Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಂಡ್ಯದಲ್ಲಿ KUWJ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನ ಆಚರಣೆ: ಸಮಾಜದ ಸ್ವಾಸ್ತ್ಯ ಕಾಪಾಡಲು ಆದಿಚುಂಚನಗಿರಿ ಸ್ವಾಮೀಜಿ ಕರೆ

17/11/2025 10:11 PM

ನಾಳೆ ಸಾಗರ ನೆಹರೂ ಮೈದಾನದ 70 ಲಕ್ಷದ ವಿವಿಧ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ

17/11/2025 10:01 PM

ನಿಮ್ಗೆ ಮೋಸ ಮಾಡಿದವ್ರ ಮೇಲೆ ದ್ವೇಷವಿದ್ಯಾ.? ಹಾಗಿದ್ರೆ, ಹೀಗೆ ಮಾಡಿ!

17/11/2025 9:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ಅರಣ್ಯ ಒತ್ತುವರಿ ತಡೆಗೆ ಜುಲೈನಿಂದ ಉಪಗ್ರಹ ಕಣ್ಗಾವಲು : ಸಚಿವ ಈಶ್ವರ್ ಖಂಡ್ರೆ
KARNATAKA

BIG NEWS : ರಾಜ್ಯದಲ್ಲಿ ಅರಣ್ಯ ಒತ್ತುವರಿ ತಡೆಗೆ ಜುಲೈನಿಂದ ಉಪಗ್ರಹ ಕಣ್ಗಾವಲು : ಸಚಿವ ಈಶ್ವರ್ ಖಂಡ್ರೆ

By kannadanewsnow5705/12/2024 6:39 AM

ಬೆಂಗಳೂರು : ಹೊಸ ಅರಣ್ಯ ಒತ್ತುವರಿ ತಡೆಗೆ ರೂಪಿಸಿರುವ ಉಪಗ್ರಹ ಕಣ್ಗಾವಲು ವ್ಯವಸ್ಥೆ Forest Cover Change Alert System ಬಳಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಹೊಸದಾಗಿ ಅರಣ್ಯ ಒತ್ತುವರಿಗೆ ಅವಕಾಶ ನೀಡದೆ, ಶೂನ್ಯ ಸಹಿಷ್ಣುತೆ ತಳೆಯುವಂತೆ ಮತ್ತು ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಭೌಗೋಳಿಕ ಪ್ರದೇಶದ ಶೇ.33ರಷ್ಟು ಹಸಿರು ಹೊದಿಕೆ ಇರಬೇಕು. ಆದರೆ ರಾಜ್ಯದಲ್ಲಿ ಶೇ.22ರಷ್ಟು ಹಸಿರು ಹೊದಿಕೆ ಇದೆ. ಇರುವ ಅರಣ್ಯವನ್ನೂ ಒತ್ತುವರಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಈಗಾಗಲೇ ಅಕ್ಷಾಂಶ, ರೇಖಾಂಶ ಆಧಾರಿತ ಜಿಯೋ ರೆಫರೆನ್ಸ್ ಮೂಲಕ ಗುರುತಿಸಲಾಗಿರುವ ಅರಣ್ಯ ಗಡಿಯೊಳಗೆ ಯಾವುದೇ ಒತ್ತುವರಿ ಆಗದಂತೆ ಕರ್ನಾಟಕ ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರ (KSRSAC) ಸಹಯೋಗದಲ್ಲಿ ಸಿದ್ಧಪಡಿಸಲಾಗಿರುವ ಅರಣ್ಯ ಬದಲಾವಣೆ ಮುನ್ನೆಚ್ಚರಿಕಾ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದು ತಿಳಿಸಿದರು.

ಸರ್ಕಾರದ ನಡಾವಳಿಯಂತೆ 2015ರ ಪೂರ್ವದಲ್ಲಿ ಜೀವನೋಪಾಯಕ್ಕಾಗಿ 3 ಎಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿರುವ ಹಾಗೂ ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಬಾಕಿ ಇರುವ ಮತ್ತು ನ್ಯಾಯಾಲಯದ ತಡೆ ಇರುವ ಪ್ರಕರಣ ಹೊರತುಪಡಿಸಿ, 2015ರ ನಂತರ ಆಗಿರುವ ಎಲ್ಲ ಹೊಸ ಒತ್ತುವರಿಗಳಿಗೆ ಸಂಬಂಧಿಸಿದಂತೆ ಉಪಗ್ರಹ ಚಿತ್ರಗಳನ್ನು ತಾಂತ್ರಿಕ ಸಾಕ್ಷ್ಯವಾಗಿ ಉಲ್ಲೇಖಿಸಿ ತೆರವಿಗೆ ಕ್ರಮ ವಹಿಸುವಂತೆ ಸೂಚಿಸಿದರು.

