Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಚಳಿಯಲ್ಲಿ `ತಣ್ಣೀರು ಸ್ನಾನ’ ಮಾಡುವವರೇ ಎಚ್ಚರ : ಹೀಗೆ ಮಾಡುವುದು ಸಾವಿಗೆ ಕಾರಣವಾಗಬಹುದು.!

14/01/2026 10:43 AM

‘ಟಾಯ್ಲೆಟ್ ಮ್ಯಾನರ್ಸ್’ ಗೊತ್ತಿಲ್ಲದಿದ್ದರೆ ಈ ರೈಲು ಹತ್ತಬೇಡಿ! ವಂದೇ ಭಾರತ್ ಪ್ರಯಾಣಿಕರಿಗೆ ಅಧಿಕಾರಿಗಳ ಖಡಕ್ ವಾರ್ನಿಂಗ್

14/01/2026 10:42 AM

ಬೆಂಗಳೂರಲ್ಲಿ ಪತ್ನಿಗೆ ವಂಚಿಸಿ ಪ್ರೇಯಸಿಯೊಂದಿಗೆ ಪತಿ ಕಳ್ಳಾಟ : ಪಿಜಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಟೆಕ್ಕಿ!

14/01/2026 10:39 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5723/12/2025 6:07 AM

ಬೆಂಗಳೂರು : ಸರ್ಕಾರಿ ಸೇವೆಗೆ ಸೇರ್ಪಡಿಕೊಂಡಿರುವ ಎಲ್ಲಾ ಅಧಿಕಾರಿ/ನೌಕರರ Electronic Service Register (ESR) ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ, ಸದರಿ ಉಲ್ಲೇಖಗಳನ್ವಯ 2021-22 ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯನ್ನು “ವಿದ್ಯುನ್ಮಾನ ಸೇವಾ ವಹಿ” Electronic Service Register (ESR) ನಲ್ಲಿಯೇ ಅನುಷ್ಠಾನಗೊಳಿಸಲು ಸಂಬಂದಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಲಾಗಿರುತ್ತದೆ ಹಾಗೂ ಉಲ್ಲೇಖಿತ ಸರ್ಕಾರದ ಸುತ್ತೋಲೆ (3) & (4) ರಂತೆ, ಎಲ್ಲಾ ಸಿಬ್ಬಂದಿಗಳ ಸೇವಾ ವಹಿಗಳನ್ನು ESR ಗೆ ಬದಲಾಯಿಸಿ ಮುಂದೆ ESR ನಲ್ಲಿಯೇ ಮುಂದುವರೆಸುವಂತೆ ತಿಳಿಸಲಾಗಿದೆ. HRMS-1 ತಂತ್ರಾಂಶದ ಸೇವಾವಹಿ ಭಾಗದಲ್ಲಿ ಅಧಿಕಾರಿ/ನೌಕರರ ಮಾಹಿತಿಯು ಲಭ್ಯವಿದ್ದು, ಸದರಿ ಮಾಹಿತಿಯನ್ನು HRMS-2 ಯೋಜನೆಯ ಭಾಗವಾಗಿರುವ ವಿದ್ಯುನ್ಮಾನ ಸೇವಾ ವಹಿ (ESR) ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ಮಾಹಿತಿಯನ್ನು ವರ್ಗಾಯಿಸಿದ ನಂತರ ESR ನಲ್ಲಿ ಯಾವುದೇ ತಿದ್ದುಪಡಿ ಮಾಡುವ ಅವಕಾಶವಿಲ್ಲದಿರುವ ಕಾರಣ HRMS-1 ತಂತ್ರಾಂಶದಲ್ಲಿ ಲಭ್ಯವಿರುವ ತಮ್ಮ ಇಲಾಖೆಯ ಎಲ್ಲಾ ಸರ್ಕಾರಿ ಅಧಿಕಾರಿ/ ನೌಕರರುಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ಕೂಡಲೇ ಪರಿಶೀಲಿಸಿ, ಅವಶ್ಯಕವಿದ್ದಲ್ಲಿ ಸರಿಪಡಿಸುವಂತೆ ಹಾಗೂ ಸೇರಿಸಲು ಸೂಚಿಸಲಾಗಿತ್ತು.

