ಬೆಂಗಳೂರು : ವಿಧಾನಸಭೆಯಲ್ಲಿ ಮಹತ್ವದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ 2025 ಮಂಡಿಸಲಾಗಿದ್ದು, ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಅನದಿಕೃತ ನಿವೇಶನ, ಕಟ್ಟಡಗಳಿಗೆ ತಾತ್ಕಾಲಿಕ ಖಾತಾ ಸೌಲಭ್ಯ ಕಲ್ಪಿಸಿ ಗ್ರಾಮ ಪಂಚಾಯಿತಿ ತೆರಿಗೆ ವ್ಯಾಪ್ತಿಗೆ ತರಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ 2025 ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಂಗಳವಾರ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದ್ದು, ಸರ್ಕಾರಿ, ಅರಣ್ಯ ಭೂಮಿ, ಸರ್ಕಾರಿ ಒಡೆತನದ ಅಥವಾ ನಿಯಂತ್ರಣ, ಸರ್ಕಾರಿ ಸಂಸ್ಥೆಗಳಿಗೆ ಸೇರಿದ ಭೂಮಿಯನ್ನು ಹೊರತುಪಡಿಸಿದ ಆಸ್ತಿಗಳಿಗೆ ತಾತ್ಕಾಲಿಕ ಖಾತಾ ನೀಡಲಾಗುವುದು.
ಗ್ರಾಮ ಪಂಚಾಯಿತಿ ಮಾದರಿ ಕಟ್ಟಡ ಉಪನಿಧಿಗಳ ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡ ಅಥವಾ ಪರಿವರ್ತನೆಯಾಗದ ಭೂಮಿ ಇಲ್ಲವೇ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿ ಮೇಲಿನ ಅನುಮೋದಿತವಲ್ಲದ ಬಡಾವಣೆ ಅಥವಾ ನಿವೇಶನ ಕಟ್ಟಡ ಸೇರಿ ಪ್ರತಿಯೊಂದು ಕಟ್ಟಡ, ಖಾಲಿ ನಿವೇಶನಗಳಿಗೆ ಬಿ ನಮೂನೆಯ ಇ- ಖಾತಾ ಅನ್ವಯವಾಗಲಿದೆ.