Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಾಜಿ ಶಾಸಕ `ಯಜಮಾನ್ ಮೋತಿ ವೀರಣ್ಣ’ ನಿಧನ | Moti Veeranna passes away

07/02/2026 11:47 AM

BREAKING : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ಮತ್ತೊಂದು ಬಲಿ : ಬಸ್ ಚಕ್ರ ತಲೆಯ ಮೇಲೆ ಹರಿದು ಯುವತಿ ಸಾವು!

07/02/2026 11:26 AM

ರೈಲ್ವೆಯಲ್ಲಿ ಉದ್ಯೋಗದ ಕನಸು ಕಂಡವರಿಗೆ ಗುಡ್ ನ್ಯೂಸ್: ಬರೋಬ್ಬರಿ 1,43,000 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ

07/02/2026 11:23 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಗ್ರಾ.ಪಂ.ಗಳಲ್ಲಿ `ಯುವಜನ ಗ್ರಾಮಸಭೆ’ ನಡೆಸುವುದು ಕಡ್ಡಾಯ : ಸರ್ಕಾರ ಮಹತ್ವದ ಆದೇಶ
KARNATAKA

BIG NEWS : ರಾಜ್ಯದ ಎಲ್ಲಾ ಗ್ರಾ.ಪಂ.ಗಳಲ್ಲಿ `ಯುವಜನ ಗ್ರಾಮಸಭೆ’ ನಡೆಸುವುದು ಕಡ್ಡಾಯ : ಸರ್ಕಾರ ಮಹತ್ವದ ಆದೇಶ

By kannadanewsnow5720/12/2025 8:06 AM

ಬೆಂಗಳೂರು : ಗ್ರಾಮ ಪಂಚಾಯತಿಗಳಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಗ್ರಾಮ ಮಟ್ಟದಲ್ಲಿ ಯುವ ಜನರ ಸಬಲೀಕರಣಕ್ಕಾಗಿ “ಪ್ರತಿ ವರ್ಷ ಜನವರಿ 12 ರಿಂದ 19ನೇ ದಿನಾಂಕದೊಳಗೆ ಯುವಜನ ಗ್ರಾಮ ಸಭೆ” ನಡೆಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಪ್ರತಿ ವರ್ಷ ಜನವರಿ 12 ರಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಯುವಜನೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. 12 ಜನವರಿ 2022 ರಿಂದ 18 ನೇ ಜನವರಿ 2022 ರವರೆಗೆ ರಾಜ್ಯಾದ್ಯಾಂತ “ಯುವ ಸಪ್ತಾಹ” ಆಚರಿಸಲು ಮತ್ತು ವಿಶೇಷ ಯುವ ಗ್ರಾಮ ಸಭೆಯನ್ನು ಕಡ್ಡಾಯವಾಗಿ ಆಯೋಜಿಸುವಂತೆ ಎಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು. ತಾಲ್ಲೂಕು ಪಂಚಾಯತ್ ಮತ್ತು ಎಲ್ಲಾ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಉಲ್ಲೇಖಿತ ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 3-ಹೆಚ್ ರಡಿ ಯುವ ಜನರ ಅಭಿವೃದ್ಧಿಗಾಗಿ ವಿಶೇಷ ಗ್ರಾಮ ಸಭೆಯನ್ನು ಗ್ರಾಮ ಪಂಚಾಯತಿಗಳು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಗ್ರಾಮೀಣ ಜನರ ಜೀವನ ಗುಣಮಟ್ಟವನ್ನು ಉತ್ತಮಪಡಿಸುವಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಯುವ ಜನರನ್ನು ವಿಶೇಷವಾಗಿ ಗುರುತಿಸುವ ಮತ್ತು ಅವರನ್ನು ಗ್ರಾಮದ ಅಭಿವೃದ್ಧಿಯಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಯುವಕರನ್ನು ಒಳಗೊಂಡ ದೂರದೃಷ್ಟಿ ಯೋಜನೆ ಸಂಬಂಧಿತ ಗ್ರಾಮ ಸಭೆಯನ್ನು ಸಂಯೋಜಿಸಿ ಯುವಜನರಿಗೆ ದೊರಕಬಹುದಾದ ಅನುಕೂಲತೆಗಳು ಹಾಗು ಸೌಲಭ್ಯಗಳ ಕುರಿತು ಚರ್ಚಿಸಿ ಮಾಹಿತಿ ನೀಡುವ ಅವಶ್ಯಕತೆ ಇರುವುದರಿಂದ ಯುವ ಜನ ಗ್ರಾಮ ಸಭೆಯನ್ನು ಕರೆಯುವುದು ಅವಶ್ಯವಾಗಿರುತ್ತದೆ.
ಆದುದರಿಂದ ಗ್ರಾಮ ಪಂಚಾಯತಿಗಳಲ್ಲಿ ಯುವ ಜನರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಗ್ರಾಮ ಮಟ್ಟದಲ್ಲಿ ಯುವಜನರ ಸಬಲೀಕರಣಕ್ಕಾಗಿ “ಪ್ರತಿ ವರ್ಷ ಜನವರಿ 12 ರಿಂದ 19ನೇ ದಿನಾಂಕದೊಳಗೆ ಯುವಜನ ಗ್ರಾಮ ಸಭೆ” ಕಡ್ಡಾಯವಾಗಿ ನಡೆಸಲು ಹಾಗೂ ಈ ಸಭೆಯಲ್ಲಿ ಗ್ರಾಮಾಭಿವೃದ್ಧಿಯಲ್ಲಿ ಯುವ ಜನತೆ ತೊಡಗಿಸಿಕೊಳ್ಳುವ ಬಗ್ಗೆ ಮತ್ತು ಅವರುಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಕ್ತ ಅವಕಾಶ ನೀಡಲು ಕ್ರಮ ಕೈಗೊಳ್ಳುವಂತೆ ಎಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್ ಮತ್ತು ಎಲ್ಲಾ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದೆ.

