ಬೆಂಗಳೂರು : ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ಅನುತ್ತೀರ್ಣ ಆಗುವ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ 10ನೇ ತರಗತಿಗೆ ಪುನರಾರ್ವತಿಸುವ ಕುರಿತು ಉಲ್ಲೇಖ (1) ರಂತೆ ಸರ್ಕಾರದಿಂದ ಆದೇಶ ಹೊರಡಿಲಾಗಿದೆ.
ಸದರಿ ಸರ್ಕಾರದ ಆದೇಶದಂತೆ ಕ್ರಮವಹಿಸಲು ಉಲ್ಲೇಖ (2) ರ ಈ ಕಛೇರಿಯ ಜ್ಞಾಪನ ದಿನಾಂಕ:03-08-2024ರಲ್ಲಿ ತಿಳಿಸಲಾಗಿತ್ತು. ಮುಂದುವರೆದು ಶಾಲೆಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆ ಕುರಿತು ಮಾಹಿತಿ ನೀಡಲು ಸಹ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರವರಿಗೆ ತಿಳಿಸಲಾಗಿದೆ.
ಸದರಿ ವಿಷಯದ ಕುರಿತಾಗಿ ಆಗಿರುವ ಪಗತಿಯನ್ನು ಪರಿಶೀಲಿಸಲು ದಿನಾಂಕ:30.09.2024 ರಂದು ಅಪರಾಹ್ನ 3.00 ಗಂಟೆಗೆ ಮಾನ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಸರೆನ್ಸ್ ಸಭೆ ಏರ್ಪಡಿಸಲಾಗಿದ್ದು ಸದರಿ ಸಭೆಗೆ ಅಗತ್ಯ ಮಾಹಿತಿಗಳೊಂದಿಗೆ ಈ ಕೆಳಕಂಡ Zoom link ಮೂಲಕ ಹಾಜರಾಗಲು ಕೋರಿದೆ.
ಸರ್ಕಾರದ ಆದೇಶದಂತೆ ಕ್ರಮವಹಿಸಿರುವ ಕುರಿತು ಪ್ರಸ್ತುತ ಅನುತ್ತೀರ್ಣ ವಿದ್ಯಾರ್ಥಿಗಳು ಮರುದಾಖಲಾತಿಯಾಗಿರುವ ವರದಿಯನ್ನು ಉಲ್ಲೇಖ:02 ರ ಜ್ಞಾಪನಗಳಲ್ಲಿ ಸೂಚಿಸಿದಂತೆ ನಿಗಧಿತ ನಮೂನೆಯಲ್ಲಿ ದಿನಾಂಕ:27.09.2024ರ ಒಳಗೆ ಈ ಕಛೇರಿಗೆ ಮಾಹಿತಿ ಸಲ್ಲಿಸಲು ಎಲ್ಲಾ ಉಪನಿರ್ದೇಶಕರುಗಳಿಗೆ ತಿಳಿಸಿದೆ.