ಮೈಸೂರು : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಂಡರೆ ಭಯ. ಅದೇ ಕಾರಣಕ್ಕೆ ಲೋಕಾಯುಕ್ತ ಎಸ್ಪಿ ಉದೇಶ್ ನಾಪತ್ತೆಯಾಗಿರಬಹುದು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸ್ನೇಹಮಯಿ ಕೃಷ್ಣ ಅವರು, ನೆನ್ನೆ ನಾಪತ್ತೆ ಆಗುವ ಮೂಲಕ ಮಾನ್ಯ ನ್ಯಾಯಾ ಲಯದ ಆದೇಶದ ಪ್ರಕಾರ ಸಿದ್ದರಾಮಯ್ಯ ಮತ್ತು ಇತರರ ವಿರುದ್ದ ಮೊಕದ್ದಮೆ ದಾಖಲು ಮಾಡದೆ, ನಾಪತ್ತೆ ಆಗಿದ್ದ ಮೈಸೂರಿನ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಉದೇಶ್ ರವರು ಈ ದಿನ ಯಾವ ನಿಯಮದ ಪ್ರಕಾರ ಮೊಕದ್ದಮೆ ದಾಖಲು ಮಾಡಬೇಕೆಂದು ಕೇಂದ್ರ ಕಚೇರಿಗೆ ಪತ್ರ ಬರೆದಿದ್ದು, ಅಲ್ಲಿಂದ ಉತ್ತರ ಬಂದ ನಂತರ ಮೊಕದ್ದಮೆ ದಾಖಲು ಮಾಡುವುದಾಗಿ ಹೊಸ ವರಸೆ ತೆಗೆಯುತ್ತಿದ್ದಾರೆ.
ಘಟನೆ ಹಿಂದೆಯೇ ನಡೆದಿರುವುದರಿಂದ, ಕಳೆದ ಡಿಸೆಂಬರ್ ನಲ್ಲೇ ಈ ಸಂಬಂಧ ಶ್ರೀ ಪ್ರದೀಪ್ ರವರು ದೂರು ನೀಡಿರುವುದರಿಂದ ಹಳೆಯ ನಿಯಮದ ಪ್ರಕಾರ ಮೊಕದ್ದಮೆ ದಾಖಲು ಮಾಡಬೇಕಾಗಿದೆ. ಈ ಸಾಮಾನ್ಯ ಜ್ಞಾನ ಸಾಮಾನ್ಯ ವ್ಯಕ್ತಿಯಾದ ನನಗೆ ತಿಳಿದಿದೆ, ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿದಿಲ್ಲದಿ ರುವುದು ಈ ದೇಶದ ದುರಂತ. ಹಿನ್ನೆಲೆಯಲ್ಲಿ ನಾವು ಮಾಡಿಕೊಂಡ ಮನವಿ ಪರಿಗಣಿಸಿ, ಮಾನ್ಯ ನ್ಯಾಯಾಲಯವೂ ಹಳೆಯ ನಿಯಮ ಪ್ರಕಾರ ಮೊಕ ದ್ದಮೆ ದಾಖಲು ಮಾಡಲು ಆದೇಶ ಮಾಡಿದೆ. ಮಾನ್ಯ ನ್ಯಾಯಾಲಯಕ್ಕಿಂತ ದೊಡ್ಡವರಾದ ಲೊಕಾಯುಕ್ತ ಅಧಿಕಾರಿಗಳು, ಬೃಹನ್ನಳೆ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.