BIG NEWS: It is mandatory to hold `Youth Gram Sabha' in all Gram Panchayats of the state: Government's important order
Share. Facebook Twitter LinkedIn WhatsApp Email

Related Posts

BREAKING : ಮಾಜಿ ಶಾಸಕ `ಯಜಮಾನ್ ಮೋತಿ ವೀರಣ್ಣ’ ನಿಧನ | Moti Veeranna passes away

07/02/2026 11:47 AM1 Min Read

BREAKING : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ಮತ್ತೊಂದು ಬಲಿ : ಬಸ್ ಚಕ್ರ ತಲೆಯ ಮೇಲೆ ಹರಿದು ಯುವತಿ ಸಾವು!

07/02/2026 11:26 AM1 Min Read

BREAKING : ಮೈಸೂರಲ್ಲಿ ಭೀಕರ ಅಪಘಾತ : ಲಾರಿ ಹರಿದು ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು!

07/02/2026 11:23 AM1 Min Read
Recent News

BREAKING : ಮಾಜಿ ಶಾಸಕ `ಯಜಮಾನ್ ಮೋತಿ ವೀರಣ್ಣ’ ನಿಧನ | Moti Veeranna passes away

07/02/2026 11:47 AM

BREAKING : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ಮತ್ತೊಂದು ಬಲಿ : ಬಸ್ ಚಕ್ರ ತಲೆಯ ಮೇಲೆ ಹರಿದು ಯುವತಿ ಸಾವು!

07/02/2026 11:26 AM

ರೈಲ್ವೆಯಲ್ಲಿ ಉದ್ಯೋಗದ ಕನಸು ಕಂಡವರಿಗೆ ಗುಡ್ ನ್ಯೂಸ್: ಬರೋಬ್ಬರಿ 1,43,000 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ

07/02/2026 11:23 AM

BREAKING : ಮೈಸೂರಲ್ಲಿ ಭೀಕರ ಅಪಘಾತ : ಲಾರಿ ಹರಿದು ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು!

07/02/2026 11:23 AM
State News
KARNATAKA

BREAKING : ಮಾಜಿ ಶಾಸಕ `ಯಜಮಾನ್ ಮೋತಿ ವೀರಣ್ಣ’ ನಿಧನ | Moti Veeranna passes away

By kannadanewsnow5707/02/2026 11:47 AM KARNATAKA 1 Min Read

ದಾವಣಗೆರೆ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ (90) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಮೋತಿ ವೀರಣ್ಣ…

BREAKING : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ಮತ್ತೊಂದು ಬಲಿ : ಬಸ್ ಚಕ್ರ ತಲೆಯ ಮೇಲೆ ಹರಿದು ಯುವತಿ ಸಾವು!

07/02/2026 11:26 AM

BREAKING : ಮೈಸೂರಲ್ಲಿ ಭೀಕರ ಅಪಘಾತ : ಲಾರಿ ಹರಿದು ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು!

07/02/2026 11:23 AM

SHOCKING : ಕೋಲಾರದಲ್ಲಿ ಕೆರೆಯಲ್ಲಿ ನವಜಾತ ಗಂಡು ಮಗುವಿನ ಶವ ಪತ್ತೆ!

07/02/2026 11:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.