HOD ಮಟ್ಟದಲ್ಲಿ ಡಿಡಿಓಗಳು ವರದಿಸಿದ ಸಮಸ್ಯೆಯನ್ನು/ ವಿನಂತಿಯನ್ನು ತ್ವರಿತವಾಗಿ ಕ್ರಮತೆಗೆದುಕೊಳ್ಳಲಾಗುತ್ತಿಲ್ಲ ಮತ್ತು ಅದರಿಂದ, ESR ಅನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗಿದೆ ಎಂದು ಅನೇಕ ಬಳಕೆದಾರರು ವರದಿ ಮಾಡಿದ್ದಾರೆ. ಆದ್ದರಿಂದ, HRMS-1 ರಲ್ಲಿನ ಅಧಿಕಾರಿ/ ನೌಕರರುಗಳ ಡೇಟಾದಲ್ಲಿನ ತಿದ್ದುಪಡಿಗಳು ಅಥವಾ ನವೀಕರಣಗಳಿಗಾಗಿ ಮಾಡಲಾದ ವಿನಂತಿಯನ್ನು ಮೊದಲ ಆದ್ಯತೆಯ ಮೇಲೆ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ತಮ್ಮಲ್ಲಿ ವಿನಂತಿಸುತ್ತಿದ್ದೇನ.

ಹೆಚ್ಚಿನ ಇಲಾಖೆಗಳು ಈಗಾಗಲೇ HRMS-2 ಗೆ ಸೇರ್ಪಡೆಗೊಂಡಿವೆ. HRMS-2 ರಲ್ಲಿ ಒದಗಿಸಬೇಕಾದ ಸೇವಗಳಿಗಾಗಿ ಅಧಿಕಾರಿ/ ನೌಕರರ ಸೇವಾ ವಿವರಗಳನ್ನು ESR ಗೆ ಬದಲಾಗಿ ಪ್ರಸ್ತುತ HRMS-1 ರಿಂದ ಪಡೆಯಲಾಗುತ್ತಿದೆ. ಭವಿಷ್ಯದಲ್ಲಿ HRMS-1 ಕಾರ್ಯನಿರ್ವಹಿಸುವುದು ನಿಲ್ಲಿಸಿದಾಗ, ಅಧಿಕಾರಿ/ ನೌಕರರ ಡೇಟಾವನ್ನು HRMS-2 ವಿನಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ESR ನಲ್ಲಿ ನೌಕರರ ಸೇವಾ ವಿವರಗಳನ್ನು ತುರ್ತಾಗಿ ನವೀಕರಿಸುವುದು ಬಹಳ ಅವಶ್ಯಕ.

ಮುಖ್ಯ ಕಾರ್ಯದರ್ಶಿಗಳು ಸೂಚಿಸಿದಂತೆ, ಮೂರು ವರ್ಷದೊಳಗೆ ನಿವೃತ್ತರಾಗಲಿರುವ ಅಧಿಕಾರಿ/ನೌಕರರ ESR ಅನ್ನು ತುರ್ತಾಗಿ ತಯಾರಿಸಬೇಕಾಗಿದೆ. ಏಕೆಂದರೆ, ಭವಿಷ್ಯದಲ್ಲಿ AG ಪಿಂಚಣಿ ಉದ್ದೇಶಕ್ಕಾಗಿ ESR ನಿಂದಲೇ Form-7 ನಮೂನೆಯನ್ನು ಸ್ವೀಕರಿಸುತ್ತಾರ. ಹಾಗೂ Digital ESR ಲಗತ್ತಿಸುವಂತೆ ತಿಳಿಸಿರುತ್ತಾರೆ. ಆದ್ದರಿಂದ, ಇವರುಗಳ ESR ನ್ನು ಪ್ರಥಮ ಆದ್ಯತೆಯಲ್ಲಿ ತಯಾರಿಸುವುದು ಅವಶ್ಯಕವಾಗಿದೆ.