ಏನಿದು ಅರಣ್ಯ ಬದಲಾವಣೆ ಮುನ್ನೆಚ್ಚರಿಕೆ ವ್ಯವಸ್ಥೆ:
ಕಾಡ್ಗಿಚ್ಚು ಕಾಣಿಸಿಕೊಂಡಾಗ ಸಕಾಲದಲ್ಲಿ ಮಾಹಿತಿ ನೀಡುವ ದೂರಸಂವೇದಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಮಾದರಿಯಲ್ಲೇ ಹೊಸ ಅರಣ್ಯ ಒತ್ತುವರಿ ಆದಾಗ ಅಥವಾ ಅರಣ್ಯ ಸ್ವರೂಪ ಬದಲಾದಾಗ ಸಂಬಂಧಿತ ವಲಯ ಅರಣ್ಯಾಧಿಕಾರಿಗೆ ಮಾಹಿತಿ ರವಾನಿಸುವ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ -KSRSAC ಸಹಯೋಗದಲ್ಲಿ ಅಭಿವೃದ್ಧಿ ಪಡಿಸುವಂತೆ ಕಳೆದ ಜೂನ್ ನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದರು.

ಪ್ರಸ್ತುತ ಕೃತಕ ಬುದ್ಧಿಮತ್ತೆ ಮತ್ತು ಉಪಗ್ರಹ ಚಿತ್ರ ಆಧಾರಿತವಾಗಿ ಸಕಾಲದಲ್ಲಿ ಅರಣ್ಯ ಸ್ವರೂಪ ಬದಲಾವಣೆಯ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ಕಳೆದ ಜುಲೈ 1ರಿಂದ ನವೆಂಬರ್ 3ರವರೆಗೆ 167 ಎಚ್ಚರಿಕೆ ಸಂದೇಶ ಬಂದಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ ಮತ್ತು ಕ್ರಮ ವಹಿಸಲಾಗಿದೆ.

ಅರಣ್ಯ ಒತ್ತುವರಿಯಾದರೆ, ಅರಣ್ಯದ ಗಡಿಯೊಳಗೆ ಮರ ಕಡಿತಲೆಯಾದರೆ ಆ ಬಗ್ಗೆ ಇಲಾಖೆಗೆ ಸಂದೇಶ ಬರುತ್ತದೆ. ಅಧಿಕಾರಿಗಳು ಈ ಸಂದೇಶವನ್ನು ಸ್ಥಳೀಯ ಅಧಿಕಾರಿಗಳಿಗೆ ರವಾನಿಸುತ್ತಾರೆ. ಪ್ರಸ್ತುತ ಹಸಿರು ಹೊದಿಕೆಯಲ್ಲಿ21 ದಿನಗಳಲ್ಲಾದ ಬದಲಾವಣೆಯನ್ನು Forest Cover Change Alert System ಗುರುತಿಸುತ್ತದೆ.

ಆಪ್ಟಿಕಲ್ ಮತ್ತು ಮೈಕ್ರೋವೇವ್ ಬ್ಯಾಂಡ್‌ಗಳ ಕುರಿತಂತೆ ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿರುವ ಉಪಗ್ರಹ ಚಿತ್ರಣಗಳನ್ನು ಬಳಸಿ, ಬದಲಾವಣೆ ಪತ್ತೆಗೆ ಅಲ್ಗಾರಿದಮ್ ಅನ್ನು ರನ್ ಮಾಡಲಾಗುತ್ತದೆ. ಅರಣ್ಯ ಹೋದಿಕೆಯಲ್ಲಿ ಬದಲಾವಣೆಗಳನ್ನು ಗುರುತಿಸಿದಾಗ ಈ ಎಚ್ಚರಿಕೆಗಳನ್ನು ಕ್ಷೇತ್ರಮಟ್ಟಕ್ಕೆ ಕಳುಹಿಸಲಾಗುತ್ತದೆ. ಕ್ಷೇತ್ರಮಟ್ಟದಲ್ಲಿ ಬದಲಾವಣೆಯ ಎಚ್ಚರಿಕೆಗಳನ್ನು ಪರಿಶೀಲಿಸಿ ಪ್ರತಿಕ್ರಿಯೆ ನೀಡಲು ಮತ್ತು ಕ್ರಮ ಕೈಗೊಂಡು, ವರದಿಯನ್ನು ಸಲ್ಲಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಈ ವ್ಯವಸ್ಥೆಯು ಕ್ಷೇತ್ರಮಟ್ಟದ ಅಧಿಕಾರಿಗಳಿಗೆ ಅರಣ್ಯ ವ್ಯಾಪ್ತಿಯ ಬದಲಾವಣೆಯನ್ನು ಸಕಾಲಿಕವಾಗಿ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.

