ಮಾಡುವುದು.

ಎಲ್ಲಾ ಉದ್ಯೋಗಿಗಳಿಂದ ದೃಢೀಕರಣಗಳನ್ನು ಸ್ವೀಕರಿಸುವವರೆಗೆ, ಸಿಸ್ಟಮ್ ಡಿಡಿಓ ಬಳಕೆದಾರರಿಗೆ ಲಾಗಿನ್ ಆಗಲು ಅನುಮತಿಸುವುದಿಲ್ಲ. ಇದು ಒಂದು ಬಾರಿಯ ಚಟುವಟಿಕೆಯಾಗಿದೆ.

ಆದಾಗ್ಯೂ, ಪ್ರಸ್ತುತ ಸರ್ಕಾರದ ಅಧಿಕಾರಿ/ನೌಕರರ ಬ್ಯಾಂಕಿನಲ್ಲಿ ಈ ಯೋಜನೆಯನ್ನು ಅಳವಡಿಸಿಕೊಂಡಿಲ್ಲದಿದ್ದರೆ, ಉಲ್ಲೇಖಿತ ಆದೇಶದ ಪ್ರಕಾರ, ಮುಂದಿನ ಮೂರು ತಿಂಗಳ ವೇಳೆಗೆ ಇದನ್ನು ಹೌದು ಎಂದು ನವೀಕರಿಸದಿದ್ದರೆ, ಅವರ ವೇತನವನ್ನು ನಿಲ್ಲಿಸಲಾಗುತ್ತದೆ.

BIG NEWS: 'State Government Employees' take note: Important order from the government regarding the implementation of the `Social Security System'!
Share. Facebook Twitter LinkedIn WhatsApp Email

Related Posts

BIG NEWS : ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? : ಕೃಷ್ಣ ಭೈರೇಗೌಡ

13/05/2025 7:24 PM1 Min Read

BREAKING : ಬಳ್ಳಾರಿ ಬಳಿಕ ಹಾವೇರಿ, ಗದಗದಲ್ಲೂ ಸಿಡಿಲು ಬಡಿದು ಮೂವರು ಸಾವು!

13/05/2025 7:13 PM1 Min Read

ಈ ‘ಮಿಯಾ ಜಾಕಿ’ ಮಾವಿನ ಹಣ್ಣಿನ ಬೆಲೆ ಎಷ್ಟು ಗೊತ್ತಾ? ಕೇಳಿದರೆ ತಲೆ ಸುತ್ತೋದಂತೂ ಗ್ಯಾರಂಟಿ!

13/05/2025 6:58 PM2 Mins Read
Recent News

BIG NEWS : ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? : ಕೃಷ್ಣ ಭೈರೇಗೌಡ

13/05/2025 7:24 PM

ಈಗ ಪಾಕಿಸ್ತಾನದ ಮುಂದಿರುವುದು ಪಿಒಕೆ ತೆರವುಗೊಳಿಸುವುದು ಮಾತ್ರ: ವಿದೇಶಾಂಗ ವ್ಯವಹಾರಗಳ ಸಚಿವಾಲಯ

13/05/2025 7:15 PM

BREAKING : ಬಳ್ಳಾರಿ ಬಳಿಕ ಹಾವೇರಿ, ಗದಗದಲ್ಲೂ ಸಿಡಿಲು ಬಡಿದು ಮೂವರು ಸಾವು!

13/05/2025 7:13 PM

ಭಾರತ-ಪಾಕ್ ಕದನ ವಿರಾಮಕ್ಕೆ ಟ್ರಂಪ್ ಕಾರಣವೆನ್ನುವುದನ್ನು ನಿರಾಕರಿಸಿದ ಭಾರತ | India-Pak ceasefire

13/05/2025 7:00 PM
State News
KARNATAKA

BIG NEWS : ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? : ಕೃಷ್ಣ ಭೈರೇಗೌಡ

By kannadanewsnow0513/05/2025 7:24 PM KARNATAKA 1 Min Read

ಬಾಗಲಕೋಟೆ : ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ ಮೂಲಕ…

BREAKING : ಬಳ್ಳಾರಿ ಬಳಿಕ ಹಾವೇರಿ, ಗದಗದಲ್ಲೂ ಸಿಡಿಲು ಬಡಿದು ಮೂವರು ಸಾವು!

13/05/2025 7:13 PM

ಈ ‘ಮಿಯಾ ಜಾಕಿ’ ಮಾವಿನ ಹಣ್ಣಿನ ಬೆಲೆ ಎಷ್ಟು ಗೊತ್ತಾ? ಕೇಳಿದರೆ ತಲೆ ಸುತ್ತೋದಂತೂ ಗ್ಯಾರಂಟಿ!

13/05/2025 6:58 PM

ಬಿದಿರಿನ ಕಡ್ಡಿಯ ಸಹಾಯದಿಂದ ಕಾಳಿ ದೇವಿಯ ಶಕ್ತಿಯಿಂದ ಈ ರೀತಿಯಾಗಿ ಶತ್ರುನಾಶದ ತಂತ್ರ ಮಾಡಬಹುದು!

13/05/2025 6:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.