ಗ್ರೂಪ್ ಎ ಮತ್ತು ಬಿ ಅಧಿಕಾರಿ/ ನೌಕರರ ಸೇವಾ ವಿವರಗಳನ್ನು AG ಮತ್ತು HRMS-1 ವತಿಯಿಂದ ಪಡೆಯಲಾಗುತ್ತದೆ. ಅಧಿಕಾರಿ/ ನೌಕರರ GER ಸಂಖ್ಯೆಯನ್ನು HRMS- 1 ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ನಂತರ, ಅವರ ESR ಪೂರ್ಣಗೊಳಿಸಬೇಕು.

ಗ್ರೂಪ್ ಎ ಮತ್ತು ಬಿ ಪತ್ರಾಂಕಿತ ಅಧಿಕಾರಿಗಳ ಭೌತಿಕ ಸೇವಾ ಪುಸ್ತಕ ನಿಮ್ಮ ಕಛೇರಿಯಲ್ಲಿ ನಿರ್ವಹಿಸದೆ ಇರುವುದರಿಂದ; ಅದನ್ನು upload ಮಾಡುವ ಸಂದರ್ಭವಿರುವುದಿಲ್ಲ. ಆದುದರಿಂದ, GER ಸಂಖ್ಯೆ ಹೊಂದಿರುವ ಪತ್ರಾಂಕಿತ ಅಧಿಕಾರಿಗಳ ESR ಪರಿಶೀಲನೆಗಾಗಿ ವಿಷಯ ನಿರ್ವಾಹಕರ login ನಲ್ಲಿ ಲಭ್ಯವಿರುತ್ತದೆ. ಮುಂದೆ HRMS-2.0 ಸಂಪೂರ್ಣವಾಗಿ ಅನುಷ್ಠಾನಗೊಂಡ ನಂತರ (April 2026 ರಿಂದ) ESR LIVE, HRMS system ನಲ್ಲೆ ತಯಾರಾಗುತ್ತದೆ ಹಾಗೂ ಇದರಿಂದ AG ಗೆ ಪಿಂಚಣಿ ಮಾಹಿತಿ, TLE ಹಾಗೂ Gratuity & Pension Form-7 ಇವೆಲ್ಲಕ್ಕಾಗಿ ಮಾಹಿತಿ online ನಲ್ಲಿ ನೀಡಲಾಗುವುದು.

ಗ್ರೂಪ್ ಸಿ ಯಿಂದ ಬಿ (ಪತ್ರಾಂಕಿತ) ಹುದ್ದೆಗೆ ಪದೋನ್ನತಿ ಪಡೆದ ಅಧಿಕಾರಿ/ ನೌಕರರ, ಗ್ರೂಪ್ ಸಿ ನಲ್ಲಿ ಇರುವಾಗ ನಿರ್ವಹಿಸಿದ ಭೌತಿಕ ಸೇವಾ ಪುಸ್ತಕವನ್ನು Scan ಮಾಡಿ upload ಮಾಡಬಹುದು. ಅಧಿಕಾರಿ/ನೌಕರರ ಸೇವಾ ವಿವರಗಳನ್ನು ಪರಿಶೀಲಿಸಿ, AG ಯಿಂದ ಪಡೆದ ಮಾಹಿತಿಯೊಂದಿಗೆ ತಾಳೆ ಹೊಂದಿಸಿ, ESR ಅನ್ನು ಪೂರ್ಣಗೊಳಿಸಬೇಕು.

BIG NEWS: State `Government Employees' take note: Important order from the government regarding the implementation of `Sevavahi' in `ESR'!
Share. Facebook Twitter LinkedIn WhatsApp Email

Related Posts

ALERT : ಚಳಿಯಲ್ಲಿ `ತಣ್ಣೀರು ಸ್ನಾನ’ ಮಾಡುವವರೇ ಎಚ್ಚರ : ಹೀಗೆ ಮಾಡುವುದು ಸಾವಿಗೆ ಕಾರಣವಾಗಬಹುದು.!

14/01/2026 10:43 AM2 Mins Read

ಬೆಂಗಳೂರಲ್ಲಿ ಪತ್ನಿಗೆ ವಂಚಿಸಿ ಪ್ರೇಯಸಿಯೊಂದಿಗೆ ಪತಿ ಕಳ್ಳಾಟ : ಪಿಜಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಟೆಕ್ಕಿ!