ಕಳೆದ ಜುಲೈ 1ರಿಂದ 21ರವರೆಗೆ 28, ಜುಲೈ 22ರಿಂದ ಆಗಸ್ಟ್ 11ರವರೆಗೆ 21, ಆಗಸ್ಟ್ 12 ರಿಂದ ಸೆ.1ರವರೆಗೆ 58, ಸೆ.2ರಿಂದ 22ರವರೆಗೆ 33, ಸೆ.23ರಿಂದ ಅಕ್ಟೋಬರ್ 13ರವರೆಗೆ 14 ಮತ್ತು ಅ.14ರಿಂದ ನ.3ರವರೆಗೆ 13 ಒತ್ತುವರಿ ಅಥವಾ ಅರಣ್ಯ ಬದಲಾವಣೆಯ ಸಂದೇಶಗಳು ಸ್ವೀಕೃತವಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಿನ ಅರಣ್ಯ ಬದಲಾವಣೆ ಆಗಿರುವ ಸಂದೇಶ ಬಂದಿದ್ದು, ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.

BIG NEWS : ರಾಜ್ಯದಲ್ಲಿ ಅರಣ್ಯ ಒತ್ತುವರಿ ತಡೆಗೆ ಜುಲೈನಿಂದ ಉಪಗ್ರಹ ಕಣ್ಗಾವಲು : ಸಚಿವ ಈಶ್ವರ್ ಖಂಡ್ರೆ BIG NEWS: Satellite surveillance to check forest encroachment in state from July: Minister Ishwar Khandre
Share. Facebook Twitter LinkedIn WhatsApp Email

Related Posts

ಮಂಡ್ಯದಲ್ಲಿ KUWJ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನ ಆಚರಣೆ: ಸಮಾಜದ ಸ್ವಾಸ್ತ್ಯ ಕಾಪಾಡಲು ಆದಿಚುಂಚನಗಿರಿ ಸ್ವಾಮೀಜಿ ಕರೆ

17/11/2025 10:11 PM1 Min Read

ನಾಳೆ ಸಾಗರ ನೆಹರೂ ಮೈದಾನದ 70 ಲಕ್ಷದ ವಿವಿಧ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ

17/11/2025 10:01 PM1 Min Read

BIG NEWS: ಜಾತಿಗಣತಿ ವರದಿಯೆಂದು ಗೊಂದಲಕಾರಿ ಮಾಹಿತಿ ಶೇರ್ ಮಾಡಿದ ವ್ಯಕ್ತಿ ವಿರುದ್ಧ ದೂರು ದಾಖಲು

17/11/2025 9:30 PM2 Mins Read
Recent News

ಮಂಡ್ಯದಲ್ಲಿ KUWJ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನ ಆಚರಣೆ: ಸಮಾಜದ ಸ್ವಾಸ್ತ್ಯ ಕಾಪಾಡಲು ಆದಿಚುಂಚನಗಿರಿ ಸ್ವಾಮೀಜಿ ಕರೆ

17/11/2025 10:11 PM

ನಾಳೆ ಸಾಗರ ನೆಹರೂ ಮೈದಾನದ 70 ಲಕ್ಷದ ವಿವಿಧ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ

17/11/2025 10:01 PM

ನಿಮ್ಗೆ ಮೋಸ ಮಾಡಿದವ್ರ ಮೇಲೆ ದ್ವೇಷವಿದ್ಯಾ.? ಹಾಗಿದ್ರೆ, ಹೀಗೆ ಮಾಡಿ!

17/11/2025 9:58 PM

BIG NEWS: ಜಾತಿಗಣತಿ ವರದಿಯೆಂದು ಗೊಂದಲಕಾರಿ ಮಾಹಿತಿ ಶೇರ್ ಮಾಡಿದ ವ್ಯಕ್ತಿ ವಿರುದ್ಧ ದೂರು ದಾಖಲು

17/11/2025 9:30 PM
State News
KARNATAKA

ಮಂಡ್ಯದಲ್ಲಿ KUWJ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನ ಆಚರಣೆ: ಸಮಾಜದ ಸ್ವಾಸ್ತ್ಯ ಕಾಪಾಡಲು ಆದಿಚುಂಚನಗಿರಿ ಸ್ವಾಮೀಜಿ ಕರೆ

By kannadanewsnow0917/11/2025 10:11 PM KARNATAKA 1 Min Read

ಬೆಂಗಳೂರು: ಸಮಾಜದ ಸ್ವಾಸ್ತ್ಯ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನದ…

ನಾಳೆ ಸಾಗರ ನೆಹರೂ ಮೈದಾನದ 70 ಲಕ್ಷದ ವಿವಿಧ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ

17/11/2025 10:01 PM

BIG NEWS: ಜಾತಿಗಣತಿ ವರದಿಯೆಂದು ಗೊಂದಲಕಾರಿ ಮಾಹಿತಿ ಶೇರ್ ಮಾಡಿದ ವ್ಯಕ್ತಿ ವಿರುದ್ಧ ದೂರು ದಾಖಲು

17/11/2025 9:30 PM

ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದಕ್ಕೂ ಮುನ್ನ ಎಚ್ಚರ: ಡಿಜಿಟಲ್‌ ಅರೆಸ್ಟ್‌ ವಂಚನೆಗೆ ಬಲಿಯಾಗದಿರಿ | Digital Arrest Scam

17/11/2025 9:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.