14/01/2026 10:39 AM1 Min Read

BREAKING : ಬೆಂಗಳೂರಲ್ಲಿ ಮೆಟ್ರೋ ಕಾಮಗಾರಿ ವೇಳೆ ಆಯತಪ್ಪಿ ಬಿದ್ದ ಬೃಹತ್ ಕ್ರೇನ್ : ತಪ್ಪಿದ ಭಾರಿ ಅನಾಹುತ!

14/01/2026 10:31 AM1 Min Read
Recent News

ALERT : ಚಳಿಯಲ್ಲಿ `ತಣ್ಣೀರು ಸ್ನಾನ’ ಮಾಡುವವರೇ ಎಚ್ಚರ : ಹೀಗೆ ಮಾಡುವುದು ಸಾವಿಗೆ ಕಾರಣವಾಗಬಹುದು.!

14/01/2026 10:43 AM

‘ಟಾಯ್ಲೆಟ್ ಮ್ಯಾನರ್ಸ್’ ಗೊತ್ತಿಲ್ಲದಿದ್ದರೆ ಈ ರೈಲು ಹತ್ತಬೇಡಿ! ವಂದೇ ಭಾರತ್ ಪ್ರಯಾಣಿಕರಿಗೆ ಅಧಿಕಾರಿಗಳ ಖಡಕ್ ವಾರ್ನಿಂಗ್

14/01/2026 10:42 AM

ಬೆಂಗಳೂರಲ್ಲಿ ಪತ್ನಿಗೆ ವಂಚಿಸಿ ಪ್ರೇಯಸಿಯೊಂದಿಗೆ ಪತಿ ಕಳ್ಳಾಟ : ಪಿಜಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಟೆಕ್ಕಿ!

14/01/2026 10:39 AM

BREAKING : ಬೆಂಗಳೂರಲ್ಲಿ ಮೆಟ್ರೋ ಕಾಮಗಾರಿ ವೇಳೆ ಆಯತಪ್ಪಿ ಬಿದ್ದ ಬೃಹತ್ ಕ್ರೇನ್ : ತಪ್ಪಿದ ಭಾರಿ ಅನಾಹುತ!

14/01/2026 10:31 AM
State News
KARNATAKA

ALERT : ಚಳಿಯಲ್ಲಿ `ತಣ್ಣೀರು ಸ್ನಾನ’ ಮಾಡುವವರೇ ಎಚ್ಚರ : ಹೀಗೆ ಮಾಡುವುದು ಸಾವಿಗೆ ಕಾರಣವಾಗಬಹುದು.!

By kannadanewsnow5714/01/2026 10:43 AM KARNATAKA 2 Mins Read

ಚಳಿಗಾಲದಲ್ಲಿ ಸ್ನಾನ ಮಾಡುವಾಗ ಅಜಾಗರೂಕತೆಯು ಗಂಭೀರ ಹೃದಯ, ರಕ್ತದೊತ್ತಡ ಮತ್ತು ಚರ್ಮ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ನಂಬುತ್ತಾರೆ.…

ಬೆಂಗಳೂರಲ್ಲಿ ಪತ್ನಿಗೆ ವಂಚಿಸಿ ಪ್ರೇಯಸಿಯೊಂದಿಗೆ ಪತಿ ಕಳ್ಳಾಟ : ಪಿಜಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಟೆಕ್ಕಿ!

14/01/2026 10:39 AM

BREAKING : ಬೆಂಗಳೂರಲ್ಲಿ ಮೆಟ್ರೋ ಕಾಮಗಾರಿ ವೇಳೆ ಆಯತಪ್ಪಿ ಬಿದ್ದ ಬೃಹತ್ ಕ್ರೇನ್ : ತಪ್ಪಿದ ಭಾರಿ ಅನಾಹುತ!

14/01/2026 10:31 AM

SHOCKING : ರಾಜ್ಯದಲ್ಲಿ ಬೀದಿ ನಾಯಿ ದಾಳಿಗೆ ಮತ್ತೊಂದು ಬಲಿ : ಚಿಕಿತ್ಸೆ ಫಲಿಸದೇ 10 ವರ್ಷದ ಬಾಲಕಿ ಸಾವು

14/01/2026 10:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.